ಮನೆ Latest News ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರ;ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಗಲಾಟೆ

ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರ;ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಗಲಾಟೆ

0

 

ಬೆಂಗಳೂರು; ಯೂನಿವರ್ಸಿಟಿಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕದಲ್ಲಿ ಅನ್ಯಾಯ ಆಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರು ಗಲಾಟೆ ಮಾಡಿದ ಘಟನೆ ನಡೆದಿದೆ.ಸಿಂಡಿಕೇಟ್ ಸದಸ್ಯರ ನೇಮಕಕ್ಕೆ ಸಚಿವರ ವಿರುದ್ದ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ಸಿಂಡಿಕೆಟ್ ಸದಸ್ಯರ ನೇಮಕಾತಿ ವೇಳೆ RSS ಬಿಜೆಪಿ ಸದಸ್ಯರಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಸಚಿವ ಡಾ.ಎಂಸಿ ಸುಧಾಕರ್ ಹಾಗೂ ಮಧು ಬಂಗಾರಪ್ಪ ಕಾರ್ಯಕರ್ತರ ಅಹವಾಲು ಆಲಿಸಲು ಕೆಪಿಸಿಸಿಗೆ ಬಂದಿದ್ದರು.ಈ ವೇಳೆ ಸಚಿವ ಎಂ.ಸಿ ಸುಧಾಕರ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.ಸಮೀವುಲ್ಲಾ ಅನ್ನೋರು ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಸಮಾಜಾಯಿಷಿ‌ ಕೊಡಲು ಮುಂದಾಗಿದ್ದಾರೆ ಸಚಿವ ಸುಧಾಕರ್.ಸಚಿವರ ಮಾತಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತಷ್ಟು ಕೆರಳಿದ್ದಾರೆ.ನಾನು ಯಾವ ನೇಮಕಾತಿಯನ್ನು ನೇರವಾಗಿ ಮಾಡಿಲ್ಲ.ಮುಖ್ಯಮಂತ್ರಿಗಳ ಕಚೇರಿಯ ವಿವೇಚನೆಯ ಮೇಲೆಯೇ ತೀರ್ಮಾನ ಮಾಡಲಾಗಿದೆನಿಮಗೆ ಸಂಶಯ ಇದ್ರೆ ನೇರವಾಗಿ ಮುಖ್ಯಮಂತ್ರಿ ಬಳಿ ಮಾತನಾಡಿ.ಏನಾಗಿದೆ ಎಂಬುದನ್ನು ಮುಖ್ಯಮಂತ್ರಿಗಳೇ ಉತ್ತರ ಕೊಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಮೇಲೆ ಸಚಿವ ಎಂಸಿ ಸುಧಾಕರ್  ಆರೋಪ ಹೊರಿಸಿದ್ದಾರೆ.

ಸಮೀವುಲ್ಲಾ ಖಾನ್  ಅನ್ನೋರು ಸಚಿವರ ಮಾತಿಗೆ ಸಮಾಧಾನಗೊಳ್ಳದೇ ಟೇಬಲ್ ಕುಟ್ಟಿ ಆಕ್ರೋಶ ಹೊರ ಹಾಕಿದ್ದಾರೆ.ಮೂರು ವರ್ಷದಿಂದ ಪಾರ್ಟಿಯಲ್ಲಿದ್ದೇನೆ .ಸಿಂಡಿಕೇಟ್ ಲಿಸ್ಟ್ ಮಾಡಿದ್ದಾರೆ .ಎಲ್ಲಾ ಬಿಜೆಪಿ ಆರ್.ಎಸ್.ಎಸ್ ಅವರಿಗೆ ಮಾಡಿದ್ದಾರೆ.ಹೊಸ ಸಿಂಡಿಕೇಟ್ ಸದಸ್ಯರ ನೇಮಕ ಮಾಡಿ ಎಂದು ಟೇಬಲ್ ಕುಟ್ಟಿ ಸಮೀವುಲ್ಲಾ ಖಾನ್   ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಸಿಂಡಿಕೇಟ್ ಸದಸ್ಯರ ನೇಮಕದಲ್ಲಿ ಬೇಸರ ವಿಚಾರವಾಗಿದೆ ಎಂಬ ಬಗ್ಗೆ ಮಾತನಾಡಿದ ಸಚಿವ ಎಂಸಿ ಸುಧಾಕರ್ ಪಕ್ಷದ ವೇದಿಕೆಯಲ್ಲಿ ಇದನ್ನು ಹೇಳಿದ್ದಾರೆ.ಸಿಂಡಿಕೇಟ್ ಸದಸ್ಯರ ನೇಮಕದ ಸಂದರ್ಭದಲ್ಲಿ 6 ಮಂದಿಗೆ ಮಾತ್ರ ಅವಕಾಶ ಇರುತ್ತದೆ.ಕೆಲವು ವಿವಿಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ.ಎಲ್ಲಾದ್ರೂ ಒಂದು ಕಡೆ ನಮಗೆ ಅವಕಾಶ ನೀಡಬೇಕು ಎಂದು ಆಗ್ರಹ ಇದೆ.ರಾಜ್ಯಪಾಲರು ಹಿಂದೆ ಮಾಡಿದ ನೇಮಕವನ್ನು ನಾವು ಪ್ರಶ್ನೆ ಮಾಡಲು ಹೋಗಲ್ಲ.ನಮ್ಮ ಇಲಾಖೆ ಮೇಲೆ ಬಹಳಷ್ಟು ಒತ್ತಡವಿದೆ.ಸಿಎಂ ಮೇಲೆಯೂ ಕೂಡ ಸಾಕಷ್ಟು ಒತ್ತಡ ಇತ್ತು.ಫೈಲ್ ಪೂರ್ತಿ ಸಿಎಂ ಕಚೇರಿಗೆ ರವಾನಿಸಿದ್ದೆವು.ನಾನು ಯಾವುದಕ್ಕೂ ಸಹಿ ಹಾಕಿಲ್ಲ.ಸಿಎಂ ಅಳೆದು ತೂಗಿ ಸಾಧ್ಯ ಆದಷ್ಟು ಸಿಂಡಿಕೇಟ್ ಸದಸ್ಯರ ನೇಮಕ ಮಾಡಿದ್ದಾರೆ. ಹೈಕಮಾಂಡ್ ಗೆ ದೂರು ಹೋಗಿರುವ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಎಂದರು.