ಬೆಂಗಳೂರು: ಯತ್ನಾಳ್ ಉಚ್ಚಾಟನೆಗೆ ಬಿ.ವೈ. ವಿಜಯೇಂದ್ರ ಆಪ್ತರು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಜೊತೆ ಆಪ್ತ ಮಾಜಿ ಶಾಸಕರು ಸಭೆ ನಡೆಸಿದ್ರು.
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್ ನಾವು ಸುಮಾರು 50 ಜನರು ನಿನ್ನೆ, ಮೊನ್ನೆ ಪ್ರವಾಸ ಮಾಡಿ,ಇವತ್ತು ಬಂದು ಯಡಿಯೂರಪ್ಪ ಭೇಟಿ ಮಾಡಿದ್ದೇವೆ.ಎರಡು ದಿನಗಳ ಕಾಲ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದರು.ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಕೆಲವರು ಮಾತಾಡ್ತಿದ್ರು.ಇವರ ವಿರುದ್ಧ ನೀವು ಪ್ರವಾಸ ಮಾಡಿದ್ದು ಸರಿ ಎಂದಿದ್ದರು.ಕಾರ್ಯಕರ್ತರು ಯತ್ನಾಳ್ ಗೆ ಉಚ್ಚಾಟನೆಗೆ ಕೇಳಿದ್ರು.ಇವಾಗ್ಲೂ ಅವರಿಗೆ ಮನವಿ ಮಾಡುತ್ತೇವೆ ಪಕ್ಷದ ಅಧ್ಯಕ್ಷರ ಜೊತೆ ಬನ್ನಿ ಅಂತಾ.ಇಲ್ಲ ಅಂದಲ್ಲಿ ಅವರನ್ನು ಉಚ್ಚಾಟನೆ ಮಾಡಿ ಎಂದು ಕೇಳಿದ್ದೇವೆ ಎಂದಿದ್ದಾರೆ.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ ವಿಜಯೇಂದ್ರರನ್ನು ಬರೋ ಚುನಾವಣೆವರೆಗೆ ಅಧ್ಯಕ್ಷರಾಗಿ ಮುಂದುವರಿಸಬೇಕು ಅಂತಾ ಯಡಿಯೂರಪ್ಪನ ಬಳಿ ಕೇಳಿದ್ದೇವೆ.ಅವರು ಪಕ್ಷ ಸಂಘಟನೆ ಮಾಡಿ ಎಂದು ನಮಗೆ ಹೇಳಿದ್ದಾರೆ.ನಾವು ಹೈಕಮಾಂಡ್ ನಾಯಕರ ಜೊತೆ ಮಾತಾಡ್ತೇವೆ. ನೀವು ಯಾರು ಧೃತಿಗೆಡಬೇಡಿ ಎಂದಿದ್ದಾರೆ.ವಿಜಯೇಂದ್ರ ಬದಲಾವಣೆ ಕುರಿತು ಯತ್ನಾಳ್ ಮಾತು ಬರಿ ಕಾಲ್ಪನಿಕ ಅಷ್ಟೇ ಎಂದಿದ್ದಾರೆ.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಈ ಬಗ್ಗೆ ಮಾತನಾಡಿದ್ದು ಯತ್ನಾಳ್ ಗೆ ಎಲ್ಲಿದೆ ಶಕ್ತಿ, ಅವ್ರು ಇರೋದು ನಾಲ್ಕೇ ಜನ. ನಾಳೆ ಹತ್ತನೇ ತಾರೀಖು ನಾವೆಲ್ಲರೂ ದಾವಣಗೆರೆ ಯಲ್ಲಿ ಸೇರುತ್ತೇವೆ. ೧೧ ರಂದು ಅರವತ್ತುಕ್ಕೂ ಹೆಚ್ಚು ಜನರು ದಾವಣಗೆರೆ ಯಲ್ಲಿ ಸೇರ್ತೇವೆ.