ಬೆಂಗಳೂರು; ಯೋಗೀಶ್ವರ್ ಅವರ ರಾಜಕಾರಣ ನಮ್ಮ ರಾಜಕಾರಣ ಬೇರೆಬೇರೆ ಎಂದು ಬಿಜೆಪಿ ಕಚೇರಿಯಲ್ಲಿ MLC ಸಿ ಟಿ ರವಿ ಹೇಳಿಕೆ ನೀಡಿದ್ದಾರೆ.
ಸಿ ಪಿ ಯೋಗೇಶ್ವರೇ ಕಾಂಗ್ರೆಸ್ ಸೇರಿದ ಬಗ್ಗೆ ಪ್ರತಿಕ್ರಿಯಿಸಿದ ಅವರು ಯೋಗೀಶ್ವರ್ ಮಹತ್ವಕಾಂಕ್ಷೆ ಇರುವ ರಾಜಕಾರಣಿ. ಸುಧೀರ್ಘ ಅವಧಿಗೆ ಕಾಂಗ್ರೆಸ್ ವಿರೋಧಿಸಿ ರಾಜಕಾರಣ ಮಾಡಿದಾರೆ.ಅವರ ಡಿ ಕೆ ಶಿವಕುಮಾರ್ ನಡುವಿನ ವೈರತ್ವ ಹಾಗೇ ಇದೆ. ಹೋಗಿದಾರೆ… ಹುಲಿ ಬೋನಿಗೆ ಹೋಗಿದಾರೆ.ಒಂದೋ ಹುಲಿಯನ್ನ ಸಾಯಿಸ ಬೇಕು ಅಥವಾ ಹುಲಿ ಸೇರೆ ಹಿಡಿದವನ್ನ ಸಾಯಿಸ ಬೇಕು ನೋಡೋಣ ಎಂದಿದ್ದಾರೆ.
ಯೋಗೀಶ್ವರ್ ಅವರ ರಾಜಕಾರಣ ನಮ್ಮ ರಾಜಕಾರಣ ಬೇರೆ ಬೇರೆ.ಅವರು ವೈಯಕ್ತಿಕ ನೆಲಯಲ್ಲಿ ರಾಜಕಾರಣ ಮಾಡ್ತಾರೆ ನಮ್ಮದು ಸಿದ್ದಾಂತದ ರಾಜಕಾರಣ .ನಮ್ಮದು ಲಾಭ ಆದರೂ ಬಿಜೆಪಿ ನಷ್ಟ ಆದರೂ ಬಿಜೆಪಿನೇ ಎಂದಿದ್ದಾರೆ.
ಇನ್ನು ಬಿಜೆಪಿ ನೆಲೆಯಲ್ಲಿ ನಾವು ಅವರ ಪರವಾಗಿ ದೆಹಲಿಗೆ ಹೋದ್ವಿ .ಆದರೆ ಅವರು ಸಂಬಂಧ ಕಡಿದುಕೊಂಡಿದ್ದಾರೆ.ಪಕ್ಷದ ಒಳಗೆ ನಾವು ಅವರ ಪರವಾಗಿ ರಾಜಕಾರಣ ಮಾಡಿದ್ವಿ.ಆದರೆ ಅವರೇ ಈಗ ಪಕ್ಷದದಿಂದ ಹೊರ ನಡೆದಿದ್ದಾರೆ.ನಮ್ಮ ಅವರ ಸೋದರಿಕೆಯೂ ಇಲ್ಲ ಸಂಬಂದವೂ ಇಲ್ಲ.ನಾವು ಎನ್ ಡಿ ಎ ಯಿಂದ ಏನು ರಾಕಾರಣ ಮಾಡಬೇಕೋ ಅದನ್ನ ಮಾಡ್ತಿವಿ ಎಂದಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ವೀಕ್ ಇದೆ ಎಂಬುದನ್ನ ಡಿಕೆ ಶಿವಕುಮಾರ್ ಒಪ್ಪಿಕೊಂಡಂಗಾಯ್ತು .ಇಲ್ಲಿಯವರೆಗೆ ನಾನೇ ಅಭ್ಯರ್ಥಿ ಅಂತಾ ಡಿಕೆ ಹೇಳ್ತ ಇದ್ರು. ಈಗ ಯೋಗೀಶ್ವರ್ ಅವರನ್ನ ಕರೆದುಕೊಂಡಿದ್ದಾರೆ. ಅಲ್ಲಿಗೆ ಅವರೇ ಒಪ್ಪಿಕೊಂಡಂಗಾಯ್ತು ಎಂದು ವ್ಯಂಗ್ಯ ಮಾಡಿದ್ದಾರೆ.