ಬೆಂಗಳೂರು; ಬಿಜೆಪಿಯವರು ಯಾಕೋ ಹೋಂ ವರ್ಕ್ ಸರಿ ಮಾಡ್ತಾ ಇಲ್ಲ ಎಂದು ತನ್ನ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿಗರಿಗೆ ಪ್ರಿಯಾಂಕ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಕಳೆದ ನಾಲ್ಕೈದು ದಿನಗಳಿಂದ ಬಿಜೆಪಿ ಬಹಳಷ್ಟು ಪ್ರಯತ್ನ ನಡೆಸಿದ್ದಾರೆ. ನನ್ನ ರಾಜೀನಾಮೆ ಕೊಡಿಸಲು ಖರ್ಗೆ ಸಾಹೇಬ್ರ ಹೆಸರಿಗೆ ಕಪ್ಪು ಚುಕ್ಕೆ ತರಬಹುದಾ ಅಂತ ಪ್ರಯತ್ನ ನಡೆಸಿದ್ದಾರೆ.ಬಿಜೆಪಿಯವರು ಯಾಕೋ ಹೋಂ ವರ್ಕ್ ಸರಿ ಮಾಡ್ತಾ ಇಲ್ಲ. ವಿಜಯೇಂದ್ರಗೆ ಹಾಗೂ ಛಲವಾದಿ ನಾರಾಯಣಸ್ವಾಮಿ ಇಬ್ಬರೂ ಹೋಂ ವರ್ಕ್ ಸರಿ ಮಾಡುತ್ತಿಲ್ಲ. ಛಲವಾದಿ ನಾರಾಯಣಸ್ವಾಮಿ ಅವರಿಗೆ ವೈಯಕ್ತಿಕ ಟೀಕೆ ಮಾಡಲು ಸ್ಥಾನ ಕೊಟ್ಟಂತೆ ಕಾಣಿಸ್ತಿದೆ.ಪ್ರಿಯಾಂಕ್ ಖರ್ಗೆಯವರ ಎಲ್ಓಪಿ ತರಹ ಅವರು ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಕಲಬುರ್ಗಿ ರಿಪಬ್ಲಿಕ್ ಅಂತ ಛಲವಾದಿ ನಾರಾಯಣಸ್ವಾಮಿ ಆರೋಪ ಮಾಡಿದ್ರು. ನಿನ್ನೆ ನನ್ನ ಹಳೆಯ ಸ್ಪೀಚ್ ಅಪ್ಲೋಡ್ ಮಾಡಿದ್ದಾರೆ ಬಿಜೆಪಿಯವರು. ಕಲಬುರ್ಗಿ ರಿಪಬ್ಲಿಕ್ ಮಾಡಿದವರು ಯಾರು?.ನಿಮ್ಮ ಅಭ್ಯರ್ಥಿ ನಮ್ಮ ಕುಟುಂಬದ ವಿರುದ್ದ ಸಂಚು ಮಾಡ್ತಾನೆ. ನಮ್ಮ ತಂದೆ ತಾಯಿ ಫ್ಯಾಮಿಲಿ ಕೊಲ್ತೀನಿ ಅಂತ ಹೇಳ್ತಾನೆ ಬಿಜೆಪಿಯ ಅಭ್ಯರ್ಥಿ.ಅದರ ಬಗ್ಗೆ ಕಂಪ್ಲೆಂಟ್ ಕೊಟ್ಟಾಗ ನಿಮ್ಮದೇ ಸರ್ಕಾರ ಇತ್ತು. ನಿಮ್ಮದೇ ಅಭ್ಯರ್ಥಿ ನನ್ನ ಕುಟುಂಬ ಸಾಫ್ ಮಾಡ್ತೀನಿ ಅಂತ ಹೇಳಿಕೆ ಕೊಟ್ಟಿದ್ದ. ಅಂಥವನಿಗೆ ನೀವು ಅಧಿಕೃತ ಅಭ್ಯರ್ಥಿ ಮಾಡಿ ಟಿಕೇಟ್ ಕೊಟ್ಟಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ್ ಆಡಿಯೋ ಬಿಡುಗಡೆ ಮಾಡಿದ ಸಚಿವ ಪ್ರಿಯಾಂಕ ಖರ್ಗೆ
ಬೆಂಗಳೂರು; ಸಚಿವ ಪ್ರಿಯಾಂಕ ಖರ್ಗೆ ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ್ ಆಡಿಯೋ ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಮಣಿಕಂಠ ರಾಟೋಡ್ ಮೇಲೆ 30-40 ಕೇಸ್ ಇದೆ. ಅಂಥವರಿಗೆ ಟಿಕೇಟ್ ಕೊಟ್ಟವರು ನೀವು ಛಲವಾದಿ ನಾರಾಯಣಸ್ವಾಮಿಯವರೇ. ನಾಳೆ ಇವನ ಬ್ಯಾನರ್ ಅಡಿ ಕಲಬುರ್ಗಿಗೆ ಬಂದು ಹೋರಾಟ ಮಾಡ್ತಿನಿ ಅಂತೀರಿ ನಾಚಿಕೆ ಆಗಲ್ವಾ ನಿಮಗೆ ಎಂದು ಪ್ರಶ್ನೆ ಮಾಡಿದ್ದಾರೆ. ಬಹಳ ಸ್ಪಷ್ಟವಾಗಿ ಹೇಳಿದ್ದೇನೆ ಸಚಿನ್ ಸಾವಿಗೂ ನನಗೂ ಸಂಬಂಧ ಇಲ್ಲ. ಇತ್ತೀಚೆಗೆ ಬಿಜೆಪಿಯವರು ಬಹಳ ಬಾಲಿಷವಾಗಿ ಮಕ್ಕಳ ರೀತಿ ಹೇಳಿಕೆ ನೀಡ್ತಿದ್ದಾರೆ ಎಂದು ಗರಂ ಆಗಿದ್ದಾರೆ.
ಈಶ್ವರಪ್ಪ ಪ್ರಕರಣದಲ್ಲಿ ಮೃತಪಟ್ಟ ಸಂತೋಷ್ ಪಾಟೀಲ್ ಅವರ ಕುಟುಂಬದ ಕ್ಷಮೆ ಕೋರುತ್ತೇನೆ. ಸಂತೋಷ್ ಪಾಟೀಲ್ ಬರೆದ ಡೆತ್ ನೋಟ್ ಪತ್ರದಲ್ಲಿ ಈಶ್ವರಪ್ಪ ಹೆಸರು ಸ್ಪಷ್ಟವಾಗಿ ಇತ್ತು. ನನ್ನ ಸಾವಿಗೆ ನೇರ ಕಾರಣ ಈಶ್ವರಪ್ಪ ಅಂತ ಬರೆದಿದ್ದರು ಸಂತೋಷ್ ಪಾಟೀಲ್. ಆದರೆ ಈಗಿನ ಸಚಿನ್ ನನ್ನ ಹೆಸರೇ ಬರೆದಿಲ್ಲ, ಅದಕ್ಕೂ ಇದಕ್ಕೂ ವ್ಯತ್ಯಾಸ ಸ್ಪಷ್ಟವಾಗಿ ಇದೆ. ಸಂತೋಷ್ ಪಾಟೀಲ್ ಮನೆಗೆ ಒಮ್ಮೆಯಾದರೂ ವಿಜಯೇಂದ್ರ ಹೋಗಿದ್ದಾರಾ?. ಸಚಿನ್ ಮನೆಗೆ 5 ಲಕ್ಷ ತೆಗೆದುಕೊಂಡು ಹೋಗಿದ್ದರು ವಿಜಯೇಂದ್ರ. ಸಂತೋಷ್ ಪಾಟೀಲ್ ಮನೆಗೆ ಹೋಗಿಲ್ಲ ಯಾಕೆ?. ಬಿಜೆಪಿ ಯವರಿಗೆ ಸಾಮಾನ್ಯ ಪ್ರಜ್ಞೆ ಇಲ್ವಾ? ಯಾರೋ ಬರೆದಿದ್ದನ್ನು ತಿರುಚಿ ಮಗುಚಿ ಹಾಕಿದ್ರಲ್ಲ ನಾಚಿಕೆ ಆಗಲ್ವಾ?. ಪಿ ರಾಜೀವ್ ಮೇಲೆ ಮಾನನಷ್ಡ ಮೊಕದ್ದಮೆ ಹಾಕಿದ್ದೆ ಇದುವರೆಗೆ ಉತ್ತರ ಬಂದಿಲ್ಲ. ಬಿಜೆಪಿಯವರು ಸುಳ್ಳಿನ ಮಹಾಶೂರರು ಎಂದಿದ್ದಾರೆ.
ಬಿಜೆಪಿಯವರು ಹಿಟ್ ಆ್ಯಂಡ್ ರನ್ ಮಾಡುವುದರಲ್ಲಿ ಪಿಎಚ್ಡಿ ತೆಗೆದುಕೊಂಡಿದ್ದಾರೆ. ಕ್ಯಾಬಿನೆಟ್ ನಲ್ಲಿ ಯಾರು ಇರಬೇಕಾದವರು ಎಂಬುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಅದನ್ನು ಬಿಜೆಪಿಯವರು ನಿರ್ಧಾರ ಮಾಡುವುದಕ್ಕೆ ಯಾರು?. ಕೋರ್ಟ್ ಗೆ ಮುನಿರತ್ನ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ.ನನ್ನ ರಾಜೀನಾಮೆ ಕೇಳುವ ಬಿಜೆಪಿ ನಿಮ್ಮ ಶಾಸಕರ ರಾಜೀನಾಮೆ ಪಡೆಯುವ ಧೈರ್ಯ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.
ರೈಲ್ವೆ ಪೊಲೀಸ್ ರಿಂದ ಮಾಹಿತಿ ಸಿಐಡಿಗೆ ಹಸ್ತಾಂತರ ಆಗಿದೆ. ಸಚಿನ್ ಸಾವಿಗೆ ನ್ಯಾಯ ಕೊಡಿಸುವುದು ಸರ್ಕಾರದ ಕರ್ತವ್ಯ. ಅವರ ಕುಟುಂಬ ಇನ್ನೂ ಶಾಕ್ ನಿಂದ ಹೊರಗೆ ಬಂದಿಲ್ಲ ಎಂದು ಕೇಳ್ಪಟ್ಟಿದ್ದೇನೆ. ಅವರ ಕುಟುಂಬಸ್ಥರಿಗೆ ಪರಿಹಾರ ಕೊಡಿಸುವುದು ನಮ್ಮ ಜವಾಬ್ದಾರಿ. ಸಚಿನ್ ಗೆ ಇನ್ನೂ 24-25 ವರ್ಷ ಅಷ್ಟೇ. ಗುತ್ತಿಗೆದಾರರ ಸಂಘದವರು ಇದಕ್ಕೆ ಮಾಹಿತಿ ನೀಡಿದ್ದಾರೆ. ಗುತ್ತಿಗೆದಾರರ ಸಂಘದವರು ಇದಕ್ಕೆ ತಮ್ಮ ಬಳಿ ಮಾಹಿತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯಾವ ಜಿಲ್ಲೆಯಲ್ಲೂ ಕೂಡ ಸಚಿನ್ ಗುತ್ತಿಗೆ ಮಾಡಿದ ಬಗ್ಗೆ ದಾಖಲೆ ಇಲ್ಲ ಎಂದಿದ್ದಾರೆ. ಸಚಿನ್ ಗೆ ಇಎಂಡಿ ಹಣ ಬೇಕು ಅಂತ ಕೇಳಿದ್ದಕ್ಕೆ ಇವರು ಹಣ ನೀಡಿದ್ದಾರೆ. ಯಾವುದೇ ಟೆಂಡರ್ ಆಗಿಲ್ಲ ಅವರಿಗೆ. ಟೆಂಡರ್ ಆಗದೆಯೇ ಗುತ್ತಿಗೆದಾರ ಯಾರೂ ಅಂತ ನಮಗೂ ಗೊತ್ತಾಗುವುದಿಲ್ಲ. ಛಲವಾದಿ ನಾರಾಯಣಸ್ವಾಮಿಯವರೇ. ಯಾವ ತಟ್ಟೆಯಲ್ಲಿ ಊಟ ಮಾಡ್ತಾರೆ ಅದರಲ್ಲೇ ಹೇಳಿದರೆ ನಾನೇನೂ ಮಾಡುವುದಕ್ಕೆ ಆಗುವುದಿಲ್ಲ. ನಮ್ಮ ಕಡೆಯ ಗಾದೆಯ ಪ್ರಕಾರ ಇದನ್ನು ಒಂದೇ ಲೈನ್ ನಲ್ಲಿ ಹೇಳಿದ್ದೇನೆ ಎಂದರು.
ಕುಟುಂಬ ರಾಜಕಾರಣ ನಮ್ಮಲ್ಲಿ ಇದ್ಯಾ ಬಿಜೆಪಿಯಲ್ಲಿ ಇದ್ಯಾ?. ಇವರಿಗೆಲ್ಲಾ ಡಿಎನ್ ಎ ಟೆಸ್ಟ್ ಉಚಿತವಾಗಿ ಮಾಡಿಸಲು ನಾನು ರೆಡಿ ಇದ್ದೇನೆ. ಬೇರೆ ಏನಾದರೂ ಇರಬಹುದು ಎಂದು ಅವರಿಗೆ ಭಯ ಇರಬಹುದೇನು?. ಬ್ಯಾಟ್ ಹಿಡಿಯಲು ಬಾರದವರಿಗೆ ಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಖರ್ಗೆ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ನಾನು ಎಲೆಕ್ಟೆಡ್, ಸೆಲೆಕ್ಟೆಡ್ ಅಲ್ಲ ಎಂದಿದ್ದಾರೆ