ಮೈಸೂರಿಗೆ ಬಿಜೆಪಿ ಮುಡಾ ಪಾದೆಯಾತ್ರೆ ಹಿನ್ನೆಲೆ ನವ ದೆಹಲಿಯಲ್ಲಿ ಬಿಜೆಪಿ ನಾಯಕರು ಸುದ್ದಿಗೋಷ್ಟಿ ನಡೆಸಿದರು.ಸುದ್ದಿಗೋಷ್ಟಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ರಾಧಾಮೋಹನ್ ದಾಸ್ ಅಗರ್ವಾಲ್ ರಾಜ್ಯ ಕಾಂಗ್ರೆಸ್ ಸರಕಾರ ಅಸಫಲ ಸರಕಾರ.ಬಡವರನ್ನು ಲೂಟಿ ಮಾಡುತ್ತಿದ್ದಾರೆ.ಇದೇ ಕಾರಣಕ್ಕೆ ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ.ಹಗಲು ದರೋಡೆ ಮಾಡಿ ಭ್ರಷ್ಟಾಚಾರ ಮಾಡುತ್ತಿದ್ದಾರೆ.14 ಸೈಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಅಕ್ರಮವಾಗಿ ಪಡೆದಿದ್ದಾರೆ.4000 ಕೋಟಿ ರೂಪಾಯಿ ಹಗಣರವಾಗಿದೆ.ಆದಿವಾಸಿ ಹಣವನ್ನು ಲೂಟಿ ಮಾಡಿದ್ದಾರೆ.ಚುನಾವಣೆಯಲ್ಲಿ ಬಳಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.ಜನರಲ್ಲಿ ಆಕ್ರೋಶವಿದೆ, ಯಾವಾಗ ಬೇಕಿದ್ರೂ ಕಟ್ಟೆಯೊಡೆಯಬಹುದು ಎಂದಿದ್ದಾರೆ,
ಇನ್ನು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನಾವು ಎರಡು ಪಕ್ಷಗಳು ಆಗಸ್ಟ್ 3ರಂದು ಪಾದಯಾತ್ರೆ ಮಾಡಲಿದ್ದೇವೆ ಎಂದರು. ಅಲ್ಲದೇ ಬಸವರಾಜ್ ಯತ್ನಾಳ ಪ್ರತ್ಯೇಕ ಸಭೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಮ್ಮದು ದೊಡ್ಡ ಪರಿವಾರ.ದೊಡ್ಡ ಪರಿವಾರದಲ್ಲಿ ಸಣ್ಣ ಪುಟ್ಟ ಮಾತುಗಳಿಗೆ ಮಾನ್ಯತೆ ಕೊಡಬಾರದು.ರಾಜ್ಯಮಟ್ಟದ ಹೋರಾಟ. ರಾಷ್ಟ್ರೀಯ ನಾಯಕರು ಭಾಗಿಯಾಗಲ್ಲ.ಹೈಕಮಾಂಡ್ ಹಸ್ತಕ್ಷೇಪ ಮಾಡಲ್ಲ.ರಾಜ್ಯ ಸಂಘಟನೆ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ಶನಿವಾರದಿಂದ ಪಾದಯಾತ್ರೆ ಆರಂಭವಾಗಲಿದೆ.ಎನ್ ಡಿಎ ಪಕ್ಷಗಳಿಂದ ಪಾದಯಾತ್ರೆ ಮಾಡಲಿವೆ.ಸಂವಹನದ ಕೊರತೆಯಿಂದ ಒಂದಷ್ಟು ಗೊಂದಲಾಗಿತ್ತು.ಯಾವುದೇ ಗೊಂದಲವಿಲ್ಲದೆ ಪಾದಯಾತ್ರೆ ನಡೆಯಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಶ್ರ ಬಿ ವೈ ವಿಜಯೇಂದ್ರ ಮಾತನಾಡಿ ಪಾದಯಾತ್ರೆ ಸಂಘಟಿಸುವುದು ವ್ಯಕ್ತಿಯಲ್ಲ ಪಕ್ಷ.ಪ್ರೀತಂಗೌಡ ಅಥವಾ ಯಾರೇ ಆಗಲಿ ವ್ಯಕ್ತಿ ಮುಖ್ಯವಲ್ಲ.ಯಾವುದೆ ಓರ್ವ ವ್ಯಕ್ತಿಯನ್ನು ನಾವು ಆಹ್ವಾನಿಸಲ್ಲ. ಸದನದಲ್ಲಿ ಸಿಎಂ ಭ್ರಷ್ಟಾಚಾರ ಆಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.4ಸಾವಿರ ಕೋಟಿರೂ ಬೆಲೆಬಾಳುವ ನಿವೇಶನ ಕೊಟ್ಟಿದ್ದಾರೆ.ಮೂಡಾ ಗೆ ನಷ್ಟವಾಗಿದೆ.ಸಣ್ಣಪುಟ್ಟ ಗೊಂದಲ ಇದ್ದರೂ ಕೂಡ ಪಾದಯಾತ್ರೆ ನಡೆಯಲಿದೆ.ಶನಿವಾರ ಬೆಳಗ್ಗೆ 8-30ಕ್ಕೆ ಪಾದಯಾತ್ರೆ ಆರಂಭವಾಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಾರಸ್ವಾಮಿ ಮಾಡಲಿದ್ದಾರೆ ಎಂದಿದ್ದಾರೆ.
ಪಾದಯಾತ್ರೆಗೆ ಸಂಬಂಧಿಸಿದ ಮನಸ್ತಾಪಗಳು ಬಗೆಹರಿದಿವೆ; ದೆಹಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ
ಇನ್ನು ನಿನ್ನೆ ಪಾದಯಾತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಇಂದು ತಣ್ಣಗಾಗಿದ್ದಾರೆ. ದೆಹಲಿಯಲ್ಲಿ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕೆಲವು ಸಣ್ಣಪುಟ್ಟ ವಿಚಾರದಲ್ಲಿ ಮುಕ್ತವಾಗಿ ಚರ್ಚೆ ಮಾಡಿದ್ದೇವೆ.ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಹೋಗಬೇಕೆಂದೇ ಕಳೆದ ಒಂದು ವರ್ಷದ ಹಿಂದೆ ಒಂದಾಗಿದ್ದೆವು.ಕೇವಲ ಪ್ರೀತಂಗೌಡ ನಮ್ಮ ಸಮಸ್ಯೆಯಲ್ಲ.ಅದೊಂದು ರೀತಿಯ ಉದಾಹರಣೆಗೆಯಷ್ಟೆ ಹೇಳಿದೆ.ಪಾದಯಾತ್ರೆಯನ್ನ ಬಿಜೆಪಿಯ ಕಾರ್ಯಕ್ರಮದ ರೀತಿಯಲ್ಲಿ ಬಿಂಬಿಸೊದಕ್ಕೆ ಹೋಗಿದ್ರು.ಪ್ರೀತಂ ಗೌಡ ಎಂಬ ಒಂದೇ ಕಾರಣಕ್ಕೆ ತೊಂದರೆಯಾಗಿಲ್ಲ.ಹಲವು ರೀತಿಯ ತಪ್ಪುಗಳಾಗಿದ್ವು, ಅದನ್ನೆಲ್ಲ ಕುಳಿತು ಸರಿಪಡಿಸೋ ಕೆಲಸವಾಗಿದೆ ಎಂದಿದ್ದಾರೆ.