ಮನೆ Latest News ವಯನಾಡು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸೇನಾ ಸಿಬ್ಬಂದಿಗೆ ಭಾವನಾತ್ಮಕ ವಿದಾಯ

ವಯನಾಡು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸೇನಾ ಸಿಬ್ಬಂದಿಗೆ ಭಾವನಾತ್ಮಕ ವಿದಾಯ

0

ಕೇರಳ; ವಯನಾಡು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 413ಕ್ಕೆ ಏರಿಕೆಯಾಗಿದೆ. ಇನ್ನು ಕೂಡ 150 ಕ್ಕೂ ಹೆಚ್ಚು  ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಭಾರತೀಯ ಸೇನೆ, ಪೊಲೀಸರು, ಸ್ಥಳೀಯರು, ಸಂಘ ಸಂಸ್ಥೆಗಳ ನೆರವಿನಿಂದ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ 1 ಸಾವಿರಕ್ಕೂ ಹೆಚ್ಚು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಯನಾಡಿನ ಚಾಲಿಯಾರ್ ನದಿ ಹಾಗೂ ಮಲಪ್ಪುರಂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ರು. ಇನ್ನು  ಕಾರ್ಯಾಚರಣೆಯ ಸಮಯದಲ್ಲಿ ಒಟ್ಟು 78 ಮೃತದೇಹಗಳು ಮತ್ತು 150ಕ್ಕೂ ಹೆಚ್ಚು ದೇಹದ ಭಾಗಗಳು ಪತ್ತೆಯಾಗಿವೆ ಎನ್ನಲಾಗಿದೆ. ನದಿಗಳಲ್ಲಿಯೂ ದೇಹದ ಭಾಗಗಳು ಪತ್ತೆಯಾಗಿದ್ದು, ಶವಗಳ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕೆಲವರು ತಮ್ಮ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿದ್ದು ಅಂತಹವರ ನೋವು ಹೇಳ ತೀರದಾಗಿದೆ. ಅದರಲ್ಲೂ ಕೆಲವರ ಕುಟುಂಬದ ಸದಸ್ಯರ ಮೃತದೇಹ ಕೂಡ ಪತ್ತೆಯಾಗಿಲ್ಲ. ಒಂದಷ್ಟು ಮಂದಿ ಶೋಧ ಕಾರ್ಯಾಚರಣೆ ನಡೆಯುವ ಜಾಗದಲ್ಲಿ ತಮ್ಮ ಮೃತಹೇದ ಸಿಗುತ್ತೋ ಏನೋ ಎಂದು ಕಾಯುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.

ಇದರ ಮಧ್ಯೆ 10 ದಿನಗಳ ಕಾಲ ಊಟ, ನಿದ್ರೆ ಬಿಟ್ಟು ನಿರಂತರವಾಗಿ ಭಾರತೀಯ ಸೇನೆ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆಗೆ ನಿಂತಿತ್ತು. ನಿರಂತರವಾಗಿ ಹಗಲು ರಾತ್ರಿ ಎನ್ನದೇ ಒಂದು ಕ್ಷಣವೂ ತಮ್ಮ ಬಗ್ಗೆ ಯೋಚಿಸದೇ ನೊಂದವರಿಗೆ ಸ್ಪಂದಿಸುತ್ತಿದ್ದರು ನಮ್ಮ ಹೆಮ್ಮೆಯ ಯೋಧರು. ಅದರಲ್ಲೂ ಕೇವಲ 16 ಗಂಟೆಗಳಲ್ಲಿ ಬೈಲಿ ಸೇತುವೆ ನಿರ್ಮಾಣ ಮಾಡುವ ಅವರ ಶ್ರಮ ಪದಗಳಲ್ಲಿ ವರ್ಣಿಸಲಾಗದ್ದು. ನಿನ್ನೆ 10 ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಭಾರತೀಯ ಸೇನೆ ತೆರಳಿದ್ದು ಈ ವೇಳೆ ಸೇನಾ ಸಿಬ್ಬಂದಿಗೆ ವಯನಾಡಿ ಜನ ಧನ್ಯತಾ ಭಾವದಿಂದ ಭಾವಾನಾತ್ಮಕ ವಿದಾಯ ಹೇಳಿದ್ರು.

10 ದಿನಗಳ ತಮ್ಮರೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬಂತೆ ತಮ್ಮ ಜೀವವನ್ನೇ ಒತ್ತೆಯಿಟ್ಟು ಸ್ಥಳೀಯರಿಗೆ ಬೆಂಬಲವಾಗಿ ನಿಂತ ಸೇನಾ ಸಿಬ್ಬಂದಿಗೆ  ಕೃತಜ್ಞತೆ ಮತ್ತು ಮೆಚ್ಚುಗೆಯ ಮಹಾ ಪ್ರವಾಹವೇ ಹರಿದು ಬಂತು. ಕೊಚ್ಚಿ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೇನಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಈ ವೇಳ ಮಾತನಾಡಿದ ಅವರು”ಈ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ನಮಗೆ ಸಹಾಯ ಮಾಡಿ, ನಮಗೆ ಬೆನ್ನೆಲುಬಾಗಿ  ನಿಂತ ನಮ್ಮ ಕೆಚ್ಚೆದೆಯ ವೀರರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ.ನಿಮ್ಮ ಧೈರ್ಯ ಮತ್ತು ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನು ಯೋಧರು ತೆರಳುತ್ತಿದ್ದಂತೆ ಸೈನಿಕರು ಸ್ಥಳೀಯರು, ಅಧಿಕಾರಿಗಳು , ಇತರೆ ರಕ್ಷಣಾ ಕಾರ್ಯಕರ್ತರು ಬೀದಿಗಳಲ್ಲಿ ಸಾಲುಗಟ್ಟಿ ನಿಂತು ತಮ್ಮ ಹೃತ್ಪೂರ್ವಕ ಧನ್ಯವಾದಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದರು. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲ ವೈರಲ್ ಆಗಿದೆ.

