ಮನೆ Latest News ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಬಿಜೆಪಿ ಮುಖಂಡರ ಸಭೆ

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಬಿಜೆಪಿ ಮುಖಂಡರ ಸಭೆ

0

ಬೆಂಗಳೂರು; ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಬಿಜೆಪಿ ಮುಖಂಡರ ಸಭೆ ನಡೆಯಿತು.ಬಿಜೆಪಿಯ ಮಾಜಿ ಶಾಸಕರುಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಮಾಜಿ ಸಚಿವರಾದ ಎಂ.ಪಿ‌. ರೇಣುಕಾಚಾರ್ಯ, ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ರೂಪಾಲಿ ನಾಯ್ಕ್, ಸುನೀಲ್ ನಾಯ್ಕ್, ಸುನೀಲ್ ಹೆಗಡೆ, ವೈ. ಸಂಪಂಗಿ, ಎಸ್. ಕೆ ಬೆಳ್ಳುಬ್ಬಿ ಸೇರಿದಂತೆ ೧೦ ಕ್ಕೂ ಹೆಚ್ಚು ಮಾಜಿ ಶಾಸಕರು ಭಾಗಿಯಾಗಿದ್ದರು. ಸದಾಶಿವನಗರದಲ್ಲಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಮುಖಂಡರು ಕೂಡ ಭಾಗಿಯಾಗಿದ್ದರು. ಬಿಜೆಪಿಯಲ್ಲಿನ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಜಿ ಶಾಸಕರು ಸಭೆ ಸೇರಿ ಚರ್ಚೆ ನಡೆಸಿದರು.

ಸಭೆಯಲ್ಲಿ  ವಕ್ಫ್ ಹೋರಾಟ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯಬೇಕು, ಪ್ರತ್ಯೇಕ ಹೋರಾಟ ನಡೆಯಬಾರದು ಎಂದು ಒತ್ತಾಯಿಸಲಾಯಿತು. ಬಿಜೆಪಿ ಪ್ರತ್ಯೇಕ ಮಿತ್ರಕೂಟಕ್ಕೆ ಕೌಂಟರ್ ಆಗಿ ಯಡಿಯೂರಪ್ಪ ಆಪ್ತರು ಸಭೆ ನಡೆಸಿದ್ದಾರೆ. ಯತ್ನಾಳ್ ನೇತೃತ್ವದಲ್ಲಿ ಪ್ರತ್ಯೇಕ ವಕ್ಫ್ ಹೋರಾಟಕ್ಕೆ ಯಡಿಯೂರಪ್ಪ ಆಪ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದೇ ಹೋರಾಟ ರಾಜ್ಯಾಧ್ಯಕ್ಷರ ನೇತೃತ್ವದಲ್ಲೇ ನಡೆಯಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡಲಾಯಿತು. ಬೆಳಗಾವಿ ಅಧಿವೇಶನದಲ್ಲಿ ದೊಡ್ಡ ಮಟ್ಟದಲ್ಲಿ ವಕ್ಪ್ ಹೋರಾಟ ಚರ್ಚೆಯಾಗಲಿದೆ. ಹೀಗಾಗಿ ವಿಜಯೇಂದ್ರ ನೇತೃತ್ವದಲ್ಲೇ ಹೋರಾಟ ನಡೆಯಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಎಂ.ಪಿ‌. ರೇರೇಣುಕಾಚಾರ್ಯ  ವಕ್ಪ್ ವಿಚಾರದಲ್ಲಿ ಈಗಾಗಲೇ ಹೋರಾಟಕ್ಕೆ ವಿಜಯೇಂದ್ರ ಮೂರು ತಂಡ ರಚಿಸಿದ್ದಾರೆ. ನಾಲ್ಕನೇ ತಂಡ ಯಾವುದೂ ಇಲ್ಲ. ಯತ್ನಾಳ್ ಅವರ ಪ್ರತ್ಯೇಕ ಹೋರಾಟಕ್ಕೆ ವರಿಷ್ಟರ ಅನುಮತಿ ಇಲ್ಲ. ಬಿಜೆಪಿ ವಿರುದ್ದ ಯತ್ನಾಳ್ ಮಾತನಾಡಿದರೆ ಪಕ್ಷಕ್ಕೆ ಮುಜುಗರ ಆಗುತ್ತದೆ. ಇದೇ ರೀತಿ ಮಾತನಾಡಿದರೆ ಅವರ ವಿರುದ್ಧ ದೆಹಲಿಗೆ ಹೋಗಿ ದೂರು ನೀಡಬೇಕಾಗುತ್ತದೆ. ಭ್ರಷ್ಟಾಚಾರದ ಸರದಾರ ಎಂದರೆ ಕಾಂಗ್ರೆಸ್. ಹಣಕಾಸು ತೊಂದರೆಯಿಂದ ಬಿಪಿಎಲ್ ಕಾರ್ಡು ರದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ.ಶಾಸಕರ ಖರೀದಿ ಎಂದು 100 ಕೋಟಿ ಎಂದು ಶಾಸಕ ರವಿ ಗಣಿಗ ಹೇಳುತ್ತಾರೆ. 50 ಶಾಸಕರಿಗೆ 5 ಸಾವಿರ ಕೋಟಿ ಆಗುತ್ತದೆ ಏನು ಟ್ರಕ್ಕಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಾರಾ?. ಅವರು ಕಾಮಿಡಿ ಪೀಸ್ ಆಗಿದ್ದಾರೆ. ಯತ್ನಾಳ್ ಸ್ವಾರ್ಥಕ್ಕೆ ಪ್ರತ್ಯೇಕ ಹೋರಾಟ ಮಾಡುತ್ತಿದ್ದಾರೆ. ವಿಜಯೇಂದ್ರ ಏಳಿಗೆಯನ್ನು ಸಹಿಸಲು ಯತ್ನಾಳ್ ಗೆ ಆಗುತ್ತಿಲ್ಲ. ಇವರಿಗೆ ಇವರೇ ಸ್ವಯಂಪ್ರೇರಿತ ನಾಯಕರಾಗಿದ್ದಾರೆ. ವೈಯಕ್ತಿಕ ಬೇಳೆ ಬೇಯಿಸಲು ಪ್ರತ್ಯೇಕ ಹೋರಾಟ ಅಂತಾ ಹೇಳುತ್ತಾರೆ.ಪ್ರತ್ಯೇಕ ಹೋರಾಟ ಯಾರೂ ಒಪ್ಪುವುದಿಲ್ಲ ಎಂದರು.

ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ ಪಕ್ಷದ ಜೊತೆಗೆ ನಾವೆಲ್ಲಾ ಇದ್ದೇವೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವಂತೆ ಹೈಕಮಾಂಡ್ ಹೇಳಿಲ್ಲ. ಯತ್ನಾಳ್ ಹಿರಿಯರಿದ್ದಾರೆ,  ಅವರು ಈ ರೀತಿ ಮಾತನಾಡಬಾರದು. ಎಲ್ಲರೂ ಒಟ್ಟಾಗಿ ಹೋಗಬೇಕು. ಒಂದು ವೇಳೆ ಅಗತ್ಯ ಬಿದ್ದರೆ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾಗುತ್ತೇವೆ. ಗೃಹ ಲಕ್ಷ್ಮಿ ಒಂದು ತಿಂಗಳು ಬಂದರೆ ಮತ್ತೊಂದು ತಿಂಗಳು ಬರಲ್ಲ. ಯುವ ನಿಧಿ ಒಬ್ಬರಿಗೂ ಬಿಡುಗಡೆ ಆಗಿಲ್ಲ. ಒಂದೂವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಆಪರೇಷನ್ ಕಮಲಕ್ಕೆ ಯಾವ ಮೂರ್ಖನೂ ಕೈ ಹಾಕಲಿಕ್ಕೆ ಆಗಲ್ಲ. ಆಪರೇಷನ್ ಕಮಲಕ್ಕೆ ನಾವು ಯಾರೂ ಕೈಹಾಕಲ್ಲ. ಯಾರೂ ಕೂಡ ಪಕ್ಷಕ್ಕೆ ಅನಿವಾರ್ಯ ಅಲ್ಲ. ಪಕ್ಷದ ವಿರುದ್ಧ ಯಾರೂ ಮಾತಬಾಡಬಾರದು.ಪಕ್ಷದಿಂದ ವಕ್ಪ್ ಹೋರಾಟಕ್ಕೆ ಮೂರು ಟೀಂ ಆಗಿದೆ. ಮೂರು ತಂಡಗಳಲ್ಲಿ ಎಲ್ಲರೂ ಇದ್ದಾರೆ. ಅದರ ಪ್ರಕಾರ ನಾವೆಲ್ಲಾ ಹೋಗಬೇಕು ಎಂದರು.