ಮನೆ Latest News ಹಗರಣ ನಡೆದಾಗ ನಾನು ಮಂತ್ರಿನೂ ಅಲ್ಲ ಸೈಟನ್ನು ಪಡೆದಿಲ್ಲ ಸೈಟನ್ನು ಕೊಟ್ಟು ಇಲ್ಲ; ನಗರ ಅಭಿವೃದ್ಧಿ...

ಹಗರಣ ನಡೆದಾಗ ನಾನು ಮಂತ್ರಿನೂ ಅಲ್ಲ ಸೈಟನ್ನು ಪಡೆದಿಲ್ಲ ಸೈಟನ್ನು ಕೊಟ್ಟು ಇಲ್ಲ; ನಗರ ಅಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿಕೆ

0

ಬೆಂಗಳೂರು: ಹಗರಣ ನಡೆದಾಗ ನಾನು ಮಂತ್ರಿನೂ ಅಲ್ಲ ಸೈಟನ್ನು ಪಡೆದಿಲ್ಲ ಸೈಟನ್ನು ಕೊಟ್ಟು ಇಲ್ಲ ಎಂದು ನಗರ ಅಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಡಿ ನೋಟಿಸ್ ಗೆ ಮಧ್ಯಂತರ ತಡೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಬಹಳ ಕ್ಲಿಯರ್ ಆಗಿದ್ದೇನೆ ನಂದಾಗಲಿ ಮುಖ್ಯಮಂತ್ರಿಗಳ ಪತ್ನಿಯವರದಾಗಲಿ ಪಾತ್ರ ಇಲ್ಲ ಸೊನ್ನೆ .ಆ ರೀತಿ ಪಾತ್ರ ಇಲ್ಲ ಅಂತಾನೇ ಒಪ್ಪಿಕೊಂಡು ಸ್ಟೇ ಕೊಟ್ಟಿದೆ .ನಿನ್ನೆ ಘನತವೆತ್ತ ನ್ಯಾಯಮೂರ್ತಿಗಳು ಕೇಸ್ ಮುಂದಕ್ಕೆ ಹಾಕಿದ್ದಾರೆ. 10ನೇ ತಾರೀಕು ಆದ ಮೇಲೆ ನೋಡೋಣ . ನ್ಯಾಯಾಂಗದ ಮೇಲೆ ಸಂವಿಧಾನದ ಮೇಲೆ ನಾನು ಕಾಂಗ್ರೆಸ್ ಪಕ್ಷ ನಂಬಿಕೆ ಇಟ್ಟುಕೊಂಡಿದೆ.ನ್ಯಾಯಾಲಯದ ಆದೇಶವನ್ನು ನಾವು ಪಾಲಿಸ್ತೇವೆ .ಇಡಿ ಅವರು, ಸಿಬಿಐ ಅವರನ್ನೇ ಕೇಳಬೇಕು ಯಾಕೆ ನೋಟಿಸ್ ಕೊಟ್ಟರು ಅಂತ .ನನಗೆ ನೋಟಿಸ್ ಬಂದಾಗ ಆಶ್ಚರ್ಯ ಆಯ್ತು.ಹಗರಣ ನಡೆದಾಗ ನಾನು ಮಂತ್ರಿನೂ ಅಲ್ಲ ಸೈಟನ್ನು ಪಡೆದಿಲ್ಲ ಸೈಟನ್ನು ಕೊಟ್ಟು ಇಲ್ಲ .ಸೈಟ್ ಹಂಚಿಕೆ ಗೊಂದಲ ಆದ ಮೇಲೆ ಸೈಟ್ ವಾಪಸ್ ಕೂಡ ಕೊಟ್ಟಿದ್ದಾರೆ ಎಂದ್ರು.

ಇದೆಲ್ಲ ನ್ಯಾಯಮೂರ್ತಿಗಳಿಗೆ ಮನದಟ್ಟಾಗಿದೆ ಹಾಗಾಗಿ ಸ್ಟೇ ಕೊಟ್ಟಿದ್ದಾರ.ನನಗೆ ಕೊಟ್ಟಿರುವುದು ಒಂದೇ ನೋಟಿಸ್ .ಸಿಎಂ ಪತ್ನಿಗೆ ಎರಡನೇ ನೋಟಿಸ್ ಕೊಟ್ಟಿದ್ದಾರಾ ಎಂಬ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದು ಭೈರತಿ ಸುರೇಶ್ ಹೇಳಿದ್ದಾರೆ.

ರಾಜಕೀಯ ಪ್ರೇರಿತರಾಗಿ EDಯನ್ನು ಬಳಸುತ್ತಿದ್ದಾರೆ: ವಿಧಾನಸೌಧದಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿಕೆ

ಬೆಂಗಳೂರು: ರಾಜಕೀಯ ಪ್ರೇರಿತರಾಗಿ EDಯನ್ನು ಬಳಸುತ್ತಿದ್ದಾರೆ ಎಂದು ವಿಧಾನಸೌಧದಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿಕೆ ನೀಡಿದ್ದಾರೆ.

