ಮನೆ Latest News ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯದ ಸಂಸದ ಬಿ ವೈ ರಾಘವೇಂದ್ರ

ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯದ ಸಂಸದ ಬಿ ವೈ ರಾಘವೇಂದ್ರ

0

ಬೆಂಗಳೂರು: ಸಂಸದ ಬಿ ವೈ ರಾಘವೇಂದ್ರ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಬಿ ವೈ ರಾಘವೇಂದ್ರ ನಮ್ಮ ರಾಜ್ಯದ ಡಿಸಿಎಂ ಅವರನ್ನ ಭೇಟಿ ಮಾಡಿದ್ದೇನೆ. ಮಗನ ಮದುವೆ ಕಾರ್ಯಕ್ರಮ ಕ್ಕೆ ಆಹ್ವಾನ ನೀಡೋಕೆ ಬಂದಿದ್ದೆ. ಸಮಯದ ಕೇಳಿದ್ದೆ, ಇವತ್ತು ಕೊಟ್ಟಿದ್ದರು.. ಹೀಗಾಗಿ ಬಂದಿದ್ದೇನೆ. ಆಮಂತ್ರಣ ಕೊಟ್ಟಿದ್ದಕ್ಕೆ ಬಂದಿದ್ದೇನೆ ಎಂದರು.

ನಿನ್ನೆಯಷ್ಟೇ ಡಿಸಿಎಂ ಭೇಟಿಯಾಗಿದ್ದ ಸಿದ್ದೇಶ್ವರ ವಿಚಾರದ ಬಗ್ಗೆ ಮಾತನಾಡಿದ ಅವರು ಅಧಿಕಾರದಲ್ಲಿದ್ದಾಗ, ಸರ್ಕಾರ ಇದ್ದಾಗ ಅಭಿವೃದ್ಧಿ ಕುರಿತಂತೆ ಎಲ್ಲರೂ ಬರ್ತಾರೆ. ಚುನಾಯಿತ ಪ್ರತಿನಿಧಿಗಳು ಬರೋದು ಸಹಜ.ನಾನು ಕೂಡ ಬಂದಿರೋ ಮಗನ ಮದ್ವೆಗೆ ಆಹ್ವಾನ ನೀಡೋಕೆ ಬಂದಿದ್ದೇನೆ ಎಂದ್ರು. ಇದೇ ವೇಳಎ ಜಾತಿಗಣತಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲಿ ರಾಜಕೀಯ ಪಕ್ಷವಾಗಿ ರಾಜಕೀಯ ವಿರೋಧ ಮಾತಾಡೋದಕ್ಕಿಂತ ಅನೇಕ ಸಮಾಜಗಳು ವ್ಯತಿರಿಕ್ತವಾಗಿ ಮಾತಾಡ್ತಿದ್ದಾರೆ.ಎಲ್ಲವನ್ನೂ ಕುಲಂಷವಾಗಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ರು.

ಬೇರೆ ವಿಚಾರ ಏನಿಲ್ಲ, ಕೇವಲ ಮದ್ವೆ ಆಮಂತ್ರಣ ಕೋಡೋದಕ್ಕೆ ನಾನು ಬಂದಿದ್ದೇನೆ.ಅಧಿಕಾರದಲ್ಲಿದ್ಸಾಗ, ಸರ್ಕಾರ ಇದ್ದಾಗ ಅಭಿವೃದ್ಧಿ ವಿಚಾರ ದಲ್ಲಿ ಬರೋದು ಸಹಜ.. ಅದರಲ್ಲಿ ಬೇರೆಯದ್ದು ಏನಿಲ್ಲ. ಬೇರೆ ಅರ್ಥ ಕಲ್ಪಿಸುವ ಅಗತ್ಯ. ವಿಲ್ಲ, ನಾನು ಮಗನ ಮದ್ವೆಗೆ ಆಮಂತ್ರಣ ಕೊಟ್ಟಿದ್ದೇನೆ ಎಂದ್ರು. ಜಾತಿ ಗಣತಿ ವಿಚಾರದಲ್ಲಿ ರಾಜಕೀಯ ಪಕ್ಷ ವಾಗಿ ಪರ ವಿರೋಧ ಚರ್ಚೆ ಏನಿಲ್ಲ. ಸಮಾಜಗಳು ಅವರರವ ಹೇಳಿಕೆ ನೀಡುತ್ತದೆ.ಅದನ್ನ ಗಣನೆಗೆ ತೆಗೆದುಕೊಂಡು ಚರ್ಚೆ ಮಾಡಬೇಕಾಗಿದೆ.ಸಾದಕ ಬಾದಕ ನೋಡಬೇಕು ಎಂದು ನಾನು ವಿನಂತಿ ಮಾಡೋದುತ್ತೇನೆ ಎಂದ್ರು.

ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರದ ಬಗ್ಗೆ ಮಾತನಾಡಿದ ಅವರು  ಸೆಕ್ಯುರಿಟಿ ವಿಚಾರ ಇಟ್ಟುಕೊಂಡು ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿ ಕಸದ ಬುಟ್ಟಿಗೆ ಹಾಕುವ ಕೆಲಸ ಮಾಡಿದ್ದಾರೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು..ಧರ್ಮದ ಮೇಲೆ ಪ್ರಹಾರ ಆಗುತ್ತಿದೆ . ಕೇವಲ ಎಫ್ ಐಆರ್ ಸಾಕಾಗಲ್ಲ, ಎಚ್ಚರಿಕೆ ಕ್ರಮ ಆಗಬೇಕು. ಈ ಸರ್ಕಾರ ಬಂದ ಬಳಿಕ ಈ ರೀತಿಯ ಘಟನೆ ಆಗುತ್ತಿದೆ. ಸರ್ಕಾರದ ಶಹಬಾಸ್ ಗಿರಿ ಪಡೆಯಲು ಅಧಿಕಾರಿಗಳು ಈ ಕೆಲಸ ಮಾಡಿದ್ದಾರೆ ಎಂದ್ರು. ಡಿಸಿಎಂ ಹಾಗೂ ಕೆಲವು ಸಚಿವರನ್ನು ಭೇಟಿ ಮಾಡಿದ್ದೇನೆ ಅಭಿವೃದ್ಧಿ ಕಾರ್ಯ ಇಟ್ಟುಕೊಂಡು ಭೇಟಿ ಮಾಡಿದ್ದೇನೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಅನೇಕ ಭಕ್ತರು ಹೋಗುತ್ತಾರೆ. ಮಂಗಳೂರು, ಗೋವಾ ದೂರ ಇದೆ. ಹಾಗಾಗಿ ಬೈಂದೂರಿಗೆ ಒಂದು ಏರ್ ಸ್ಟ್ರಿಪ್ ಆಗಬೇಕಿದೆ. ಗಣ್ಯರು ಬಂದಾಗ ಏರ್ ಸ್ಟ್ರಿಪ್ ಬಳಕೆ ಆಗಬೇಕು. ಅದಕ್ಕಾಗಿ 500 ಎಕರೆ ಜಾಗ ಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಹಕಾರ ಬೇಕಿದೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಕೇಂದ್ರದಿಂದಲೂ ಹಣಕಾಸು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದ್ರು.