ಬೆಂಗಳೂರು: ಭಾವನಾತ್ಮಕವಾಗಿ ಸಂಬಂಧ ಇಲ್ಲದಿರೋನು ಇದ್ದರು ಒಂದೆ ಇಲ್ಲದಿದ್ರು ಒಂದೇ ಎಂದು ಮಾಜಿ ಸಚಿವ ಎಸ್ ಟಿ ಸೋಮಶೇಖರ್ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಿಜೆಪಿ ನಾಯಕರು ಭಾಗಿ ಎಂಬ ಸೋಮಶೇಖರ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಸೋಮಶೇಖರ್ ಯಾರು, ಯಾವ ಪಕ್ಷದಲ್ಲಿ ಇದ್ದಾರೆ. ತಾಂತ್ರಿಕವಾಗಿ ಬಿಜೆಪಿ ಇರಬಹುದು. ಭಾವನಾತ್ಮಕವಾಗಿ ಸಂಬಂಧ ಇಲ್ಲದಿರೋನು ಇದ್ದರು ಒಂದೆ ಇಲ್ಲದಿದ್ರು ಒಂದೇ. ಇಂತಹ ರಾಜಕಾರಣಕ್ಕೆ ಡಿಕ್ಷನರಿನಲ್ಲಿ ಹಲವಾರು ಅರ್ಥ ಇದೆ. ಸೋಮಶೇಖರ್ ತಾಕತ್ತು ಇದ್ರೆ ಹೆಸರು ಹೇಳಲಿ ಯಾರು ಅಂತ. ಪ್ರೋಟೋಕಾಲ್ ನ ಬಿಜೆಪಿ ನಾಯಕರು ಹೇಳಿ ಕೊಡಿಸೋಕೆ ಆಗುತ್ತಾ. ರಾಜ್ಯದಲ್ಲಿರುವ ಯಾವ ಸರ್ಕಾರ ಅಧಿಕಾರದಲ್ಲಿ ಇರೋದು.ಕೊಡಿಸಿರೋದು ಯಾರು ಅಂತ ತನಿಖೆ ನಂತರ ಹೊರ ಬರುತ್ತೆ. IMA, ಬಿಟ್ ಕಾಯಿನ್ ತರ ಹಳ್ಳ ಹಿಡಿಯಬಾರದು, ಸಮಗ್ರ ತನಿಖೆ ಆಗಬಾರದಾ. ಮೊದಲು ಎಲ್ಲ ಪ್ರಕರಣ ಬಹಳ ಸೌಂಡ್ ಮಾಡುತ್ವೆ, ಆಮೇಲೆ ಸೌಂಡ್ ಲೆಸ್ ಆಗುತ್ವೆ. ಕೆಜಿ ಗಟ್ಟಲೆ ಚಿನ್ನ ತರೋದು ಸಾಮಾನ್ಯವೇ ಅಲ್ಲ, ಇದು ಕಳ್ಳರ ರಾಜ್ಯವಾಗುತ್ತೆ. ಸೋಮಶೇಖರ್ ನಿಮ್ಮನ್ನ ಗೆಲ್ಲಿಸಿದ್ದು ಬಿಜೆಪಿ ಕಾರ್ಯಕರ್ತರು.ಬಿಜೆಪಿ ವಿರುದ್ಧ ಮಾತನಾಡಬೇಕು ಅನ್ನಿಸಿದ್ರೆ ನೀವು ಬಿಜೆಪಿಗೆ ರಾಜೀನಾಮೆ ಕೊಡಿ, ರಾಜಮಾರ್ಗ ಇದೆ ಹೋಗಿ .ಅಡ್ಡಗೋಡೆ ಮೇಲೆ ದೀಪ ಇಟ್ಟಾಗೆ ಏಕೆ ಮಾತಾಡ್ತೀರಾ? ಎಂದಿದ್ದಾರೆ.
