ಮನೆ Latest News ಭಯೋತ್ಪಾದಕರನ್ನು ಹೊಡೆಯುವ ಜೊತೆಗೆ ಭಯೋತ್ಪಾದನೆಯ ಡಿಎನ್ ಎ ಯನ್ನು ಕೂಡಾ ಸುಟ್ಟು ಹಾಕಬೇಕು; ಬೆಂಗಳೂರಿನಲ್ಲಿ ವಿಧಾನ...

ಭಯೋತ್ಪಾದಕರನ್ನು ಹೊಡೆಯುವ ಜೊತೆಗೆ ಭಯೋತ್ಪಾದನೆಯ ಡಿಎನ್ ಎ ಯನ್ನು ಕೂಡಾ ಸುಟ್ಟು ಹಾಕಬೇಕು; ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ

0

ಬೆಂಗಳೂರು; ಭಯೋತ್ಪಾದಕರನ್ನು ಹೊಡೆಯುವ ಜೊತೆಗೆ ಭಯೋತ್ಪಾದನೆಯ ಡಿಎನ್ ಎ ಯನ್ನು ಕೂಡಾ ಸುಟ್ಟು ಹಾಕಬೇಕು ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಕಾಂಗ್ರೆಸ್ ನ ಕೆಲವು ಸ್ನೇಹಿತರು ಅಪಸ್ವರದ ಮಾತಾಡುತ್ತಿದ್ದಾರೆ.ಕೊತ್ತನೂರು ಮಂಜುನಾಥ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಹೇಳಿಕೆಗಳನ್ನು ಗಮನಿಸಿದರೆ ಆಪರೇಷನ್ ಸಿಂಧೂರದ ಬಗ್ಗೆ ಅಪಪ್ರಚಾರ ಮಾಡುವ ಟಾಸ್ಕ್ ಕೊಟ್ಟಿರುವ ರೀತಿ ಕಾಣಿಸುತ್ತಿದೆ. ಕಾಂಗ್ರೆಸ್ ನಾಯಕರಲ್ಲೇ ದ್ವಂದ್ವ ಕಾಣಿಸುತ್ತಿದೆ. ಟೀಕೆಗೆ ಒಳಗಾದ ಬಳಿಕ ಆಪರೇಷನ್ ಸಿಂಧೂರದ ಕ್ರೆಡಿಟ್ ಪೂರ್ತಿ ಸೈನ್ಯಕ್ಕೆ ಅಂತಾ ಹೇಳಿ ಕುಂಕುಮ ಇರಿಸಿಕೊಂಡರು. ಈಗ ಅಪಪ್ರಚಾರ ಮಾಡುತ್ತಿರುವ ಉದ್ದೇಶ ಏನು?.ನಿಮ್ಮ ಅಪನಂಬಿಕೆ ಸೈನ್ಯದ ಬಗ್ಗೆಯೋ ಅಥವಾ ರಾಜಕೀಯ ನೇತೃತ್ವದ ಬಗ್ಗೆಯೋ? ಎಂದು ಪ್ರಶ್ನಿಸಿದ್ದಾರೆ.

2005ರಲ್ಲಿ ದೆಹಲಿ ಸರಣಿ ಸ್ಫೋಟ, 2006ರ ವಾರಣಾಸಿ ಸ್ಫೋಟ, 2006ರಲ್ಲಿ ಮುಂಬೈ ರೈಲು ಸರಣಿ ಸ್ಫೋಟ, 2006 ಮಾಲೇಗಾಂವ್ ಸರಣಿ ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ, ಜೈಪುರ ಬಾಂಬ್ ಸ್ಫೋಟ, ದೆಹಲಿ ಬಾಂಬ್ ಸ್ಫೋಟ, ಮುಂಬೈ ಸ್ಫೋಟ, ಪುಣೆ ಸ್ಫೋಟ, ಹೈದರಾಬಾದ್ ಸ್ಫೋಟ ಇದೆಲ್ಲಾ ಆದಾಗ ಖಂಡನಾ ಹೇಳಿಕೆ ಬಿಟ್ಟು ಬೇರೇನು ಆಕ್ಷನ್ ಮಾಡಿದ್ರಿ?. ಆಗೆಲ್ಲಾ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಬೇಕು ಅಂತಾ ನಿಮಗೆ ಅನ್ನಿಸಲಿಲ್ಲ. ಭಯೋತ್ಪಾದಕರನ್ನು ಹೊಡೆಯುವ ಜೊತೆಗೆ ಭಯೋತ್ಪಾದನೆಯ ಡಿಎನ್ ಎ ಯನ್ನು ಕೂಡಾ ಸುಟ್ಟು ಹಾಕಬೇಕು. ಸಿರಿಯಾ, ಸೂಡಾನ್, ಇರಾನ್, ಇರಾಕ್, ಹಮಾಸ್, ಇಸ್ರೇಲ್, ಕಾಶ್ಮೀರ ಇಲ್ಲೆಲ್ಲಾ ಭಯೋತ್ಪಾದನೆಗೆ ಯಾವ ಡಿಎನ್ ಎ ಕಾರಣ?.ಈ ಡಿಎನ್ ಎ ಯನ್ನು ಸತ್ಯ ಗೊತ್ತಿದ್ದರೂ ಮತ ಬ್ಯಾಂಕ್ ಕಾರಣಕ್ಕೆ ಭಾರತದಲ್ಲಿ ಪೋಷಣೆ ಮಾಡುತ್ತಿರುವವರು ಯಾರು?. ಕುಕ್ಕರ್ ಬಾಂಬ್ ಸ್ಫೋಟ ಆದಾಗ ಅವರು ಬ್ರದರ್ಸ್ ಅಂತಾ ಹೇಳಿದ ಮಹಾನುಭಾವರು ಕಾಂಗ್ರೆಸ್ ನವರೇ ತಾನೇ? ಎಂದು ಕೇಳಿದ್ದಾರೆ.