ಲೋಕಾಯುಕ್ತ FIR ದಾಖಲು ಮಾಡಿದ ನಂತರ ED ಸಹ ತನಿಖೆ ಆರಂಭ ಮಾಡಿದ್ದು. ಇದೇ ಕಾನೂನು ಬಾಹಿರ ಹೆಜ್ಜೆ. ಲೋಕಾಯುಕ್ತ ತನ್ನ ತನಿಖಾ ವರದಿ ಕೋರ್ಟ್ ಗೆ ಕೊಡುತ್ತಿದೆ.ಉಚ್ಚ ನ್ಯಾಯಾಲಯ ತನಿಖೆ ವರದಿ ಪಡೆಯುತ್ತಿದೆ. ಹೀಗಿದ್ದರೂ ED ತನಿಖೆ ಆರಂಭಿಸಿರುವುದು ಸರಿಯಲ್ಲ.ಮೊದಲೇ ನೋಟಿಸ್ ಗೆ ಕಾಲಾವಕಾಶ ಕೊಡಿ ಅಂತ ಕೇಳಿದ್ದಾರೆ.ಇದರ ಜೊತೆಗೆ ಮತ್ತೊಂದು ನೋಟಿಸ್ ಸಹ‌ ಕೊಟ್ಟಿದ್ದಾರೆ ಎಂದರು.

ಲೋಕಾಯುಕ್ತ ದಾಖಲು ಮಾಡಿ ತನಿಖೆಗೆ ಕೈಗೆತ್ತಿಕೊಂಡಿತ್ತು.ಇಡಿಯವರುವ ಇಸಿಆರ್ ದಾಖಲು ಮಾಡಿದ್ರು.ಲೋಕಾಯುಕ್ತ ತನಿಖೆ ಮಾಡ್ತಿದೆ.ಲೋಕಾಯುಕ್ತ ತನಿಖಾ ವರದಿಯನ್ನು ಕೋರ್ಟ್ ಗೆ ನೀಡುತ್ತಿದೆ.ಅಪರಾಧದ ತನಿಖೆಯನ್ನು ಉಚ್ಚ ನ್ಯಾಯಾಲಯ ನೋಡ್ತಿದೆ.ಇದರ ನಡುವೆ ಇಡಿ ತನಿಖೆ ನಡೆಸೋದು ಕಾನೂನು ಬಾಹಿರ.ಮೂಡಾದ ಹಿಂದಿನ ಆಯುಕ್ತರ ಮನೆ ಸರ್ಚ್ ಮಾಡಿದ್ರು.ಅವರು ರಿಟ್ ಅರ್ಜಿ ಸಲ್ಲಿಸಿದ್ದು, ಅವರ ಪರ ಹೈಕೋರ್ಟ್ ತೀರ್ಪು ನೀಡಿದೆ.ಸಿಎಂ ಪತ್ನಿ, ಬೈರತಿ ಸುರೇಶ್ ಇಬ್ಬರಿಗೂ ನೋಟಿಸ್ ಕೊಟ್ಟು ಹೇಳಿಕೆ ನೀಡುವಂತೆ ಹೇಳಿದ್ರು.ಅವರು ನೋಟಿಸ್ ಗೆ ಉತ್ತರ ಕೊಟ್ಟು ಆರೋಗ್ಯದ ಹಿನ್ನಲೆ ಕಾಲಾವಕಾಶ ಕೊಡಲು ಹೇಳಿದ್ದಾರೆ.ಇಡಿಯವರು ವ್ಯಕ್ತಿಯ ಕುಟುಂಬಸ್ಥರ ಮಾಹಿತಿ ಕೇಳ್ತಿದ್ದಾರೆ.ಅದಕ್ಕೆ ಸಿಎಂ ಪತ್ನಿ, ಬೈರತಿ ಪರ ರಿಟ್ ಅರ್ಜಿ ಸಲ್ಲಿಸಿ ಹೈಕೋರ್ಟ್ ಮೊರೆ ಹೋಗಿದ್ರು.ಇಲ್ಲಿ ಯಾವ ಕ್ರೈಮ್ ಆಗಿಲ್ಲ.ಅದಕ್ಕೆ ಹೈಕೋರ್ಟ್ ತಡೆ ಕೊಟ್ಟು ಫೆ.10ಕ್ಕೆ ವಿಚಾರಣೆ ಮುಂದೂಡಿದ್ದಾರೆ.ರಾಜಕೀಯ ಪ್ರೇರಿತರಾಗಿ EDಯನ್ನು ಬಳಸುತ್ತಿದ್ದಾರೆ.ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವಾರು ವಿಚಾರ ಇರುತ್ತೆ.ಲೋಕಾಯುಕ್ತ ಸಂಸ್ಥೆ ಸ್ವತಂತ್ರ ಸಂಸ್ಥೆ.ಈ ಪ್ರಕರಣ ಸಿಬಿಐಗೆ ಹಸ್ತಾಂತರ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.