ಮನೆ Latest News ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಡಿ ಬಾಸ್ ದರ್ಶನ್ ಗೆ ಆಪರೇಷನ್ ಮಾಡಲು ಬಿಜಿಎಸ್ ವೈದ್ಯರು...

ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಡಿ ಬಾಸ್ ದರ್ಶನ್ ಗೆ ಆಪರೇಷನ್ ಮಾಡಲು ಬಿಜಿಎಸ್ ವೈದ್ಯರು ನಿರ್ಧಾರ

0
darshan bail

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಇದೀಗ ಬೆನ್ನುನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಜಾಮೀನು ಪಡೆದು ಹೊರಗಡೆ ಬಂದ ಬೆನ್ನಲ್ಲೇ ಅವರನ್ನು ನವೆಂಬರ್ 2 ರಂದು ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು 48 ಗಂಟೆ ಗಳ ಒಬ್ಸರ್ವೇಷನ್ ನಲ್ಲಿ ಇರಿಸಿ ಇದೀಗ ದರ್ಶನ್ ಅವರಿಗೆ ಆಪರೇಷನ್ ಮಾಡುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ಹಾಗಾಗಿ ರರಡು ಮೂರು ದಿನಗಳಲ್ಲಿ ಡಿ ಬಾಸ್ ದರ್ಶನ್ ಅವರಿಗೆ ಸರ್ಜರಿ ಮಾಡಲು ವೈದ್ಯರು ನಿರ್ದರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ವೈದ್ಯರು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮತ್ತೊಂದು ಕಡೆ ಮಧ್ಯಂತರ ಜಾಮೀನು ನೀಡುವ ವೇಳೆ ಹೈಕೋರ್ಟ್ ವಾರಕ್ಕೊಮ್ಮೆ ದರ್ಶನ್ ಹೆಲ್ತ್ ರಿಪೋರ್ಟ್ ಕೋರ್ಟ್ ಗೆ ಸಲ್ಲಿಸುವಂತೆ ಹೇಳಿತ್ತು. ಅದರಂತೆ ಈಗಾಗಲೇ ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಹೆಲ್ತ್ ರಿಪೋರ್ಟ್ ನೀಡಿದ್ದಾರೆ ಎನ್ನಲಾಗಿದೆ.

ದರ್ಶನ್ ಅಭಿಮಾನಿಗಳಿಗೆ ದೀಪಾವಳಿ ಬಂಪರ್ ಗಿಫ್ಟ್ಬಳ್ಳಾರಿ ಜೈಲಿನಿಂದ ನಟ ಡಿ ಬಾಸ್ ರಿಲೀಸ್

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ಇಂದು ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆ ಮೂಲಕ 131 ದಿನಗಳ ಬಳಿಕ ನಟ ದರ್ಶನ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ವೈದ್ಯಕೀಯ ಕಾರಣಕ್ಕಾಗಿ ಮಧ್ಯಂತರ ಜಾಮೀನು ಕೋರಿ ನಟ ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೆಲವೊಂದು ಷರತ್ತುಗಳನ್ನು ವಿಧಿಸಿ ದರ್ಶನ್ ಅವರಿಗೆ ಜಾಮೀನು ನೀಡಿದೆ. ನಟ ದರ್ಶನ್ ಅವರ ಪಾಸ್ ಪೋರ್ಟ್ ಅನ್ನು ಕೋರ್ಟ್ ಗೆ ನೀಡಲು ತಿಳಿಸಿಲಾಗಿದೆ. ಅಲ್ಲದೇ ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿ ನೀಡುವಂತೆ ತಿಳಿಸಿದೆ. ಇನ್ನು ಅತ್ತ ಜಾಮೀನು ವಿಚಾರ ಗೊತ್ತಾಗುತ್ತಿದ್ದಂತೆ ಜೈಲಿನಲ್ಲಿ ನಟ ದರ್ಶನ್ ಸಂಭ್ರಮಿಸಿದ್ದಾರೆ ಎನ್ನಲಾಗಿದೆ.ಜೈಲಿನ ಸಿಬ್ಬಂದಿ ಮೂಲಕ ನಟ ದರ್ಶನ್ ಬೇಲ್ ಮಾಹಿತಿ ಪಡೆದುಕೊಂಡಿದ್ದಾರೆ.

