ಮನೆ ಪ್ರಸ್ತುತ ವಿದ್ಯಮಾನ ಬಳ್ಳಾರಿಯಲ್ಲಿ ಜಂಟಿ ಸುದ್ದಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ವಿ.ಸೋಮಣ್ಣ, ಮಾಜಿ ಸಂಸದ ಪ್ರತಾಪ್...

ಬಳ್ಳಾರಿಯಲ್ಲಿ ಜಂಟಿ ಸುದ್ದಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ವಿ.ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ ಜಂಟಿ ಸುದ್ದಿಗೋಷ್ಠಿ

0

ಬಳ್ಳಾರಿಯಲ್ಲಿ ಜಂಟಿ ಸುದ್ದಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ವಿ.ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಬಳ್ಳಾರಿಯ ಖಾಸಗಿ ಹೋಟೆಲ್  ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಯಿತು.

ಇನ್ನು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಡೀ ದೇಶಾದ್ಯಂತ ಮಹಾರಾಷ್ಟ್ರ, ಜಾರ್ಖಾಂಡ್ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ರಾಜ್ಯದ ಮೂರು ಕಡೆ ಉಪಚುನಾವಣೆ ನಡೆಯುತ್ತಿದೆ. ಶಿಗ್ಗಾಂವಿನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದೇನೆ. ಪ್ರಚಂಡ ವಿಶ್ವಾಸದಿಂದ NDA ರಾಜ್ಯದಲ್ಲಿ ಅಭೂತಪೂರ್ವ ಜಯವನ್ನ ಗಳಿಸಲಿದೆ. ಮಹಾರಾಷ್ಟ್ರ, ಝಾರ್ಖಾಂಡ್ ದಲ್ಲಿ ಹರಿಯಾದ ವಿಜಯ ಮೀರಿಸಿದ ಜಯ ಪ್ರಾಪ್ತಿಯಾಗಲಿದೆ ಎಂದರು.

ಛತ್ತಿಸ್ ಘಡ್, ಝಾರ್ಖಂಡ್ ನಲ್ಲಿ ಅಭೂತಪೂರ್ವ ಗೆಲವು ಸಾಧಿಸುತ್ತೇವೆ. ಮತದಾರರು ಬಿಜೆಪಿಗೆ ಮತ ಹಾಕ್ಬೇಕು ಅಂತ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರರು, ಮುಸ್ಲಿಮರನನ್ನೇ ಗುರಿಯಾಗಿಸಿದೆ ಧ್ಯೇಯವಾಗಿಸಿದೆ.2013-18ರಲ್ಲಿ‌ PFI, SDPI, semi ಪೂರ್ವದ ಅವತಾರಗಳು. 175 ಕೇಸ್ ಗಳನ್ನ ವಾಪಾಸ್ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಹಿಂದೂ ಸಂಘಟನೆ, ಮಂದಿರ, ಹಿಂದೂಗಳ ಮೇಲೆ‌ ಅಟ್ಯಾಕ್ ಮಾಡ್ತಾರೆ. ಸಾಫ್ಟ್ ಕಾರ್ನರ್ ಆಗಿ ಅವರನ್ನ ನೋಡಿಕೊಳ್ತಾರೆ. ಹುಬ್ಬಳ್ಳಿ ಘಟನೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಇನ್ನು ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಮುಡಾದಲ್ಲಿ‌ ಸಿಲುಕಿ ಹಾಕಿಸಿದ್ರು ಅಂತಾರೆ. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನವರು ನಿಸ್ಸೀಮರು. ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ಕೊಟ್ರು. ಆಗ ಕೋರ್ಟ್ ಗೆ ಹೋಗಿದ್ರು. ಸಿದ್ದರಾಮಯ್ಯ ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ. ವಕ್ಫ್ ಅದಾಲತ್ ಸಿಎಂ ಸೂಚನೆ ಮೇರೆಗೆ ಮಾಡಿದೆ ಅಂತ ಜಮೀರ್ ಎಂದ್ರು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಪ್ರಾಸಿಕ್ಯೂಷನ್ ಕೊಡ್ತು. ಕೋರ್ಟ್ ಏನು ಹೇಳಿದೆ ?.ನಿಮ್ಮ ಪ್ರಭಾವ ಇಲ್ಲದೆ ಏನೂ ಮಾಡೋಕೆ ಸಾಧ್ಯವಿಲ್ಲ‌ ಅಂತ ಹೈಕೋರ್ಟ್ ಹೇಳಿದೆ. ಇಂದಿನವರೆಗೆ ಸಿಂಗಲ್ ಬೇಂಚಿನಲ್ಲಿ‌ ತಡೆಯಾಜ್ಞೆ ಇಲ್ಲ.ನಿನ್ನೆ ಖಾಲಿ ಹಾಳೆಯನ್ನ ಸಿಎಂ ಹಂಚಿದ್ದಾರೆ. ಇಡಿ, ಸಿಬಿಐ ಅಂತಾರೆ, ಅಲ್ಲಿ ಬಂದಿದೆ?. ಮೊದಲು ನಿಮ್ಮ‌ ದೂರು ಬಂದಿದೆ.ಮನಿ‌ ಲಾಂಡ್ರಿಂಗ್ ನಲ್ಲಿ‌ ಇಡಿ‌ ತಪಾಸಣೆ ಮಾಡ್ತಿದ್ದಾರೆ. ನಿಮ್ಮ‌ ಕಾಲದಲ್ಲಿ ಇಡಿ ಆಗಿದ್ದು ನಮ್ಮ‌ ಕಾಲದಲ್ಲಿ ಅಲ್ಲ ಎಂದಿದ್ದಾರೆ.