ಮನೆ Latest News ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿಯಿಂದ ದುಂಡುಮೇಜಿನ ಸಭೆ

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿಯಿಂದ ದುಂಡುಮೇಜಿನ ಸಭೆ

0

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿಯಿಂದ ದುಂಡುಮೇಜಿನ ಸಭೆ ನಡೆಯಿತು. ಸಾಮಾಜಿಕ ನ್ಯಾಯ ಜಾಗೃತ ವೇದಿಕೆ ವತಿಯಿಂದ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಜಾತಿಗಣತಿ ಹಿನ್ನೆಲೆ- ಮುನ್ನಲೆ ಕುರಿತು ಚರ್ಚೆ ಮಾಡಲಾಯಿತು. ಸಭೆಯಲ್ಲಿ ಸುನೀಲ್ ಕುಮಾರ್, ಪಿಸಿ ಮೋಹನ್, ಎನ್ ರವಿಕುಮಾರ್, ಕೇಶವ್ ಪ್ರಸಾದ್ , ಲಕ್ಷ್ಮೀ ನಾರಾಯಣ್ ಸೇರಿ ಹಲವರು ಭಾಗಿಯಾಗಿದ್ದರು. ಇನ್ನುಳಿದಂತೆ ಅಯ್ದ ಪ್ರಾಧ್ಯಾಪಕರು, ವಕೀಲರು, ಶ್ರಾಂತ ಕುಲಪತಿಗಳು, ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಇನ್ನು ಜಾತಿ ಜನಗಣತಿ ಕುರಿತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ನೇತೃತ್ವದಲ್ಲಿ  ಜೂನ್ 28ಕ್ಕೆ ಬೆಂಗಳೂರಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಅದಕ್ಕೆ  ಅದಕ್ಕೆ ಪೂರ್ವಭಾವಿಯಾಗಿ ಇಂದು ಸಭೆ ನಡೆಯಿತು. ಸಭೆ ಬಳಿಕ ಸಾಮಾಜಿಕ ನ್ಯಾಯ ವೇದಿಕೆ ವತಿಯಿಂದ ಸುದ್ದಿಗೋಷ್ಟಿ ನಡೆಯಿತು. ಈ ವೇಳೆ ವೈಸ್ ಚಾನ್ಸಲರ್ ವಿಷ್ಣುಕಾಂತ್ ಚಟಪಲ್ಲಿ ಮಾತನಾಡಿ ಈಗ ದುಂಡುಮೇಜಿನ ಸಭೆ ನಡೀತು. ಇದರಲ್ಲಿ ಹಲವು ಭಾಗಿಯಾಗಿದ್ದರು.ಹಿಂದುಳಿದ ಸಮಾಜದ ಏಳಿಗೆ ಮತ್ತು ಅಭಿವೃದ್ಧಿ ಗಾಗಿ ಕಾರ್ಯ ಮಾಡಿದ್ದವರು ಈ ಸಭೆಯಲ್ಲಿ ಭಾಗಿಯಾಗಿದ್ದರು. ೪೦ಕ್ಕೂ ಹೆಚ್ಚು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಜಾತಿ ಮತ್ತು ಜನಗಣತಿ ಯ ಹಿನ್ನೆಲೆ, ಪ್ರಾರಂಭ ಮತ್ತು ಇತಿಹಾಸದ ಅವಲೋಕ, ಇಂದಿನ ಗೊಂದಲ, ಸಮಸ್ಯೆಯ ಬಗ್ಗೆ ಚರ್ಚೆ ನಡೀತು ಎಂದರು.

ಇದರ ಸಾರಾಂಶವಾಗಿ ಈ ಸಭೆಯಲ್ಲಿ ನಾವು ತೆಗೆದುಕೊಂಡಿರೋ ಪ್ರಮುಖ ನಿರ್ಣಯ ನಾವು ಮುಂದಿಡುತ್ತಿದ್ದೇವೆ. ಈಗಾಗಲೇ ಜಾತಿಗಣತಿ ಮಾಡಿ ೧೦ ವರ್ಷ ವ್ಯರ್ಥವಾಗಿದೆ, ಇದನ್ನ ಖಂಡಿಸುತ್ತೇವೆ. ಕೇಂದ್ರದಿಂದ ಜಾತಿ ಮತ್ತು ಜನಗಣತಿ ಮಾಡಲಾಗುತ್ತದೆ. ೩೨ ಪ್ಯಾರಾಮೀಟರ್ ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ದಾಖಲಿಸಲಿದೆ ಅಂತ ಈ. ಸಭೆ ಸ್ವಾಗತಿಸುತ್ತೇವೆ. ರಾಜ್ಯ ಸರ್ಕಾರ ಅವಸರಕ್ಕೆ ಇನ್ನೊಂದು ಗಣತಿ ಗೆ ಕೈ ಹಾಬಾರದು ಎಂದು ಅಭಿಪ್ರಾಯ ಇದೆ.ಈಗಾಗಲೇ ಹಣ ವ್ಯರ್ಥವಾಗಿದೆ, ಶಾಲಾ ಶಿಕ್ಷಕರನ್ನ ತೊಡಗಿಸಲು ಸಾಧ್ಯವಿಲ್ಲ. ಜನರ ತೆರಿಗೆ ಹಣವನ್ನ ಬಳಸಲು ಹೋಗಬಾರದು.ಕರ್ನಾಟಕ ಸರ್ಕಾರ ಕೂಡ ಕಾಂತರಾಜು ವರದಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತದೆ. ಕೇಂದ್ರದ ಗಣತಿಗೆ ಮಾನ್ಯತೆ ಇದೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಬೆಂಬಲ ನೀಡಬೇಕು ಎಂದರು.