ಮನೆ Latest News ಸದ್ಯಕ್ಕಿಲ್ಲ ನಟ ಡಿ ಬಾಸ್ ದರ್ಶನ್ ಗೆ ಬಿಡುಗಡೆ ಭಾಗ್ಯ; ದರ್ಶನ್ ಹಾಗೂ ಪವಿತ್ರ...

ಸದ್ಯಕ್ಕಿಲ್ಲ ನಟ ಡಿ ಬಾಸ್ ದರ್ಶನ್ ಗೆ ಬಿಡುಗಡೆ ಭಾಗ್ಯ; ದರ್ಶನ್ ಹಾಗೂ ಪವಿತ್ರ ಗೌಡ ಇಬ್ಬರ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರು ಜಾಮೀನು ಕೋರಿ ಸೆಪ್ಟಂಬರ್ 21 ರಂದು ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ಅಂದು ಆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ಸೆಪ್ಟಂಬರ್ 23ಕ್ಕೆ ವಿಚಾರಣೆಯನ್ನು ಮುಂದೂಡಿದ್ದರು. ಸೆಪ್ಟಂಬರ್ 23 ರಂದು ಮತ್ತೆ ವಿಚಾರಣೆ ಸೆಪ್ಟಂಬರ್ 27ಕ್ಕೆ ಮುಂದೂಡಿಕೆಯಾಗಿತ್ತು. ಅದರಂತೆ ಸೆಪ್ಟಂಬರ್ 27 ರಂದು ಬೆಂಗಳೂರಿನ ಸೇಷನ್ಸ್ ಕೋರ್ಟ್ ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ್ದಂತಹ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಕೈಗೆತ್ತಿಕೊಂಡರು. ಈ ವೇಳೆ  ಸರ್ಕಾರದ ಪರವಾದ ವಕೀಲರಾದ ಪ್ರಸನ್ನಕುಮಾರ್ ಅವರು ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಹೀಗಾಗಿ ದರ್ಶನ್ ಪರ ವಾದ ಮಂಡನೆಗೆ ದರ್ಶನ್ ಪರ ವಕೀಲರಾದ ಸುನಿಲ್ ಕಾಲಾವಕಾಶ ಕೋರಿದರು. ಮನವಿಯನ್ನು ಪುರಸ್ಕರಿಸಿ ಕೋರ್ಟ್ ಸೆಪ್ಟೆಂಬರ್ 30 ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿತ್ತು.

ಅದರಂತೆ ಇಂದು  ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು.ಈ ವೇಳೆಯಲ್ಲಿ ಕೋರ್ಟ್ ಗೆ ನಟ ದರ್ಶನ್ ಪರ ವಕೀಲರು ದರ್ಶನ್ ಪರವಾಗಿ ವಾದ ಮಂಡಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಮನವಿ ಮಾಡಿದ್ರು. ಹೀಗಾಗಿ ವಿಚಾರಣೆಯನ್ನು ಅಕ್ಟೋಬರ್.4ಕ್ಕೆ ಮುಂದೂಡಲಾಯಿತು. ಇನ್ನು ಬಾಲ್ ಯಾವಾಗ ಹೊರಗೆ ಬರ್ತಾರೆ ಅಂತಾ ದರ್ಶನ್ ಅವರ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಮತ್ತೆ ಮತ್ತೆ ಡಿ ಬಾಸ್ ಜಾಮೀನು ಅರ್ಜಿ ಮುಂದೂಡಿಕೆಯಾಗುತ್ತಿರೋದು ದರ್ಶನ್ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಇನ್ನು ಪ್ರಕರಣದ ಎ1 ಆರೋಪಿ ಪವಿತ್ರ ಗೌಡ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ  ನಡೆಯಿತು. ಇವಳೇ ಪವಿತ್ರ ಗೌಡ ಪರ ವಕೀಲರು ವಾದ ಮಂಡಿಸಿದರು. ವಾದ ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಮತ್ತೊಂದು ಕಡೆ ಪ್ರಕರಣದ ಮತ್ತೋರ್ವ ಆರೋಪಿವ ರವಿಶಂಕರ್ ಜಾಮೀನು ಅರ್ಜಿಯ ವಿಚಾರಣೆಯನ್ನು ಕೂಡ ಕೋರ್ಟ್ ಮಂದೂಡಿದೆ.

ರೇಣುಕಾಸ್ವಾಮಿ ಕೇಸ್ ನಲ್ಲಿ ಮೂವರು ಆರೋಪಿಗಳಿಗೆ ಜಾಮೀನು; ಬೇಲ್ ಸಿಕ್ರೂ ಇನ್ನೂ ಜೈಲಿನಲ್ಲಿದ್ದಾರೆ ಆರೋಪಿಗಳು

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಪು ಜೈಲು ಸೇರಿ ಬರೋಬ್ಬರಿ ಮೂರು ತಿಂಗಳಾಯಿತು. ಹೀಗುರುವಾಗಲೇ ಮೊನ್ನೆ ಪ್ರಕರಣದ ಮೂವರು ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿತ್ತು. ಪ್ರಕರಣದ ಎ15, ಎ16, ಎ17 ಆರೋಪಿಗೆ ಜಾಮೀನು ಮಂಜೂರಾಗಿತ್ತು. ಆದರೆ ಜಾಮೀನು ಮಂಜೂರಾದ್ರೂ ಇನ್ನೂ ಈ ಮೂವರು ಆರೋಪಿಗಳು ಜೈಲಿನಲ್ಲೇ ಇರುವಂತಾಗಿದೆ.

ಹೌದು.. ಪ್ರಕರಣದ ಎ15 ನಿಖಿಲ್ ನಾಯಕ್, ಎ 17 ಕಾರ್ತಿಕ್ ಗೆ 57ನೇ ಸಿಸಿಹೆಚ್ ಕೋರ್ಟ್ ಮೊನ್ನೆ ಬೇಲ್ ಮಂಜೂರು ಮಾಡಿತ್ತು. ಎ 16 ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಬೇಲ್ ಸಿಕ್ಕಿ ಮೂರು ದಿನಗಳಾದ್ರೂ ಇನ್ನು ಕೂಡ ಆರೋಪಿಗಳು ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ.  ಮೊನ್ನೆ ಜಾಮೀನು ಪಡೆದ ಈ ಮೂವರು ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ. ಆದರೆ ಜಾಮೀನು ನೀಡುವ ವೇಳೆ ಇವರಿಗೆ ಕೋರ್ಟ್ ಷ್ಯೂರಿಟಿ ಕೇಳಿದೆ. ಆದರೆ ಷ್ಯೂರಿಟಿ ನೀಡಲು ಸಾಧ್ಯವಾಗದೇ ಇರೋದರಿಂದ ಆರೋಪಿಗಳು ಸದ್ಯ ಜೈಲಿನಲ್ಲೇ ಇದ್ದಾರೆ.

ಯಾರಾದರು ಷ್ಯೂರಿಟಿ ನೀಡಿದ ಬಳಿಕ  ಕೋರ್ಟ್ ಆದೇಶ ಬಂದ ನಂತರವಷ್ಟೇ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಬೇಕಿದೆ. ಅಲ್ಲಿಯವರೆಗೂ ಜಾಮೀನು ಸಿಕ್ರೂ ಮೂವರಿಗೂ ಜೈಲೇ ಗತಿ ಎಂಬಂತಾಗಿದೆ.