 

ನಾಳೆ ದೇವರ ನಾಡಿಗೆ ಭೇಟಿ ನೀಡಲಿರುವ ಪ್ರಧಾನಿ; ಭೀಕರ ಭೂಕುಸಿತದಿಂದ ಹಾನಿಗೊಳಗಾದ ವಯನಾಡಿನ ವಿವಿಧ ಪ್ರದೇಶಗಳಿಗೆ ನಮೋ ಭೇಟಿ

ಕೇರಳ; ಭೀಕರ ಭೂ ಕುಸಿತಕಕ್ಕೆ ದೇವರ ನಾಡು ಕೇರಳ ಅಕ್ಷರಶಃ ಮರಣದೂರಾಗಿ ಬದಲಾಗಿದೆ. ಭೀಕರ ಭೂಕುಸಿತಕ್ಕೆ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ವಯನಾಡು ಇದೀಗ ನರಕವಾಗಿ ಬದಲಾಗಿದೆ. ಅಲ್ಲಿನ ಪ್ರತಿಯೊಂದು ದೃಶ್ಯವನ್ನು ಕರುಳು ಹಿಂಡುತ್ತಿದೆ. ಸಾವಿರಾರು ಜನ ಮನೆ ತಮ್ಮವರು ಎಲ್ಲವನ್ನು ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಇದೀಗ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ವಯನಾಡಿಗೆ ಭೇಟಿ ನೀಡಲಿದ್ದಾರೆ. ಭೂಕುಸಿತದಿಂದ ಹಾನಿಗೆ ಒಳಗಾದ ವಿವಿಧ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ನಾಳೆ ಅಂದರೆ ಆಗಸ್ಟ್ 10 ರಂದು ವಿಶೇಷ ವಿಮಾನದಲ್ಲಿ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಪ್ರಧಾನಿ ನರೇಂದ್ರ ಮೋದಿ ಅವರು  ಭಾರತೀಯ ವಾಯು ಸೇನೆಯ  ಹೆಲಿಕಾಪ್ಟರ್ ಮೂಲಕ ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಗೆ ತೆರಳಲಿದ್ದಾರೆ.

ಭೀಕರ ಪ್ರವಾಹದಿಂದಾಗಿ ಹಾನಿಗೆ ಒಳಗಾಗಿರುವ ವಯನಾಡಿನ ಚೂರಲ್ಮಾಲ ಹಾಗೂ ಮುಂಡಕೈ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲದೇ ಜಸ್ಟ್ 16 ಗಂಟೆಗಳಲ್ಲಿ ಭಾರತೀಯ ಸೇನೆ ನಿರ್ಮಿಸಿರುವ ಬೈಲಿ ಸೇತುವೆ, ಅಲ್ಲಿರುವ ಪರಿಹಾರ ಶಿಬಿರ, ಆಸ್ಪತ್ರೆಯ ಬಳಿ ಪ್ರಧಾನಿ ನರೇಂದ್ರ ಮೋದಿ ಇಳಿಯಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಭೂ ಕುಸಿತದಿಂದ ಹಾನಿಗೆ ಒಳಗಾಗಿರುವ ಜಾಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆಯನ್ನೂ ನಡೆಸಲಿದ್ದಾರೆ.

ಇಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ದುರಂತದಿಂದ ಪಾರಾದವರು ಮತ್ತು ದುರಂತದಲ್ಲಿ ಗಾಯಗೊಂಡವರೊಂದಿಗೆ ಸಂವಾದ ಕೂಡ ನಡೆಸಲಿದ್ದಾರೆ.ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿದ್ದಾರೆ. ನಂತರ ಅವರು ಅದೇ ದಿನ ಸಂಜೆ 4 ಗಂಟೆಗೆ ಅವರು ನವದೆಹಲಿಗೆ ವಾಪಾಸ್  ತೆರಳಲಿದ್ದಾರೆ.ಇನ್ನು ಕೇರಳಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಯನಾಡ್ ವಿಪತ್ತು ಪ್ರತಿಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿರುವ ಕೇರಳ ಕ್ಯಾಬಿನೆಟ್ ಉಪಸಮಿತಿ ಮತ್ತು ಜಿಲ್ಲಾಡಳಿತವು ಸ್ವಾಗತಿಸಲಿದೆ.

ಇನ್ನು ಗುರುವಾರ ಅಡ್ವಾನ್ಸ್ ಸ್ಪೆಷಲ್ ಪ್ರೊಟೆಕ್ಷನ್ ತಂಡ ವಯನಾಡಿಗೆ ಭೇಟಿ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್  ಸುರಕ್ಷಿತವಾಗಿ  ಲ್ಯಾಂಡಿಂಗ್ ಆಗಲು ಬೇಕಾದ ಸುರಕ್ಷಿತ ಸ್ಥಳವನ್ನು ಗುರುತಿಸಿದೆ.ಅಲ್ಲದೇ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.