ಮನೆ Latest News ಸಿದ್ಧರಾಮಯ್ಯ ಯಾವ ರೀತಿ ಸಿಎಂ ಸ್ಥಾನ ಬಿಡುತ್ತಿಲ್ಲವೋ ಹಾಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ...

ಸಿದ್ಧರಾಮಯ್ಯ ಯಾವ ರೀತಿ ಸಿಎಂ ಸ್ಥಾನ ಬಿಡುತ್ತಿಲ್ಲವೋ ಹಾಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ : ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

ಬೆಂಗಳೂರು; ಸಿದ್ಧರಾಮಯ್ಯ ಯಾವ ರೀತಿ ಸಿಎಂ ಸ್ಥಾನ ಬಿಡುತ್ತಿಲ್ಲವೋ ಹಾಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಸಿದ್ಧರಾಮಯ್ಯ ಯಾವ ರೀತಿ ಸಿಎಂ ಸ್ಥಾನ ಬಿಡುತ್ತಿಲ್ಲವೋ ಹಾಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ. ಸುರ್ಜೇವಾಲಾ ಮೊನ್ನೆ ಬಹಿರಂಗ ಮಾತಾಡಬೇಡಿ ಅಂದರು. ನಿನ್ನೆಯಿಂದಲೇ ಎಲ್ಲರೂ ಬಹಿರಂಗ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಜನರ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇವರಿಗೆ ಯಾವುದನ್ನೂ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಆರ್ಥಿಕ ದುಸ್ಥಿತಿಯತ್ತ ಹೋಗುತ್ತಿದೆ. ಕಾಂಗ್ರೆಸ್ ನವರು ಆಡಳಿತ ಮರೆತು ದೆಹಲಿಗೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಗೆ ಹೋಗುವವರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕಾಂಗ್ರೆಸ್ ಸರ್ಕಾರ ಬೀಳುವುದು ಬೆಳಗಾವಿಯಿಂದಲೇ ಎಂದ ಆರ್ ಅಶೋಕ್  ಒಂದು ಕಡೆ ಸತೀಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್ ನಡೆಯುತ್ತಿದೆ. ಇನ್ನೊಂದು ಕಡೆ ಸತೀಶ್ ಜಾರಕಿಹೊಳಿ ವರ್ಸಸ್ ಡಿ.ಕೆ. ಶಿವಕುಮಾರ್ ಮಧ್ಯೆ ವಾರ್ ನಡೆಯುತ್ತಿದೆ. ಎಲ್ಲದಕ್ಕೂ ಸಿದ್ದರಾಮಯ್ಯ ಸೂತ್ರಧಾರಿ. ಸಿದ್ದರಾಮಯ್ಯ ಪರ ಎಲ್ಲರೂ ಫೀಲ್ಡಿಗಿಳಿದು ಬ್ಯಾಟ್ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬಂಟಿ ಆಗಿದ್ದಾರೆ. ಹಾಗಾಗಿ ಹೈಕಮಾಂಡ್ ಪಾದವೇ ಗತಿ ಅಂತ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಬಳಿ ಕೂತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಶಾಸಕ ರಮೇಶ್ ಜಾರಕಿಹೊಳಿ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಪಕ್ಷದ ಶಿಸ್ತಿನ ಸಿಪಾಯಿ. ಏನೇ ಇದ್ದರೂ ನಾನು ಪಕ್ಷದ ವೇದಿಕೆಯಲ್ಲೇ ಮಾತಾಡುತ್ತೇನೆ. ಪಕ್ಷದ ವೇದಿಕೆ ಬಿಟ್ಟು ಹೊರಗೆ ಮಾತಾಡುವುದಿಲ್ಲ. ಈಗಾಗಲೇ ನಾನು ಹೈಕಮಾಂಡ್ ಭೇಟಿ ಮಾಡಿ ಏನು ಹೇಳಬೇಕೋ ಹೇಳಿದ್ದೇನೆ. ನಮ್ಮ ಪಕ್ಷದಲ್ಲಿ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿರುವ ಬಗ್ಗೆ ಹೈಕಮಾಂಡ್ ಗಮನಕ್ಕೆ ಬಂದಿದೆ. ಅವೆಲ್ಲವನ್ನೂ ಹೈಕಮಾಂಡ್ ನವರೇ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವಿಚಾರದ ಬಗ್ಗೆ ಮಾತನಾಡಿದ ಅವರು ವರದಿಗೆ ನಮ್ಮ ವಿರೋಧ ಇಲ್ಲ. ಜಾತಿ ಗಣತಿ ಎಲ್ಲರೂ ಒಪ್ಪುವಂತೆ ಆಗಬೇಕು.ಎಲ್ಲಾ ಮನೆಗಳ ಸಮೀಕ್ಷೆ ಆಗಬೇಕು. ಆದರೆ ಇವರು ಒಕ್ಕಲಿಗರನ್ನು, ಲಿಂಗಾಯತರನ್ನು ಒಡೆದಿದ್ದಾರೆ, ವಿಭಜಿಸಿದ್ದಾರೆ. ಇದೆಲ್ಲಾ ಸಿದ್ದರಾಮಯ್ಯ ಟ್ರಿಕ್ಸ್. ವೈಜ್ಞಾನಿಕವಾಗಿ ಜಾತಿ ಗಣತಿ ಆಗಬೇಕು. ಈಗ ಕೇಂದ್ರದಿಂದಲೂ ಜನಗಣತಿ ಆಗುತ್ತಿದೆ, ಇದರಲ್ಲೇ ಎಲ್ಲವೂ ಬರುತ್ತದೆ. ಹತ್ತು ವರ್ಷ ಸುಮ್ಮನಿದ್ದು ಈಗ ಜಾತಿ ಗಣತಿ ಜಾರಿಗೆ ತರುತ್ತೇವೆ ಅಂದರೆ ಹೇಗೆ?. ಕೇಂದ್ರದ ಜನಗಣತಿಗೂ ಇವರ ಗಣತಿಗೂ ಸಂಘರ್ಷ ಆಗುತ್ತದೆ. ಈಗಾಗಲೇ ಜಾತಿ ಜನಗಣತಿ ವರದಿಯಲ್ಲಿ ಏನಿದೆ ಅಂತ ಎಲ್ಲರಿಗೂ ಗೊತ್ತಾಗಿದೆ. ಸಿದ್ದರಾಮಯ್ಯ ಡಬಲ್ ಗೇಮ್ ಅಷ್ಟೇ ಅಲ್ಲ, ತ್ರಿಬಲ್ ಗೇಮ್ ಗೇಮ್ ಆಡುತ್ತಿದ್ದಾರೆ. ಮುಂದಿನ ಕ್ಯಾಬಿನೆಟ್ ನಲ್ಲಿ ತರುತ್ತೇವೆ ಅಂತಿರುವುದೂ ನಾಟಕವೇ ಎಂದು ತಿಳಿಸಿದ್ದಾರೆ.