ಭಾರತ ಈಗ ಜಾಗತಿಕವಾಗಿ ಸಾಕ್ಷಿ ಕೊಟ್ಟಿದೆ.ಈಗ ಕಾಂಗ್ರೆಸ್ ನವರು ಸಾಕ್ಷಿ ಕೇಳುವುದು ಬಿಟ್ಟು ನಾಟಕ ಆಡುತ್ತಿದ್ದಾರೆ.ಮತ್ತೆ ಭಯೋತ್ಪಾದಕರು ಅಟ್ಟಹಾಸ ಮಾಡಿದರೆ ಬಾಲದ ಜೊತೆಗೆ ತಲೆಯೂ ಕಟ್ ಆಗುತ್ತದೆ ಎಂದು ಭಾರತ ಸಂದೇಶ ಕೊಟ್ಟಿದೆ, ಯುದ್ದ ನಿಲ್ಲಿಸಿಲ್ಲ.ಜಿಹಾದ್ ಮುಂದುವರಿದ ಭಾಗವಾಗಿ ತಾನೇ ಪಹಲ್ಗಾಮ್ ನಲ್ಲಿ ಪ್ಯಾಂಟ್ ಬಿಚ್ಚಿಸಿ ಕೊಂಡಿದ್ದು?. ಟಿಪ್ಪು, ಘೋರಿ, ಮಲ್ಲಿಕಾಫರ್ ಸೇರಿದಂತೆ ಎಲ್ಲರ ಉದ್ದೇಶ ಜಿಹಾದ್ ತಾನೇ?. ಆ ಡಿಎನ್ ಎಗೆ ನೀರು, ಗೊಬ್ಬರ ಹಾಕಿ ಪೋಷಿಸುತ್ತಿರುವವರು ಕಾಂಗ್ರೆಸ್ ನವರು.ನೀವು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ತರಹ ವರ್ತನೆ ಮಾಡಿ.ನೀವು ಯಾಕೆ ಪಾಕಿಸ್ತಾನ ನ್ಯಾಷನಲ್ ಕಾಂಗ್ರೆಸ್ ತರಹ ವರ್ತನೆ ಮಾಡುತ್ತಿದ್ದೀರಿ?. ಆ ಡಿಎನ್ಎ ಕರ್ನಾಟಕದಲ್ಲೂ‌ ಇದೆ.ನೀವು ಆ ಡಿಎನ್ ಎ ಮಟ್ಟ ಹಾಕಲು ನೀವು ತಯಾರಿದ್ದೀರಾ? .ಮಟ್ಟ ಹಾಕಲು ನಿಮಗೆ ಧೈರ್ಯ ಇದ್ದರೆ ಬನ್ನಿ ಎಂದಿದ್ದಾರೆ.

1700 ರಲ್ಲಿ ಬಂದ ಮೊಹಮ್ಮದ್ ಖಾಸೀಂ ರೀತಿಯಲ್ಲೇ ಈಗಲೂ ಇದೆ .ಈಗ ಬದಲಾದ ಸನ್ನಿವೇಶದಲ್ಲಿ ನಡೆಯುತ್ತಿದೆ ಅಷ್ಟೇ.ಕರ್ನಾಟಕದಲ್ಲಿ ಕೂಡಾ ಇಲ್ಲವೇ ತರಬೇತಿ ಕೇಂದ್ರಗಳು?.ಅಲ್ಲಿ ಭೋದನೆಯ ಹೆಸರಿನಲ್ಲಿ ಏನನ್ನು ಕಲಿಸುತ್ತಿದ್ದಾರೆ?.ಅಲ್ಲಿ ಮಾನಸಿಕವಾಗಿ ತಯಾರಾದವನು ಅವಕಾಶ ಸಿಕ್ಕಿದಾಗ ಬಂದೂಕು, ಬಾಂಬ್ ಹಿಡಿಯುತ್ತಾನೆ.ಅನುಮಾನಿಸಿ ನಮ್ಮ ಸೈನಿಕರನ್ನು ಅಪಮಾನ ಮಾಡುತ್ತಿದ್ದೀರಾ?.ಎಚ್ಚರಿಕೆ ವಹಿಸಿ ಮಾತನಾಡಿ, ಇಲ್ಲದಿದ್ದರೆ ನಿಮ್ಮ ಪಕ್ಷದ ಹೆಸರನ್ನು ಪಾಕಿಸ್ತಾನ ನ್ಯಾಷನಲ್ ಕಾಂಗ್ರೆಸ್ ಅಂತಾ ಬದಲಾಯಿಸಿಕೊಳ್ಳಿ ಎಂದಿದ್ದಾರೆ.