ಬೆಂಗಳೂರು: ಮುನಿರತ್ನ ಪ್ರಕರಣದಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಡಾ.ಅಶತ್ಥ್ ನಾರಾಯಣ್ ತಿರುಗೇಟು ಕೊಟ್ಟಿದ್ದಾರೆ.ಈಗಾಗಲೇ ರಾಜ್ಯಾಧ್ಯಕ್ಷ ವಿಜಯೇಂದ್ರ, ಬೇರೆ ನಾಯಕರು ಸಾಕಷ್ಟು ಮಾತನಾಡಿದ್ದಾರೆ.ಇದೇ ಮುನಿರತ್ನ ಕಾಂಗ್ರೆಸ್ ನಲ್ಲಿದ್ದಾಗ ಅವರಿಗೆ ಚೆನ್ನಾಗಿತ್ತು.ಬಿಜೆಪಿಗೆ ಬಂದ ