ಬೆಂಗಳೂರು; ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆಕ್ರೋಶ ಹೊರ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆಕ್ರೋಶ ಹೊರ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರ ಬರೆಯೋದನ್ನ ಬಿಟ್ಟು, ಸೈಟ್ ಮರುಳಿಸುವ ಕುರಿತು ಪತ್ರ ಬರೆಯಲಾಗಿದೆ. ನಿಮ್ಮ ಪತ್ನಿ ಬರೆದಿರೋ ಪತ್ರ ತನಿಖೆಯನ್ನ ನಿಲ್ಲಿಸೋದಿಲ್ಲ.ಈ ಮೂಲಕ ನೀವು ಭ್ರಷ್ಟಾಚಾರ ಮಾಡಿದ್ದು ಬಹಿರಂಗಗೊಂಡಿದೆ ಎಂದಿದ್ದಾರೆ.ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಸೈಟ್ ವಾಪಸ್ ನೀಡುತ್ತಿದ್ದೀರಿ? ಅದು ಕೂಡ ಹೈಕೋರ್ಟ್, ಸ್ಪೇಷಲ್ ಕೋರ್ಟ್ ಹಾಗೂ ಇಡಿ ಕೇಸ್ ದಾಖಲಿಸಿದ ಮೇಲೆ ಪತ್ರ ಬರೆಯುತ್ತೀರಿ.ಈಗ ರಾಜೀನಾಮೆ ನೀಡುವ ಕಾಲ ಬಂದಿದೆ, ಪತ್ರ ಬರೆದಿರೋದು ಈಗ ಉಪಯೋಗ ಇಲ್ಲ ಎಂದಿದ್ದಾರೆ.
ಇದು ನಿಮ್ಮ ತಪ್ಪಿನ ಪರೀಕ್ಷೆ ಯಾಗಿದೆ.ಕರ್ನಾಟಕದಲ್ಲಿ ಹಲವಾರು ಹಗರಣ ನಡೆದರೂ ಕಾಂಗ್ರೆಸ್ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.ರಾಹುಲ್ ಗಾಂಧಿ ಇದಕ್ಕೆ ಉತ್ತರ ನೀಡಬೇಕಾಗಿದೆ.ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯೋದಕ್ಕೆ ಯಾವುದೇ ನೈತಿಕತೆ ಇಲ್ಲ ಇಲ್ಲ ಎಂದು ಅವರು ಹೇಳಿದ್ದಾರೆ.
ರಾಜೀನಾಮೆ ಕೇಳೋದು ಬಿಟ್ಟು ಬಿಜೆಪಿಯವರಿಗೆ ಬೇರೇನೂ ಕೆಲಸ ಇಲ್ಲ; ಬಿಜೆಪಿಯವರ ವಿರುದ್ಧ ಎಸ್ ಟಿ ಸೋಮಶೇಖರ್ ವಾಗ್ದಾಳಿ
ಬೆಂಗಳೂರು; ರಾಜೀನಾಮೆ ಕೇಳೋದು ಬಿಟ್ಟು ಬಿಜೆಪಿಯವರಿಗೆ ಬೇರೇನೂ ಕೆಲಸ ಇಲ್ಲ ಎಂದು ಬಿಜೆಪಿಯವರ ವಿರುದ್ಧ ಮಾಜಿ ಸಚಿವ ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಇನ್ನೇನು ಕೆಲಸ ಇದೆ ಹೇಳಿ?. ರಾಜೀನಾಮೆ ಕೇಳೋದು ಬಿಟ್ಟು ಬಿಜೆಪಿಯವರಿಗೆ ಬೇರೇನೂ ಕೆಲಸ ಇಲ್ಲ.ಸಿದ್ದರಾಮಯ್ಯ ಅವರ ನಲವತ್ತು ವರ್ಷದ ರಾಜಕೀಯದಲ್ಲಿ ಅವರು ಒಂದೇ ಒಂದು ಕಪ್ಪು ಚುಕ್ಕೆ ಹೊಂದಿಲ್ಲ. ಹಾಗಿದ್ರೂ ಯಾಕೆ ಅವರ ರಾಜೀನಾಮೆ ಕೇಳಬೇಕು. ಬಿಜೆಪಿಯವರು ಮೊದಲು ಯತ್ನಾಳ್ ಮಾಡಿರುವ ಆರೋಪಕ್ಕೆ ಉತ್ತರ ಕೊಡಲಿ.ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಉತ್ತರ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಮುಡಾದಿಂದ ಸಿದ್ದರಾಮಯ್ಯ ಮಾತ್ರ ಸೈಟು ಪಡೆದಿದ್ದಾರಾ?