ಮನೆ Blog ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆ ಗ್ರೀನ್ ಸಿಗ್ನಲ್; ಬಿಜೆಪಿಯಿಂದ ಭಾರೀ ವಿರೋಧ

ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆ ಗ್ರೀನ್ ಸಿಗ್ನಲ್; ಬಿಜೆಪಿಯಿಂದ ಭಾರೀ ವಿರೋಧ

0

ಬೆಂಗಳೂರು; ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆ ಗ್ರೀನ್ ಸಿಗ್ನಲ್ ದೊರೆತಿದ್ದು ಅಮುಲ್ ಉತ್ಪನ್ನಗಳನ್ನ ಮೆಟ್ರೋ ಒಳಗೆ ಮಳಿಗೆ ಹಾಕುವುದಕ್ಕೆ ಬಿಜೆಪಿಯಿಂದ ಭಾರಿ ವಿರೋಧ ವ್ಯಕ್ತವಾಗಿದೆ.ನಮ್ಮದೇ ಕೆಎಂಎಫ್ ನಂದಿನಿ ಇರುವಾಗ ಅಮುಲ್‌ಗೆ ಏಕೆ ಅವಕಾಶ? ಕೆಎಂಎಫ್ ಮಳಿಗೆ ಬಿಟ್ಟು ಗುಜರಾತ್ ಹಾಲು ಮಾರಾಟ ಒಕ್ಕೂಟದ ಜತೆ ಒಪ್ಪಂದ ಯಾಕೆ ಎಂದು ಪ್ರಶ್ನಿಸಿದೆ.

 

ಬೆಂಗಳೂರಿನ  ಪ್ರಮುಖ 10 ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಟ್ ಮಳಿಗೆ ತೆರೆಯಲು ಪ್ಲಾನ್ ಮಾಡಲಾಗಿದೆ. ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ಲಿ. ಜೊತೆಗೆ BMRCL ಒಪ್ಪಂದ ಮಾಡಿಕೊಂಡಿದೆ. ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ,  ಸರ್ ಎಂ.ವಿಶ್ವೇಶ್ವರಯ್ಯ, ಮೆಜೆಸ್ಟಿಕ್. ನ್ಯಾಷನಲ್ ಕಾಲೇಜು, ಜಯನಗರ ಹಾಗೂ ನಿಲ್ದಾಣದಲ್ಲಿ ಅಮುಲ್ ಮಳಿಗೆ ತೆರೆಯೋದಕ್ಕೆ ಒಪ್ಪಂದವಾಗಿದೆ.  ಅಮುಲ್ ಮೆಟ್ರೋ ಒಳಗೆ ಮಳಿಗೆ ಹಾಕಿದ್ರೆ ಕನ್ನಡಿಗರು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಸಭೆ ನಡೆಸಿ ಬಳಿಕ ಮಾತನಾಡಿದ ಡಿಸಿಎಂ ಬಿಎಂಆರ್ ಸಿಎಲ್ ಗ್ಲೋಬಲ್  ಟೆಂಟರ್ ಕರೆದಿತ್ತು. ಬೇರೆ ಯಾರು ಹಾಕೊಂಡಿರಲಿಲ್ಲ . ಅಮುಲ್ ಅವ್ರು 10 ಕಡೆ ಬೇಕು ಎಂದಿದ್ರು. ಕೆಎಂಎಫ್ ಅವ್ರಿಗೂ ಈಗ ಹೇಳಿದಿನಿ. ನೀವು ಟೆಂಡರ್ ಹಾಕಿ ಎಂದು ಹೇಳಿದ್ದೇನೆ. ಎಂಟು ಕಡೆ ಕೆಎಂಎಫ್ ಗೆ ಕೊಡ್ತಿವಿ.ಎರಡು ಮಳಿಗೆ ಅಮೂಲ್ ಗೆ ಕೊಡ್ತಿವಿ ಎಂದಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ವಿಪಕ್ಷ ವಿರೋಧ ವ್ಯಕ್ತಪಡಿಸಿದ್ದು ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನಂದಿನಿ ಕರ್ನಾಟಕದ ಬ್ರ್ಯಾಂಡ್. ಹೈನುಗಾರಿಕೆ ಉದ್ಯಮ ಕರ್ನಾಟಕದಲ್ಲಿ ಬೆಳೆಯಲು ನಂದಿನಿ ಪಾತ್ರ ಹೆಚ್ಚು. ಅಮುಲ್ ಮಳಿಗೆಗಳಿಗೆ ಅವಕಾಶ ಮಾಡಿ ಕೊಟ್ಟಿರುವುದು ಕನ್ನಡಿಗರಿಗೆ, ಕರ್ನಾಟಕಕ್ಕೆ ಮಾಡಿದ ಅವಮಾನ. ನಂದಿನಿ ಮಳಿಗೆಗಳಿಗೆ ಮೊದಲು ಅವಕಾಶ ಕೊಡಬೇಕು. ಅಮುಲ್ ಮಳಿಗೆಗೆ ಅವಕಾಶ ಯಾಕೆ?. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅಮುಲ್ ಗೆ ಅವಕಾಶ ಮಾಡಿ ಕೊಟ್ಟು ನಮ್ಮ ರೈತರ ಹೊಟ್ಟೆ ಮೇಲೆ ಸರ್ಕಾರ ಹೊಡೆಯಬಾರದು.

