ಮನೆ Latest News ಬಿಜೆಪಿ ನಾಯಕರಿಗೆ ಸಿಬಿಐ ಮನೆಯೊಳಗಿನ ಸರಕಿನಂತಾಗಿದೆ ; ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ

ಬಿಜೆಪಿ ನಾಯಕರಿಗೆ ಸಿಬಿಐ ಮನೆಯೊಳಗಿನ ಸರಕಿನಂತಾಗಿದೆ ; ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ

0

ಬೆಂಗಳೂರು; ಬಿಜೆಪಿ ನಾಯಕರಿಗೆ ಸಿಬಿಐ ಮನೆಯೊಳಗಿನ ಸರಕಿನಂತಾಗಿದೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.

ಸಿ ಟಿ ರವಿ ಕೇಸ್ ಪ್ರಭಾವ ಹಿನ್ನೆಲೆ ಸಿಬಿಐ ತನಿಖೆಗೆ ಒತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಬಿಜೆಪಿ ನಾಯಕರಿಗೆ ಸಿಬಿಐ ಮನೆಯೊಳಗಿನ ಸರಕು ಅಂತಾಗಿದೆ. ಮನೆ ಕೆಲಸದವರನ್ನ ಉಪಯೋಗಿಸುವ ರೀತಿ ಉಪಯೋಗಿಸುತ್ತಿದ್ದಾರೆ. ನಡೆದ ಘಟನೆ ಬಿಜೆಪಿಗೆ ಶೋಭೆ ತರುತ್ತದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಟಿ ರವಿ ಪದೇ ಪದೇ ಹೆಣ್ಣುಮಕ್ಕಳು ಬಗ್ಗೆ ಮಾತಾಡಿದ್ದಾರೆ. ಅವರ ಸಂಸ್ಕೃತಿ ಎಲ್ಲಿ ಹೋಯಿತು? ಇದೇನಾ ಆರ್ ಎಸ್ ಎಸ್ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕರು ಮಹಿಳೆಯರ ಜೊತೆಗಿನ ನಡುವಳಿಕೆ ಹೇಗಿದೆ? ಅವರ ಮನೆಯ ಮಹಿಳೆಯರಿಗೆ ಹೀಗೆ ಗೌರವ ಕೊಡುತ್ತಾರಾ? ಈಗಲಾದರೂ ಇದೆಲ್ಲದಕ್ಕೂ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಒಬ್ಬರೇ ಒಬ್ಬ ನಾಯಕ ಈ ರೀತಿಯ ಹೇಳಿಕೆ ಖಂಡಿಸಲಿಲ್ಲ. ದಾಖಲೆಗಳಿದ್ದರೂ ಕೂಡ ಬೇರೆ ವಿಚಾರಗಳ ಪ್ರಚಾರವಾಗ್ತಿದೆ. ಮಹಿಳಾ ಕುಲಕ್ಕೆ ಆದ ಅಪಮಾನಕ್ಕೆ ಕ್ಷಮೆಯಾಚಿಸಲಿಲ್ಲ. ಅವರಿಗೆ ಬೆಂಬಲ ಕೊಡುವುದು ಎಷ್ಟು ಸರಿ? ವಿರೋಧ ಪಕ್ಷದ ನಾಯಕರು ಈ ರೀತಿಯ ನಡುವಳಿಕೆ ತೋರಿಸುವ ಮೂಲಕ ಕರ್ನಾಟಕ ಗೌರವ ಕಡಿಮೆ ಮಾಡಿದಂತಾಗುತ್ತದೆ. ಕನ್ನಡಿಗರು ಸುಸಂಸ್ಕೃತರು ಎನ್ನುವ ಭಾವನೆ ಹೋಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ಒಂದಾದ ಮೇಲೆ ಒಂದು ಘಟನೆ ಆಗುತ್ತಲೇ ಇದೆ. ಎಲ್ಲೋ ಒಂದು ಕಡೆ ಮೌಲ್ಯಗಳು ಕುಸಿತ ಆಗುತ್ತಿದೆ. ಓಲೈಕೆ ರಾಜಕಾರಣ ಹೆಚ್ಚಾಗುತ್ತದೆ ಎಂದಿದ್ದಾರೆ.

ಇನ್ನು ಇದೇ ವೇಳೆ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅವರವರ ನಡುವೆ ವಾಗ್ವಾದ ಆಗಿದೆ. ಅದರ ಬಗ್ಗೆ ಬಿಟ್ಟು ನೀವು ರವಿ ಬಂಧನ ಬಗ್ಗೆ ಸುದ್ದಿ ಮಾಡ್ತಿದ್ದಾರೆ. ಸಿಟಿ ರವಿ ಏನೇನೋ ಹೇಳ್ತಾರೆ, ಅವರು ಕ್ಷಮೆ ಕೇಳಬೇಕಿತ್ತು. ಅವರ ಮನೆಯಲ್ಲಿಯೂ ತಾಯಿ ಇದ್ದಾರೆ, ಮಕ್ಕಳಿದ್ದಾರೆ. ಅವರು ಕೂಡ ತಾಯಿ ಗರ್ಭದಿಂದಲೇ ಬಂದಿದ್ದಾರೆ. ಬೇರೆ ಯಾವ ರೀತಿ ಹುಟ್ಟಿ ಬಂದಿದ್ದಾರೆಯೇ?. ಕರ್ಣನ ರೀತಿ ಬೇರೆ ಹೇಗೋ ಹುಟ್ಟಿ ಬಂದಿದ್ದಾರೆ ಏನೋ?. ಮೋದಿ ಅವರು ದೈವಾಂಶಸಂಬೂತ ಹುಟ್ಟಿ ಬಂದಿದ್ದೇನೆ ಎಂದಿದ್ದರು. ಅದೇ ರೀತಿ ಸಿಟಿ‌ ರವಿ ಹುಟ್ಟಿ ಬಂದಿರಬೇಕು ಎಂದು ಸಿಟಿ‌ ರವಿ ವಿರುದ್ಧ ಡಿಕೆ ಸುರೇಶ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ನಾಯಕರ ಮೇಲಿನ ಎಲ್ಲ ಪ್ರಕರಣಗಳ ಬಗ್ಗೆ ಸುದ್ದಿ ಮಾಡಿ ಎಂದ ಅವರು ಸಿಟಿ ರವಿಯನ್ನ ಶೂಟೌಟ್ ಮಾಡ್ತಿದ್ದರು ಜೋಶಿ ಹೇಳಿಕೆಗೆ ಅಂಬೇಡ್ಕರ್ ಮೇಲಿನ ಹೇಳಿಕೆ ಮುಚ್ಚಿ ಹಾಕಲು ಕುತಂತ್ರ ಮಾಡ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಬಿಟ್ಟು ಸಿಟಿ ರವಿ ಅವರ ಬಗ್ಗೆ ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.