ಅವರನ್ನು ಉಚ್ಚಾಟನೆ ಮಾಡಬೇಕಾ ಬೇಡ್ವಾ ಎಂದು ತೀರ್ಮಾನ ಮಾಡ್ತೀವಿ. ಪೇಪರ್ ಸಿಂಹ ನಮ್ಮ ಬಗ್ಗೆ ಮಾತಾಡಿದ್ದಾರೆ. ನಾವು ಯಾವುದೋ ಕಾರಣಗಳಿಗೆ ಸೋಲಿಸಿದ್ಸಾರೆ. ನಮ್ಮನ್ನು ಜನರು ಏನು ತಿಪ್ಪೆಗೆ ಎಸೆದಿಲ್ಲ. ಆದರೆ ನಿಮ್ಮ ತರ ಪೇಪರ್ ಸಿಂಹ ಅಲ್ಲ.ಮೈಸೂರಲ್ಲಿ ಎಷ್ಟು ಸಂಘಟನೆ ಮಾಡಿದ್ದೀರಿ..? ಮತ್ತೆ ಎಷ್ಟು ಜನರನ್ನು ಗೆಲ್ಲಿಸಿದ್ದೀರಿ..?.ಕೊಡಗು ಮತ್ತೆ ಮೈಸೂರಲ್ಲಿ ಅವರ ಸಾಮರ್ಥ್ಯದಿಂದ ನಮ್ಮವರು ಗೆದ್ದಿದ್ದಾರೆ. ಮೊನ್ನೆ ನಡೆದ ಚುನಾವಣೆಯಲ್ಲಿ ನಿನಗೆ ಸಾಮರ್ಥ್ಯ ಇದ್ದಿದ್ದರೆ ಯಾಕೆ ನಿಬ್ಬಬ್ಬರನ್ನು ಗೆಲ್ಲಿಸಿಲ್ಲ.ಪೇಪರ್ ಸಿಂಹ ನೀನು, ನೀನು ಏನು ಪ್ರಯೋಜನ ಇಲ್ಲ ಅಂತಾ ಡಸ್ಟ್ಬಿನ್ ಮತ್ತೆ ಕೊಚ್ಚೆಗೆ ಎಸೆದಿದ್ದಾರೆ ನಿನ್ನನ್ನು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಹರತಾಳು ಹಾಲಪ್ಪ ಮಾತನಾಡಿ ನಿನ್ನೆಯವರೆಗೆ ನಡೆದ ಬೆಳವಣಿಗೆಗಳು ಹಾಗೂ ಮುಂದೆ ಏನು ಆಗಬೇಕೆಂದು ಯಡಿಯೂರಪ್ಪಗೆ ಹೇಳಿದ್ದೇವೆ.ಯಡಿಯೂರಪ್ಪ, ವಿಜಯೇಂದ್ರಗೆ ಬೈಯ್ಯೋದನ್ನು ಮುಂದುವರಿಸಿದ್ದಾರೆ. ಹೀಗಾಗಿ ಕೂಡಲೇ ಇವರನ್ನು ಬಂದೋಬಸ್ತ್ ಮಾಡಿ ಎಂದಿದ್ದೇವೆ.ಇನ್ನೂ ಹತ್ತು ದಿನಗಳ ಟೈಮ್ ಕೊಡಿ ಎಲ್ಲವೂ ಒಳ್ಳೆಯದು ಆಗುತ್ತದೆ ಎಂದಿದ್ದಾರೆ.ಯಡಿಯೂರಪ್ಪ ಕೇಂದ್ರೀಯ ಸಂಸದೀಯ ಮಂಡಲಿ ಸದಸ್ಯರು.ಹತ್ತನೆಯ ತಾರೀಖಿನಂದು ನಾವೆಲ್ಲರೂ ದಾವಣಗೆರೆಯಲ್ಲಿ ಸೇರುತ್ತೇವೆ.ಅಲ್ಲಿಯವರೆಗೂ ಹೈಕಮಾಂಡ್ ನಾಯಕರು ಏನ್ ಮಾಡ್ತಾರೆ ಎಂದು ನೋಡ್ತೀವಿ ಎಂದರು.