ಇನ್ನು ದರ್ಶನ್ ಅವರಿಗೆ ಬೇಲ್ ಸಿಗುತ್ತೆ ಅನ್ನೋ ಧೈರ್ಯದಲ್ಲಿದ್ದ ವಿಜಯಲಕ್ಷ್ಮೀ ದರ್ಶನ್ ಇಂದು  ಬಳ್ಳಾರಿ ಜೈಲ್ ಗೆ ಆಗಮಿಸಿದ್ದರು.ಪತ್ನಿ ವಿಜಯಲಕ್ಷ್ಮಿ, ಸುಶಾಂತ್ ನಾಯ್ಡು, ಬೇಲೂರು ಶ್ರೀನಿವಾಸ  ಆಗಮಿಸಿದ್ದರು. ಬಳಿಕ ದರ್ಶನ್ ಅವರನ್ನು ವಿಜಯಲಕ್ಷ್ಮೀ ಭೇಟಿ ಮಾಡಿದ್ರು. ಇದಾದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿಯ ದುರ್ಗಮ್ಮ ಆಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ವಿಜಯಲಕ್ಷ್ಮೀ ಗೆ ದರ್ಶನ್ ಅಭಿಮಾನಿಗಳು ಸಾಥ್ ನೀಡಿದ್ರು. ಇದೆಲ್ಲಾ ಆದ ಬಳಿಕ ಎಲ್ಲಾ ಕಾನೂನೂ ಪ್ರಕ್ರಿಯೆಗಳನ್ನು ಮುಗಿಸಿ ವಿಜಯಲಕ್ಷ್ಮೀ ದರ್ಶನ್ ಅವರು ನಟ ದರ್ಶನ್ ಅವರನ್ನು ಬೆಂಗಳೂರಿಗೆ ಕರೆ ತಂದರು. ದಾರಿಯುದ್ದಕ್ಕೂ ದರ್ಶನ್ ಅಭಿಮಾನಿಗಳು ಅವರ ಕಾರಿಗೆ ಅಡ್ಡಗಟ್ಟಿ ದರ್ಶನ್ ನೋಡೋದಕ್ಕೆ ಮುಗಿಬಿದ್ರು.

ಅತ್ತ ದರ್ಶನ್ ಗೆ ಜಾಮೀನು ಮಂಜೂರು ಆಗುತ್ತಿದ್ದಂತೆ ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರ ಸಂಭ್ರಮಿಸಿದ್ರು ಎನ್ನಲಾಗಿದೆ. ದರ್ಶನ್ ಗೆ ಜಾಮೀನು ಮಂಜೂರು ಆಗಿದ್ದನ್ನು ಟಿವಿಯಲ್ಲಿ ನೋಡಿ ಫುಲ್ ಖುಷಿಯಾಗಿದ್ರು ಎನ್ನಲಾಗಿದೆ. ತನ್ನಿಂದ ನಟ ದರ್ಶನ್ ಜೈಲು ಸೇರಿದ ಬಗ್ಗೆ ಪವಿತ್ರಾಗೆ ಬೇಸರವಿತ್ತು.ಸದ್ಯ ನಟ ದರ್ಶನ್ ಗೆ ಬೇಲ್ ಸಿಕ್ಕ ಹಿನ್ನೆಲೆ ಪವಿತ್ರಾ ಕೊಂಚ ನಿರಾಳರಾಗಿದ್ದಾರೆ ಎನ್ನಲಾಗಿದೆ.