ಡಿ ಕೆ ಶಿವಕುಮಾರ್ ಅವರಿಂದ  ಕೊಲೆ ಬೆದರಿಕೆಯಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ರಾಜ್ಯ ಪೊಲೀಸ್ ಇಲಾಖೆ ನಂಬಿಕೆ ಇಲ್ಲ ಅಂದ್ರೆ ಎಸ್‌ಪಿಜಿ ಬಳಕೆ ಮಾಡಲಿ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಎಸ್‌ಪಿಜಿ ತೆಗೆದುಕೊಂಡು ಓಡಾಡಲಿ. ಯಾರ ಮೇಲೆ ಬೇಕಾದರೂ ಗುಂಡು ಹಾರಿಸಿಕೊಂಡು ಓಡಾಡಲಿ ಎಂದರು . ಇದೇ ವೇಳೆ ಮಾತನಾಡಿದ ಅವರು ಗಾಂಧೀಜಿಯವರು ಓಡಾಡಿದ ದಿನವನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮ ಮಾಡ್ತಿದ್ದೇವೆ. ದೇಶದ ಹಲವಾರು ನಾಯಕರು ಬರುತ್ತಿದ್ದಾರೆ. ಸಾರ್ವಜನಿಕ ಸಭೆಯನ್ನು ಪಕ್ಷ ಆಯೋಜನೆ ಮಾಡಿದೆ. ಸುವರ್ಣಸೌಧದ ಎದರು ಗಾಂಧಿ ಪ್ರತಿಮೆ ಉದ್ಘಾಟನೆಯನ್ನು ಸರ್ಕಾರದಿಂದ ಮಾಡುತ್ತಿದ್ದಾರೆ ಎಂದರು.

ಪದೇ ಪದೇ ಹೆಣ್ಮಕ್ಕಳ ಬಗ್ಗೆ ಲಘುವಾಗಿ ಮಾತನಾಡ್ತಾರೆ. ಬಿಜೆಪಿಯ ಸಂಸ್ಕೃತಿ ಎಲ್ಲೋಯ್ತು. ಆರ್‌ಎಸ್‌ಎಸ್‌ ಹೇಳಿಕೊಟ್ಟಿರುವ ಸಂಸ್ಕೃತಿ ಇದೆನಾ ..? ಪದೇ  ಹೆಣ್ಮಕ್ಕಳ ಬಗ್ಗೆ ಸಿರೀಸ್ ಆಫ್ ಆರ್‌ಎಸ್‌ಎಸ್ ನಾಯಕರು  ಹೇಗೆ ನಡೆದುಕೊಂಡಿದ್ದಾರೆ ಗೊತ್ತಿಲ್ವಾ. ಅವರು ತೋರುವ ನಡವಳಿಕೆ ರೀತಿ ನೀತಿ ನೋಡಿದರೆ ಅವರ ಹೆಂಡತಿ ,ತಾಯಿ ,ಮಕ್ಕಳಿಗೂ ಗೌರವ ಕೊಡುವುದಿಲ್ಲ ಅನಿಸುತ್ತೆ. ಸಂಸ್ಕೃತಿ ತರಬೇತಿ ಮಾಡುವ ಆರ್‌ಎಸ್‌ಎಸ್‌ನವ್ರು ಈಗಲಾದರೂ ಕಡಿವಾಣ ಹಾಕಬೇಕು. ಬಿಜೆಪಿಯಲ್ಲಿ ಲಂಗುಲಗಾಮಿಲ್ಲ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ದೇವೆಗೌಡ್ರು ಹಾಸನ ಹೆಣ್ಮಕ್ಕಳು ಕಣ್ಣೀರುಹಾಕಿದಾಗ ನೋವು ಪಡಲಿಲ್ಲ. ಪಾಪ ರವಿ ಕೇಸ್‌ನಲ್ಲಿ ನೋವು ಪಟ್ಟಿದ್ದಾರೆ ಎಂದು ಹೆಚ್‌ಡಿಡಿಗೆ ಮಾಜಿ ಸಂಸದ ಡಿ‌.ಕೆ.ಸುರೇಶ್ ಟಾಂಗ್ ಕೊಟ್ಟಿದ್ದಾರೆ.

ಸಿ.ಟಿ.ರವಿಯಂತೆ ನನಗೂ ಮಾತನಾಡೋಕೆ ಬರುತ್ತೆ. ಮೊದಲು ರಾಜ್ಯದ ಮಹಿಳೆಯರ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದ್ದಾರೆ.