ಸಂಘ ಸಂಸ್ಥೆಗಳಿಗೆ ಅನುದಾನ ಕೊಡಲು ಹಣ ಇಲ್ಲ ಅಂತಾರೆ. ಅರೆಕಾಲಿಕ ಗುತ್ತಿಗೆದಾರರು, ಹಾಲು ಉತ್ಪಾದಕರು ಹಣ ಬಾಕಿ ಉಳಿಸಿಕೊಂಡಿದೆ.ಅಂಗನವಾಡಿ ಶಿಕ್ಷಕರಿಗೆ, ಸಹಾಯಕರಿಗೆ ಕೊಡಲು ಹಣ ಇಲ್ಲ ಅಂತಾರೆ.ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಕೊಡೋಕೆ ಹಣ ಇದೆ.ಕಾಂಗ್ರೆಸ್ ಕಾರ್ಯಕರ್ತರನ್ನ ಮೆರೆಸುವ ಕೆಲಸ ಮಾಡ್ತಿದ್ದಾರೆ.ಜನರ ತೆರಿಗೆ ಹಣದಲ್ಲಿ ಮೋಜು ಮಸ್ತಿ ಮಾಡ್ತಿದ್ದೀರಾ. ನೀವು ಜನರನ್ನ ಬೋಡಿಸೋಕೆ ಇರೋ ಪಾರ್ಟಿ ಅಂತ ಹೇಳಿ. ಸರ್ಕಾರ ಬರೋಕೆ ಕಾರ್ಯಕರ್ತರು ಕಾರಣ ಎಂಬ ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನಿಮ್ಮ ಜೇಬಿನಿಂದ ಹಣ ಕೊಡಿ. ಇದು ಅಯೋಗ್ಯ ಪಾರ್ಟಿ. ಸರ್ಕಾರದ ಹಣ ಯಾಕೆ ಖರ್ಚು ಮಾಡ್ತೀರ. ಜನರ ಹಣವನ್ನ ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜನರ ತೆರಿಗೆಯಲ್ಲಿ ಕಾಂಗ್ರೆಸ್ ಚೇಲಾಗಳಿಗೆ ಹಣ ಕೊಡುತ್ತಿದ್ದಾರೆ; ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ
ಬೆಂಗಳೂರು: ಜನರ ತೆರಿಗೆಯಲ್ಲಿ ಕಾಂಗ್ರೆಸ್ ಚೇಲಾಗಳಿಗೆ ಹಣ ಕೊಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. ವಿಧಾನಸೌಧದಿಂದ ರಾಜಭವನಕ್ಕೆ ಬಿಜೆಪಿ-ಜೆಡಿಎಸ್ ಶಾಸಕರು ಪಾದಯಾತ್ರೆಯಲ್ಲಿ ತೆರಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಗಳ ರದ್ದತಿಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ಪ್ರತಿಭಟನೆ ನಡೆಸಿತು. ವಿಧಾನಸೌಧದಿಂದ ರಾಜಭವನಕ್ಕೆ ಬಿಜೆಪಿ-ಜೆಡಿಎಸ್ ನಿಯೋಗ ಸಾಗಿತು. ಬಳಿರಕ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಿದ್ರು.