ಮಳಿಗೆ ತೆರೆಯಲು ಅಮುಲ್ ಜೊತೆ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಿರಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ ಕರ್ನಾಟಕದಲ್ಲಿ ನಂದಿನಿಗೆ ಮೊದಲ ಆದ್ಯತೆ ಕೊಡಬೇಕು. ನಂದಿನಿಗೆ ಅವಕಾಶ ನಿರಾಕರಿಸಿದರೆ ತಪ್ಪಾಗುತ್ತದೆ. ನಂದಿನಿ ದೆಹಲಿಯಲ್ಲಿ, ಉತ್ತರಪ್ರದೇಶ, ಮುಂಬೈನಲ್ಲೂ ಮಳಿಗೆ ತೆರೆದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೂ ಮಳಿಗೆ ತೆರೆಯುವ ಸಾಮರ್ಥ್ಯ ಬರಲಿ. ಅದಕ್ಕೆ ಬೇಕಾದ ಶಕ್ತಿ ಸರ್ಕಾರ ತುಂಬಲಿ. ಅಮುಲ್ ನಮ್ಮದೇ, ನಂದಿನಿಯೂ ನಮ್ಮದೇ. ನಂದಿನಿ ರಾಜ್ಯದ್ದು, ಅಮುಲ್ ದೇಶದ್ದು. ಎರಡೂ ರೈತರ ಸಂಸ್ಥೆಗಳು.ಎಲ್ಲೆಲ್ಲಿ ಅಮುಲ್ ಗೆ ಮಳಿಗೆ ಕೊಟ್ಟಿದ್ದಾರೋ ಅಲ್ಲಿ ನಂದಿನಿಗೂ ಅವಕಾಶ ಕೊಡಲಿ.ಆಗ ಆರೋಗ್ಯಕರ ಸ್ಪರ್ಧೆ ಇರುತ್ತದೆ.ಜಗತ್ತಿನ ಉದ್ದಗಲಕ್ಕೆ ಸ್ಪರ್ಧೆ ಮಾಡುವ ಸಾಮರ್ಥ್ಯ ಅಮುಲ್, ನಂದಿನಿ ಬೆಳೆಸಿಕೊಳ್ಳಲಿ. ನಾನು ಎಲ್ಲದಕ್ಕೂ ಟೀಕೆ, ರಾಜಕಾರಣ ಮಾಡಲು ಹೋಗುವುದಿಲ್ಲ ಎಂದರು.