ಬೆಂಗಳೂರು; ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಪುತ್ರ ಚೇತನ್ ಹಾಗೂ ಆಪ್ ಮುಖಂಡ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಸೇರ್ಪಡೆಗೊಂಡ ವೇಳೆ ಮಾತನಾಡಿದ ಅವರು ಮುಂದಿನ ಚುನಾವಣೆಗೂ ಸಿಎಂ ಬೇಕೆ ಬೇಕು ಎನ್ನುವ ಸಚಿವರುಗಳ ಹೇಳಿಕೆ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು. ಅವರು ಎಲ್ಲಾ ಚುನಾವಣೆಗಳಿಗೂ ಬೇಕು.ಹಿ ಇಸ್ ಅವರ್ ಲೀಡರ್ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಎರಡು ಬಾರಿ ಸಿಎಂ ಆಗೋ ಅವಕಾಶ ಕೊಟ್ಟಿದೆ.ದಿನ ಬೆಳಗಾದರೆ ಅವರ ಸುದ್ದಿ ಎತ್ತಿಕೊಂಡು ಅವರ ಹೆಸರು ದುರುಪಯೋಗ ಮಾಡೋದು ಬೇಡ .ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೂ ಸಿಎಂ ಸಿದ್ದರಾಮಯ್ಯ ಬೇಕು. ಹಿ ಈಸ್ ಅವರ್ ಲೀಡರ್. ಎರಡನೇ ಬಾರಿ ಸಿಎಂ ಆಗಿ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿ ಆಹಾರ ಆಗಬಾರದು.ನಮ್ಮಲ್ಲಿ ಗೊಂದಲದ ಯಾವ ಹೇಳಿಕೆಯೂ ಇಲ್ಲ.ಕಾಂಗ್ರೆಸ್ ಪಕ್ಷ ಎಲ್ಲವನ್ನು ಗಮನಿಸುತ್ತಿದೆ ಎಂದರು.
ಇದೇ ವೇಳೆ ಕುಡಿಯುವ ನೀರಿಗಾಗಿ ಪಕ್ಷಾತೀತ ಹೋರಾಟ ಅನ್ನೋ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅವರು ಸಹಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ ಸಹಿ ಮಾಡಿಸಲಿ. ಒಂದೇ ದಿನದಲ್ಲಿ ಪರ್ಮಿಷನ್ ಕೊಡುತ್ತೇನೆ ಅಂದಿದ್ದರು ಕೊಡಿಸಲಿ. ಇದು ಅವರ ಹೋರಾಟ ಅಲ್ಲ ಇದು ರಾಜ್ಯದ ಹೋರಾಟ.ಮಹಾದಾಯಿ ವಿಚಾರ ನಾನು ರಿಕ್ವೆಸ್ಟ್ ಮಾಡಿದ್ದೇನೆ. ಅವರು ಅಧಿಕಾರದಲ್ಲಿ ಇದ್ದಾರೆ ನಾವು ಹೋರಾಟ ಮಾಡಬೇಕಾಗಿದೆ.ನಮಗೆ ರಾಜಕೀಯ ಪಕ್ಷಗಳು ಮಾಡೋ ಅವಶ್ಯಕತೆ ಇಲ್ಲ.ನಾವು ರಾಜಕಾರಣ ಮಾಡಲ್ಲ, ಅವರಿಗೆ ರಾಜಕಾರಣ ಮಾಡಿ ರೂಢಿ ಇದೆ. ಅದರ ಅವಶ್ಯಕತೆ ಇಲ್ಲ.ನಮಗೆ ಸಿಕ್ಕ ಅವಕಾಶದಲ್ಲಿ ಹೋರಾಟ ಮಾಡಿದ್ದೇವೆ.ನಾವು ಹೋರಾಟ ಮಾಡಿದಾಗ ಯಾವ ರೀತಿ ಟೀಕೆ ಮಾಡಿದ್ರು ಗೊತ್ತಿದೆ. ಆದರೂ ಚಿಂತೆಯಿಲ್ಲ ಅದನ್ನೆಲ್ಲಾ ಮರೆತು ರಾಜ್ಯದ ಹಿತಕ್ಕೆ ಕೆಲಸ ಮಾಡ್ತೀವಿ.ಮೇಕೆದಾಟು, ಮಹದಾಯಿ, ಅಪ್ಪರ್ ಭದ್ರ ಯಾವುದೇ ವಿಚಾರ ಇರಲಿ. ಮಾತಾಡೋವ್ರು ಒಂದು ದಿನನಾದ್ರೂ ಸಂಸತ್ ನಲ್ಲಿ ಹಣ ಕೇಳಿದ್ರಾ?.ಬಜೆಟ್ ನಲ್ಲಿ ಈ ಯೋಜನೆಗಳಿಗೆ ೫ ಸಾವಿರದ ೪೦೦ ಕೋಟಿ ಘೋಷಣೆ ಆಗಿದೆ ಅದನ್ನ ಕೊಡಿ ಅಂತ ಕೇಳಲಿಲ್ವಾ?. ನಾನು ಕುಮಾರಸ್ವಾಮಿ, ದೇವೇಗೌಡರು ಸೇರಿ ಸಂಸದರ ಬಳಿ ಇದನ್ನ ನಿರೀಕ್ಷೆ ಮಾಡಿದ್ದೆ.ಆದರೆ ಒಬ್ಬರೂ ಕೂಡ ಇದನ್ನ ಕೇಳಲಿಲ್ಲ. ಅವರು ಒಕ್ಕೊರಲಿನಿಂದ ರಾಜ್ಯದ ಹಿತ ಕಾಯ್ತಾರೆ ಅಂದುಕೊಂಡಿದ್ದೆ.ಅದರಲ್ಲಿ ವಿಫಲ ಆಗಿದ್ದಾರೆ ಅದನ್ನ ಮಾಡಲಿ ಮೊದಲು ಎಂದು ತಿರುಗೇಟು ಕೊಟ್ರು.
ಕಾವೇರಿ- ಗೋದಾವರಿ ಜೋಡಣೆ ಮಾಡಲಿ ಎಂಬ ದೇವೇಗೌಡರ ಹೇಳಿಕೆ ಪ್ರತಿಕ್ರಿಯಿಸಿ ಮಾಡಲಿ ಬಹಳ ಸಂತೋಷ. ತರಲಿ ಮೊದಲು ಯೋಜನೆ. ಏನು ಬೇಕು ನಮ್ಮಿಂದ ಸಪೋರ್ಟ್ ಕೊಡ್ತೀವಿ.ಇಲ್ಲಿಂದಲೇ ನಾವು ಸಾಷ್ಟಾಂಗ ನಮಸ್ಕಾರ ಹಾಕ್ತೀವಿ. ಬೆಂಗಳೂರು ನೀರಿಗೆ ಏನು ಬೇಕೋ ಅದನ್ನ ಮಾಡ್ತಾ ಇದ್ದಾರೆ. ಅವರ ಪಕ್ಷದ ಕಡೆಯಿಂದ ಗೊಂದಲ ಹೇಳಿಕೆ ಕೊಡಿಸ್ತಾ ಇದ್ದಾರೆ .ಡಿಸಿ ತಮ್ಮಣ್ಣ ಅವರಿಗೆ ಅಂಕಿ ಅಂಶ ಗೊತ್ತಿಲ್ಲ.ಎಷ್ಟು ಏನು ನೀರು ಲಾಸ್ ಆಗ್ತಿದೆ ಅಂತ ಗೊತ್ತಿಲ್ಲ. ಡಿಪಿಆರ್ ಮಾಡಿದ್ದಾರೆ ಅಷ್ಟೆ ನಾವು ತೀರ್ಮಾನ ಮಾಡಿಲ್ಲ.ನಾವು ಬಂದ ತಕ್ಷಣ 6 ಟಿಎಂಸಿ ನೀರು ಹುಡುಕಿ ನಾವು ಸ್ಟೋರೇಜ್ ಏನು ಕೊಡಬಹದು ಅಂತ ನೋಡಿ ಸರ್ಕಾರದ ಆರ್ಡರ್ ಮಾಡಿಸಿದ್ವಿ ಎಂದ್ರು.
ಬೆಂಗಳೂರಲ್ಲಿ ೧೫೦ ಕಿಮೀ ಕಾಮಗಾರಿ ಆಗ್ತಿದೆ. ೩೦ ವರ್ಷ ಏನೂ ಆಗಬಾರದು. ೧೫೦೦ ಕೋಟಿ ಹೂಡಿಕೆ ಮಾಡ್ತಿದ್ದೇವೆ. ಮಳೆ ಬಂದಿದೆ. ಹೀಗಾಗಿ ಲೇಟ್ ಆಗಿದೆ. ಕ್ವಾಲಿಟಿ ಮೇಂಟೇನ್ ಮಾಡ್ತಿದ್ದೀನಿ. ನನಗೂ ಅರಿವಿದೆ, ನಾನು ಚೆಕ್ ಮಾಡಿದ್ದೀನಿ. ಟೆಕ್ನಿಕಲ್ ಟೀಮ್ ಪರಿಶೀಲನೆ ಮಾಡ್ತಿದೆ ಎಂದು ಸ್ಪಷ್ಟಪಡಿಸಿದ್ರು.