ಮನೆ Latest News ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ; ಚಾಮರಾಜಪೇಟೆಯಲ್ಲಿ ಬಿಜೆಪಿ ನಾಯಕರಿಂದ ಗೋ ಪೂಜೆ

ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ; ಚಾಮರಾಜಪೇಟೆಯಲ್ಲಿ ಬಿಜೆಪಿ ನಾಯಕರಿಂದ ಗೋ ಪೂಜೆ

0

ಬೆಂಗಳೂರು; ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಚಾಮರಾಜಪೇಟೆಯಲ್ಲಿ ಬಿಜೆಪಿ  ನಾಯಕರು ಗೋ ಪೂಜೆ ನೆರವೇರಿಸಿದರು. ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಕೆಚ್ಚಲು ಕೊಯ್ದ ಹಸುವಿನ ಮಾಲೀಕರಾದ ಕರ್ಣ ಅವರ ಮನೆಯಲ್ಲಿ ಬಿಜೆಪಿ ನಾಯಕರು ಗೋ ಪೂಜೆ ನೆರವೇರಿಸಿದರು. ಈ ವೇಳೆ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್, ಬಿಜೆಪಿ ಮುಖಂಡ ಭಾಸ್ಕರ್ ರಾವ್ ಉಪಸ್ಥಿತರಿದ್ದರು. ಇದೇ ವೇಳೆ ಹಸುವಿನ ಮಾಲೀಕರಾದ  ಕರ್ಣ ಅವರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದರು.

ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೊನ್ನೆಯ ದಿನ ದುರ್ಘಟನೆ ನಡೆದಿದೆ. ಯಾವ ಪುಣ್ಯಭೂಮಿ ಮೇಲೆ ಗೋ ಮಾತೆ ಪೂಜೆ ಮಾಡುತ್ತೇವೋ ಅಂತಹ ಗೋವಿಗೆ ಏನಾಗಿದೆ ಅಂತ ರಾಜ್ಯ, ದೇಶದ ಜನ ಗಮನಿಸಿದ್ದಾರೆ.ಇವತ್ತು ಹಸು ಮಾಲೀಕ ಕರ್ಣನಿಗೆ ಧೈರ್ಯ ಹೇಳಿದ್ದೇವೆ. ಗೋ ಮಾತೆ ಪೂಜೆ ಮಾಡುವ ದೇಶದಲ್ಲಿ ಹೀಗೆ ನಡೆದಿರುವುದು ಅಕ್ಷಮ್ಯ. ಸಿದ್ದರಾಮಯ್ಯ ಸಿಎಂ ಆದ ಮೇಲೆ ಗೋ ರಕ್ಷಣೆ ಆಗುತ್ತಿಲ್ಲ. ಈ ಘಟನೆ ಸಿದ್ದರಾಮಯ್ಯ, ಕಾಂಗ್ರೆಸ್ ಗೆ ಒಳ್ಳೆಯದು ಮಾಡಲ್ಲ. ಇವರ ಪಾಪದ ಕೊಡ ತುಂಬಿದೆ.ಯಾರೋ ಬಡಪಾಯಿಯನ್ನು ಅರೆಸ್ಟ್ ಮಾಡಿದ್ದಾರೆ.ಹಸು ಮಾಲೀಕ ಕರ್ಣ ಧೈರ್ಯವಾಗಿ ಎದುರಿಸಿದ್ದಾನೆ.ನಾವು ಧೈರ್ಯ ಹೇಳಿ ಗೋ ಪೂಜೆ ಮಾಡಿದ್ದೇವೆ ಎಂದು ತಿಳಿಸಿದ್ರು.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ನಾನು ಘಟನೆ ಆದ ಕೂಡಲೇ ಸ್ಥಳಕ್ಕೆ ಬಂದಿದ್ದೆ. ರಕ್ತ ಹರಿಯುತ್ತಿತ್ತು, ಕೆಚ್ಚಲು ಕತ್ತರಿಸಿದ್ದು ನಾನು ನೋಡಿದೆ.ಪೊಲೀಸರು ಬಂಧನ ಮಾಡಿರುವವನು ಯಾವಾಗಲೂ ಬ್ಲೇಡ್ ಇಟ್ಟುಕೊಳ್ಳುತ್ತಿದ್ದ ಅಂತ ಹೇಳುತ್ತಾರೆ.ಮನುಷ್ಯತ್ವ ಇರುವವರು ಹೀಗೆ ನಡೆದುಕೊಳ್ಳಲ್ಲ.ಗೋವಿಗೆ ಪೂಜೆ ಮಾಡುವ ಹಬ್ಬ ಇವತ್ತು.ಕಾಂಗ್ರೆಸ್ ಮುಖಂಡರು ನಿನ್ನೆ ಹಸು ತೆಗೆದುಕೋ ಅಂತ ಗಲಾಟೆ ಮಾಡಿದ್ದಾರಂತೆ.ಕಾಂಗ್ರೆಸ್ ನವರು ಒಂದು ಕೈಯಲ್ಲಿ ಕೊಡುವುದು ಮತ್ತೊಂದು ಕಡೆ ಕೊಲೆ ಮಾಡುವುದು.ಗೋವಿನ ಶಾಪ ನಿಮಗೆ ತಟ್ಟುತ್ತದೆ. ಜಿಹಾದಿಗಳು ಈ ಕೆಲಸ ಮಾಡಿದ್ದಾರೆ. ಯಾರನ್ನೋ ಬಂಧನ ಮಾಡಿದ್ದಾರೆ. ಇದನ್ನು ನೋಡಿದರೆ ಪೊಲೀಸರು ಮತ್ತು ಸರ್ಕಾರದ ಮೇಲೆ ಅನುಮಾನ ಬರುತ್ತಿದೆ. ಕಾಂಗ್ರೆಸ್ ಅವರು ಸ್ಟೋರಿ ಬರೆಯುತ್ತಿದ್ದಾರೆ. ಬಂಧಿತ ಫ್ಯಾಕ್ಟರಿ ಮಾಡುತ್ತಿದ್ದ ಅಂತಾರೆ. ಕರ್ಣ ಪಶು ಆಸ್ಪತ್ರೆ ಪರವಾಗಿ ಹೋರಾಟ ಮಾಡಿದ್ದ. ಸಿದ್ದರಾಮಯ್ಯ ಅ ಜಾಗವನ್ನು ವಕ್ಫ್ ಬೋರ್ಡ್ ಕೊಟ್ಟಿದ್ದರು. ಅದರ ವಿರುದ್ದ ಕರ್ಣ ಹೋರಾಟ ಮಾಡುತ್ತಿದ್ದ. ಕರ್ಣನಿಗೆ ಏನೂ ಮಾಡಲು ಆಗದೇ ಹಸುವಿಗೆ ಹೀಗೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಒಲೈಕೆ ಸರ್ಕಾರ. ಮುಸ್ಲಿಂಮರಿಗೆ ಏನಾದರೂ ಆಗಿದ್ದರೆ ಸಿದ್ದರಾಮಯ್ಯ ಪಂಚೆ ಎತ್ತುಕೊಂಡು ಬರುತ್ತಿದ್ದರು. ಇದು ಸಿದ್ದರಾಮಯ್ಯ ಇಬ್ಬಾಗ ನೀತಿ. ಈ ಕೃತ್ಯದ ಹಿಂದೆ ಇರುವವರನ್ನು ಬಂಧನ ಮಾಡಬೇಕು.ಧರ್ಮ ಯುದ್ದ ಇದು, ನಾವು ಧರ್ಮ ಯುದ್ದಕ್ಕೆ ನಾವು ಚಾಲನೆ ಕೊಟ್ಟಿದ್ದೇವೆ ಎಂದರು.

ಇದೇ ವೇಳೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ರಾಜಕೀಯ ಮಾಡುವುದು ಕಾಂಗ್ರೆಸ್ ಡಿಎನ್ ಎ ನಲ್ಲಿ ಬಂದಿದೆ.ನೆಹರು ಬ್ರಿಟಿಷ್ ಸಂಬಂಧ ದೇಶಕ್ಕೆ ಗೊತ್ತು.ನಾವು ರಾಜಕೀಯ ಮಾಡುವುದಿಲ್ಲ. ಸಿದ್ದರಾಮಯ್ಯ ಹಿಂದುಗಳು ಎರಡು ಮಕ್ಕಳನ್ನು ಮಾಡಿಕೊಳ್ಳಿ ಅಂತಾರೆ. ಮುಸ್ಲಿಮರಿಗೆ ಹೇಳಿ ನೋಡೋಣ?. ಮುಸ್ಲಿಮರು 50 ಮಕ್ಕಳು ಮಾಡಿಕೊಳ್ಳಬಹುದಾ?. ಮುಸ್ಲಿಮರು 4-5 ಮದುವೆ ಆಗಬಹುದಾ? ಎಂದು ಪ್ರಶ್ನಿಸಿದ್ದಾರೆ.