ಬಳಿಕ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕಳೆದ ಎರಡು ವರ್ಷದಲ್ಲಿ ಒಂದಿಲ್ಲೊಂದು ತೆರಿಗೆಯನ್ನು ಸರ್ಕಾರ ಹಾಕುತ್ತಿದೆ. ಜನರ ಬಾಳು ಬೀದಿಗೆ ಬಂದಿದೆ. ಸಾಲವನ್ನು ಸಿದ್ದರಾಮಯ್ಯ ತೀರಿಸುತ್ತಾರಾ? ಡಿ.ಕೆ. ಶಿವಕುಮಾರ್ ತೀರಿಸುತ್ತಾರಾ?. ಜನರ ತೆರಿಗೆಯಲ್ಲಿ ಕಾಂಗ್ರೆಸ್ ಚೇಲಾಗಳಿಗೆ ಹಣ ಕೊಡುತ್ತಿದ್ದಾರೆ. ಹಲವು ಇಲಾಖೆಯಲ್ಲಿ ಸಿಬ್ಬಂದಿಗಳಿಲ್ಲ.ಈ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಅಧಿಕಾರಿಗಳಿಗೂ ನೆಮ್ಮದಿ ಇಲ್ಲ. ಇವರು ಎಲ್ಲಿ ಕರೆಯುತ್ತಾರೋ ಅಲ್ಲಿ ಹೋಗಬೇಕು.ಅತಿಥಿ ಉಪನ್ಯಾಸಕರಿಗೆ 12 ಸಾವಿರ, ಇವರು ಫ್ರೀಯಾಗಿ ತಿನ್ನುವವರಿಗೆ 40 ಸಾವಿರ. 60% ಕಮೀಷನ್ ಬಗ್ಗೆ ಗುತ್ತಿಗೆದಾರರು ಹೇಳಿದ್ದಾರಲ್ಲಾ. ಅದರಲ್ಲಿ ನೀವು ಅವರಿಗೆ ದುಡ್ಡು ಕೊಡಿ .ತೆರಿಗೆ ಹಣವನ್ನು ಯಾಕೆ ಕೊಡಬೇಕು?. ಡಿಬಿಟಿ ಮೂಲಕ ಗ್ಯಾರಂಟಿ ಹಣ ಸಂದಾಯ ಆಗುತ್ತಿರುವುದು. ಹೀಗಿದ್ದಾಗ ಈ ಚೇಲಾಗಳ ಕೆಲಸ ಏನು?.ಕಾಲೇಜುಗಳಲ್ಲಿ ಗೌರವ ಶಿಕ್ಷಕರನ್ನು ಕೊಡುತ್ತಿಲ್ಲ, ಹಾಲಿನ ಸಬ್ಸಿಡಿ ಕೊಡುತ್ತಿಲ್ಲ. ಆದರೆ ಇವರಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗಬೇಕು. ವಿಧಾನ ಸೌಧವನ್ನು ಕಾಂಗ್ರೆಸ್ ಆಫೀಸ್ ಮಾಡಿಕೊಂಡಿದ್ದಾರೆ.ಸರ್ಕಾರದ ಕೆಲಸ ಕಾಂಗ್ರೆಸ್ ಕೆಲಸ ಆಗಿದೆ. ಯಾವುದೇ ಕಾರಣಕ್ಕೂ ನಾವು ಇದಕ್ಕೆ ಅವಕಾಶ ಕೊಡಲ್ಲ ಎಂದು ಆಕ್ರೋಶ ಹೊರ ಹಾಕಿದ್ರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ಬಿಜೆಪಿ, ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಸರ್ಕಾರದ ಅಸಾಂವಿಧಾನಿಕ ನಡೆ ಬಗ್ಗೆ ಹೇಳಿದ್ದೇವೆ. ಗ್ಯಾರಂಟಿ ಜಾರಿ ಸಮಿತಿಗಳನ್ನು ಅಸಾಂವಿಧಾನಿಕವಾಗಿ ರಚಿಸಿರುವುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ.ಇವರಿಂದ ಶಾಸಕರ ಹಕ್ಕುಗಳು ಮೊಟಕು ಆಗುತ್ತಿವೆ.ಸರ್ಕಾರದಿಂದ ವೇತನ ಕೊಡಲಾಗುತ್ತಿದೆ. ಸರ್ಕಾರಕ್ಕೆ ತಿಳಿ ಹೇಳುವ ಕೆಲಸ ಮಾಡಿ ಅಂತ ಮನವಿ ಮಾಡಿದ್ದೇವೆ.ನನ್ನ ಕ್ಷೇತ್ರದಲ್ಲೇ ಗ್ಯಾರಂಟಿ ಸಮಿತಿ ಅಧ್ಯಕ್ಷರು ಸಚಿವರ ಮೂಲಕ ಹಸ್ತಕ್ಷೇಪ ಮಾಡುತ್ತಿದ್ದಾರೆ, ಶಾಸಕರ ಹಕ್ಕುಚ್ಯುತಿ ಆಗಿದೆ.ಇದರ ಬಗ್ಗೆ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತಿವೆ ಎಂದರು.