ಮನೆ Latest News ಬಿಜೆಪಿಯವರಿಗೆ ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಅಭ್ಯಾಸ ಆಗಿದೆ; ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಬಿಜೆಪಿಯವರಿಗೆ ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಅಭ್ಯಾಸ ಆಗಿದೆ; ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

0

ಬೆಂಗಳೂರು; ಬಿಜೆಪಿಯವರಿಗೆ ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಅಭ್ಯಾಸ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬಿಜೆಪಿಯವರಿಗೆ ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಅಭ್ಯಾಸ ಆಗಿದೆ. ಅವರ ಹಲವಾರು ಕಾರ್ಯಕರ್ತರ ಪಟ್ಟಿಗೆ ಈ ಹೆಸರು ಸೇರುತ್ತೆ. ಪರಮೇಶ್ ಮಿಸ್ತಾ, ಶಿವಮೊಗ್ಗ ಯುವಕನ ಕೇಸ್ ಮೊನ್ನೆ ಬೀದರ್ ನಲ್ಲಿ ಒಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡ. ಇವರ ಹೆಸರಿನ ಮೇಲೆ ಬಿಜೆಪಿ ರಾಜಕೀಯ ಮಾಡಿದ ಉದಾಹರಣೆ ಇದೆಯಲ್ಲ. ಪ್ರಕರಣದ ಸತ್ಯಾಂಶ ನೋಡಲ್ಲ ಸುಮ್ನೆ ರಾಜಕೀಯ ದುರುದೇಶದಿಂದ ಮಾಡ್ತಾರೆ. ಡೆತ್ ನೋಟ್ ಅಲ್ಲಿ ಪೊನ್ನಣ್ಣ, ಮಂತರ್ ಗೌಡ ಹೆಸರಿದೆಯಾ. ಅದು ವಾಟ್ಸಪ್ ಮೆಸೇಜ್, ಇದೇ ರಾಜಕೀಯ ಕಲಬುರ್ಗಿಯಲ್ಲಿ ಮಾಡಿದ್ದಾರೆ. ಇವರು ಸುಮ್ಮನೆ ಹೈಕಮಾಂಡ್ ಮನವೊಲಿಸೋಕೆ ಇವರ ಅಸ್ತಿತ್ವ ತೋರಿಸಿಕೊಳ್ಳೋಕೆ ಹೀಗೆ ಮಾಡ್ತಾರೆ ಎಂದಿದ್ದಾರೆ.

ಇಲ್ಲಿಯವರೆಗೂ ಯಾವುದೇ ಕೇಸ್ ಸಾಬೀತಾಗಿಲ್ಲ. ಇವರು ಒಂದಾದರೂ ಆ ರೀತಿ ಮಾಡಿದ್ದಾರಾ, ಯಾರು ಕಾಳಜಿ ವಹಿಸಿದ್ದಾರೆ. ನೂರಾರು ಕಾರ್ಯಕರ್ತರ ಪಟ್ಟಿಗೆ ಈ ಹೆಸರು ಒಂದು ಸೇರ್ಪಡೆಯಾಗಿದೆ. ಬಿಜೆಪಿಯವರು ರಾಜಕೀಯ ಅಸ್ತಿತ್ವನೇ ಇಷ್ಟು ಎಂದ ಅವರು ಎರಡು ತಿಂಗಳ ಹಿಂದೆ ಬೀದರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕನ ವಿಚಾರದಲ್ಲಿ ನನ್ನ ಹೆಸರು ಇತ್ತಾ..? ಅವರು ಅದನ್ನ ಫಾಲೋ ಅಪ್ ಮಾಡಿದ್ದಾರಾ. ತನಿಖೆ ಆದ್ಮೇಲೆ ಸಿಐಡಿ ಆಫೀಸ್ಗೆ ಹೋಗಿ ಏನಾಗಿದೆ ಅಂತ ನೋಡಿದ್ದಾರಾ..? ನಮ್ಮ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ತನಿಖೆ ಏನಾಗಿದೆ ಅಂತ ನೋಡಿದ್ದಾರಾ…? ಸದನದಲ್ಲೇ ವಿಚಾರ ಪ್ರಶ್ನೆ ಮಾಡಿದ್ರಾ? ಸಾವಿನ ಮನೆಯಲ್ಲಿ ಸಂತಸ ಮಾಡೋದೇ ಇವರ ರಾಜಕೀಯ .ಎಷ್ಟು ಜನ ಕಾರ್ಯಕರ್ತರಿಗೆ ಇವರು ಸಹಾಯ ಮಾಡಿದ್ದಾರೆ ಎಂದ್ರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು ದಕ್ಷಿಣ ಸಂಸದರು ಒಂದು ಹೆಲ್ಪ್ ಲೈನ್ ಪ್ರಾರಂಭ ಮಾಡಿದ್ದಾರೆ.ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿ ಕಿರುಕುಳ ಕೊಡ್ತಾರೆ ಅಂದ್ರೆ ಸಹಾಯವಾಣಿಗೆ ಕರೆ ಮಾಡಿ ಅಂತ. ಎಷ್ಟು ಜನ ಸಹಾಯವಾಣಿಗೆ ಕರೆ ಮಾಡಿದ್ದಾರೆ ಕೇಳಿ. ಎಷ್ಟು ಜನ ಬಿಜೆಪಿ ಕಾರ್ಯಕರ್ತರು ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅದನ್ನು ಅವರು ಬಹಿರಂಗ ಪಡಿಸಲಿ. ಆ ಸಹಾಯವಾಣಿಯ ನಂಬರ್ ಆದ್ರೂ ನೆನಪಿದೆಯಾ. ಬಿಜೆಪಿ ಅವರಿಗೆ ಶಾಸಕರಿಗೆ ಸಂಸದರಿಗೆ ನನ್ನ ನೇರ ಸವಾಲ್ ಇವರೇ ಕಳ್ಳರನ್ನು ಸಾಕ್ತಾರೆ, ಕಳ್ಳರಿಗೆ ಟಿಕೆಟ್ ಕೊಡ್ತಾರೆ. ನಮ್ಮ ಕಲಬುರ್ಗಿಯಲ್ಲಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ವಿರುದ್ಧ ಮತ್ತೊಂದು ಎಫ್‌ಐಆರ್ ಆಗಿದೆ.ಎರಡು ತಿಂಗಳ‌ ಹಿಂದೆ ಎಫ್ಐಆರ್ ಆಗಿದೆ ಇದರ ಬಗ್ಗೆ ಮಾತಾಡ್ತಾರಾ..? ಎಂದಿದ್ದಾರೆ.