ಬಿಜೆಪಿಯವರು ಯಾರೂ ತಗೊಂಡಿಲ್ವಾ?ಬಿಜೆಪಿಯ ಶಾಸಕರು, ಮುಖಂಡರು ಯಾರೂ ತಗೊಂಡಿಲ್ವಾ?ಸಿದ್ದರಾಮಯ್ಯ ಕಾನೂನು ವ್ಯಾಪ್ತಿಯಲ್ಲೇ ಬದಲಿ ನಿವೇಶನ ಪಡೆದಿದ್ದಾರೆ.ಬಿಜೆಪಿ ಕಾಲದಲ್ಲಿ ಸೈಟು ಕೊಟ್ಟಿರೋದು, ಆಗಲೇ ಪರಿಶೀಲಿಸಿ ವಾಪಸ್ ಪಡ್ಕೋಬಹುದಿತ್ತಲ್ಲಾ ಎಂದು ಎಸ್ ಟಿ ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯನವರ ರಾಜೀನಾಮೆ ಬಿಟ್ಟು ಅಭಿವೃದ್ಧಿ ಬಗ್ಗೆ ಬಿಜೆಪಿ ಯಾವತ್ತಾದರೂ ಮಾತನಾಡಿದ್ದಾರೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ.50:50 ಅನುಪಾತದಲ್ಲಿ ಸೈಟುಗಳನ್ನು ಮುಡಾದಿಂದ ಸಿಎಂ ಧರ್ಮಪತ್ನಿ ಗೆ ಒಬ್ಬರಿಗೇ ಕೊಟ್ಟಿಲ್ಲ. ಅದನ್ನು ನೂರಾರು ಜನಕ್ಕೆ ಆ ರೀತಿ ಕೊಟ್ಟಿದ್ದಾರೆ. ಮುಡಾದಲ್ಲಿ ಸಾವಿರಾರು ಸೈಟುಗಳನ್ನು ಕೊಟ್ಟಿದ್ದಾರೆ.ಕಾನೂನು ವಿರುದ್ಧವಾಗಿ ಇವರೊಬ್ಬರಿಗೇ ಕೊಟ್ಟಿದ್ದಿದ್ರೆ ಟಾರ್ಗೆಟ್ ಮಾಡಬಹುದಿತ್ತು. ಪ್ರತೀ ಬೋರ್ಡ್ ಸಭೆಯಲ್ಲಿ ಸರ್ಕಾರ ಆದೇಶ ಆಗಿದೆ ಕೊಟ್ಟಿದ್ದಾರೆ.ಈ ಸೈಟುಗಳನ್ನು ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ಆರೋಪಿಸಿದ್ದಾರೆ.
ತಮ್ಮ ಯಜಮಾನರಿಗೆ ಕಿರಿಕಿರಿ ಆಗ್ತಿದೆ ಅಂತ ಈ ಸೈಟುಗಳನ್ನು ವಾಪಸ್ ಕೊಟ್ಟಿದ್ದಾರೆ.ಇದು ತಡವಾಗಿರಬಹುದು ,ಆದರೂ ಪರವಾಗಿಲ್ಲ ವಾಪಸ್ ಕೊಟ್ಟಿದ್ದಾರೆ.ಕಾನೂನು ಬಾಹಿರವಾಗಿದ್ದರೆ ಅವತ್ತೇ ಸರ್ಕಾರ ರಿಜೆಕ್ಟ್ ಮಾಡಬಹುದಿತ್ತು.ಬಿಜೆಪಿ ಸರ್ಕಾರ ಇದ್ದಾಗ ಸೈಟ್ ಕೊಟ್ಟಿದ್ದು ಸಿದ್ದರಾಮಯ್ಯ ಅವಾಗ ಸಿಎಂ ಆಗಿರಲಿಲ್ಲ ಕಾಂಗ್ರೆಸ್ ಸರ್ಕಾರ ಇರಲಿಲ್ಲ.ಬಿಜೆಪಿಯವರಿಗೆ ಬೇರೆ ಏನು ಕೆಲಸ ಇಲ್ಲ ಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ.ಸಿದ್ದರಾಮಯ್ಯನವರ ರಾಜಕೀಯದಲ್ಲಿ ಒಂದೇ ಒಂದು ಕಳಂಕ ಇಲ್ಲ.ಬೇಕು ಅಂತಾನೇ ಸಿದ್ದರಾಮಯ್ಯನವರಿಗೆ ಕಳಂಕ ಮತ್ತು ಅವರ ಧರ್ಮಪತ್ನಿಗೆ ಕಳಂಕ ತರಲು ಇವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.ಸಿದ್ದರಾಮಯ್ಯನವರ ರಾಜೀನಾಮೆ ಬಿಟ್ಟು ಅಭಿವೃದ್ಧಿ ಬಗ್ಗೆ ಬಿಜೆಪಿ ಯಾವತ್ತಾದರೂ ಮಾತನಾಡಿದ್ದಾರೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.