ಬೆಂಗಳೂರು; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ ರವಿ ಅವಾಚ್ಯ ಶಬ್ದ ಬಳಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು ಇದು ಮುಗಿದು ಹೋದ ಅಧ್ಯಾಯ ಎಂದು ಹೇಳಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ ರವಿ ಅವಾಚ್ಯ ಶಬ್ದ ಬಳಕೆ ಆರೋಪ ಇದು ಮುಗಿದ ಅಧ್ಯಾಯ, ಕೂಲಂಕುಷವಾಗಿ ಚರ್ಚೆ ಮಾಡಿದ್ದೇವೆ. ಸದನದವನ್ನ ಅನಿರ್ದಿಷ್ಟವಾಧಿಗೆ ಮುಂದೂಡಿಕೆ ಬಳಿಕ ಬಂಧನ ಆಗಿತ್ತು. ಎರಡೂ ಕಡೆಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ಹಕ್ಕುಚ್ಯುತಿ ಆಗಿದೆ ಅಂತ ದೂರು ಕೊಟ್ಟರೆ ನಂತರ ಕ್ರಮ ಕೈಗೊಳ್ಳುತ್ತೇವೆ. ಸದನದ ಒಳಗೆ ನಡೆದ ಘಟನೆ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ. FIR ಬಂದಿದೆ, ನಮ್ಮದೇ ಮೂಲಗಳ ಪ್ರಕಾರ ಚರ್ಚೆ ಮಾಡ್ತೀವಿ. ಆದರೆ ಪೊಲೀಸರು ಒಳಗೆ ಬಂದಿಲ್ಲ. ನಮ್ಮಲ್ಲಿ ವೀಡಿಯೋ, ಆಡಿಯೋ ಇದ್ದರೆ ಮಾತ್ರ ಪರಿಗಣನೆ ಮಾಡ್ತೀವಿ. ಬೇರೆ ಯಾರಾದ್ರೂ ಕಳಿಸಿದ್ರೆ ಪರಿಶೀಲನೆಗಾಗಿ FSL ಗೆ ಕಳುಹಿಸುತ್ತೇವೆ.ಸದನ ಮುಗಿದ ಮೇಲೆ ಯಾವುದೇ ವೀಡಿಯೋ ಚಿತ್ರೀಕರಣ ಆಗಿಲ್ಲ ಎಂದಿದ್ದಾರೆ..
ರಾತ್ರಿ ಒಂದೂವರೆ ಗಂಟೆಗಳ ಕಾಲ ನಾನು ಈ ಕೇಸ್ ಟ್ರಾಕ್ ಮಾಡಿದ್ದೀನಿ. ಸಣ್ಣ ಘಟನೆಯಾದ್ರೇ ನೀವೇ ಜವಾಬ್ದಾರಿ ಅಂತ ಪೊಲೀಸರಿಗೆ ತಿಳಿಸಿದ್ದೆ. ನಾನು ಮೂರು ಬಾರಿ ಫೋನ್ ನಲ್ಲಿ ಸಿ.ಟಿ ರವಿ ಜೊತೆಗೆ ಮಾತನಾಡಿದ್ದೆ. ಎನ್ ಕೌಂಟರ್ ಮಾಡೋಕೆ ಇಡೀ ರಾತ್ರಿ ಸುತ್ತಿದಿದ್ರು ಎಂಬ ಜೋಷಿ ಆರೋಪ ವಿಚಾರಕ್ಕೆ ಮಾತನಾಡಿದ ಅವರು ಆ ಬಗ್ಗೆ ನನಗೆ ಗೊತ್ತಿಲ್ಲ, ನನ್ನ ಮುಂದೆ ಯಾರೂ ಹೇಳಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು. ಸಮಿತಿ ರಚನೆ ಬಗ್ಗೆ ಮಾಜಿ ಸಭಾಪತಿಗಳ ಹೇಳಿಕೆಗೆ ಅಂತಹ ಪರಿಸ್ಥಿತಿ ನಿರ್ಮಾಣ ಆಗಿಲ್ಲ. ನಮ್ಮ ಕಂಟ್ರೋಲ್ ಮೀರಿದ್ರೆ ಸಮಿತಿ ರಚನೆ ಮಾಡಬಹುದಿತ್ತು. ಅಂತಹ ಪರಿಸ್ಥಿತಿ ಇಲ್ಲ, BSC ಸಭೆ ಕರೆಯುವ ಅವಶ್ಯಕತೆಯೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮಹಿಳಾ ಆಯೋಗದಿಂದ ಸಭಾಪತಿಗೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿದ ಅವರು ಮಹಿಳಾ ಆಯೋಗ ನಮಗೆ ಪತ್ರ ಬರೆಯುವ ಅವಶ್ಯಕತೆ ಇಲ್ಲ. ನನಗೆ ಯಾವುದೇ ಪತ್ರ ಬರೆದಿಲ್ಲ. ಬರೆಯಲಿ ಆಮೇಲೆ ನೋಡೋಣ. ನನ್ನ ಬಳಿ ಯಾವುದೇ ದೂರು ಬಂದಿಲ್ಲ. ದೂರು ಬಂದ ಮೇಲೆ ನೋಡೋಣ. ಈವರೆಗೆ ನನಗೆ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ.
ಹಿರೇಬಾಗೇವಾಡಿಯಲ್ಲಿ ಹಲ್ಲೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾದ ಬಗ್ಗೆ ಮಾತನಾಡಿದ ಅವರು ಪೊಲೀಸ್ ಕಾಯ್ದೆಗಳು ಏನಿದೆಯೊ ಗೊತ್ತಿಲ್ಲ. ಹಲ್ಲೆಗೆ ಯತ್ನಿಸಿದವರ ವಿರುದ್ಧ ಅವರು ಕ್ರಮ ತೆಗೆದುಕೊಳ್ಳಬಹುದು. ಇಂತಹ ಒಳ್ಳೆಯ ಕ್ಷಣ ಮತ್ತೆ ಬರುವುದಿಲ್ಲ. ಈಗಿವರೆಗೆ ಒಳ್ಳೆಯ ಕಾಲ ಇತ್ತು. ಇನ್ಮುಂದೆ ಯಾವುದೇ ಮೌಲ್ಯಗಳು ಉಳಿಯುವುದಿಲ್ಲ ಎಂದರು.
ಪೊಲೀಸರು ಮಹಜರ್ ಮಾಡೋಕೆ ಬಂದಿದ್ರು. ಆದರೆ ಮಾಡ ಕೂಡದು ಅಂತ ಹೇಳಿದ್ದೇನೆ. ಅನುಮತಿ ಕೇಳಿ ಪೊಲೀಸರು ಬಂದಿದ್ದರು. ಆದರೆ ಅದಕ್ಕೆ ನಾನು ಅವಕಾಶ ಕೊಟ್ಟಿಲ್ಲ ಎಂದರು.