ಆರ್‌ಡಿಪಿಅರ್ ವಿಶ್ವವಿದ್ಯಾನಿಲಯ ಕುರಿತು ಸಿಎಂ ಸಿದ್ದರಾಮಯ್ಯಗೆ ಗವರ್ನರ್ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿದ ಅವರು  ಗವರ್ನರ್ ಅವರದು ನಿರೀಕ್ಷಿತ ಪತ್ರ. ಸದನ ಪಾಸ್ ಮಾಡಿರುವ ವಿಧೇಯಕಗಳಿಗೆ ಕಿಮ್ಮತ್ ಇಲ್ವಾ . ಸುಪ್ರೀಂ ಕೋರ್ಟ್ ಅಸೆಂಬ್ಲಿ ಸುಪ್ರೀಂ ಅಂತ ಹೇಳಿದೆ . ನಾವು ಒಂದು ವಿಧೇಯಕ ಮಾಡಿದ್ದೇವೆ ಎರಡೂ ಮನೆಯಲ್ಲಿ ಅಂಗೀಕರಿಸಿದ್ದೇವೆ . ಆದರೂ ಗವರ್ನರ್ ನಂದೇ ನಡೆಯಬೇಕು ಅಂತ ಹೇಳ್ತಿದ್ದಾರೆ . ವಿಧೇಯಕ ಎಲ್ಲರೂ ಒಪ್ಪಿದ್ದಾರೆ, ಅವರಿಗೆ ಇಷ್ಟ ಆಗಿಲ್ಲ ಅಂದ್ರೆ ನಾವೇನ್ ಮಾಡಕ್ ಆಗುತ್ತೆ . ನಾವು ಹೊಸದಾಗಿ ಏನು ಮಾಡುತ್ತಿಲ್ಲ .ಬರೋಡಾ, ಯುಪಿ ಲಾ ಸ್ಕೂಲ್ ನಲ್ಲಿ ಇರುವಂತೆ ಇಲ್ಲೂ ಮಾಡಿದ್ದೇವೆ. ನಮಗೆ ಫ್ರೀ ಹ್ಯಾಂಡ್ ಕೊಡಿ ಮಾಡುತ್ತೇವೆ.ಈಗ ಪ್ರೊಸೀಜರ್ ಪ್ರಕಾರ ಅವರ ಬಳಿ ಹೋಗಬೇಕು. ಆದರೆ ಈಗ ಹೊಸ ನಿಯಮದ ಪ್ರಕಾರ ನಮಗೆ ಫ್ರೀ ಹ್ಯಾಂಡ್ ಕೊಡಬೇಕು ಎಂದ್ರು.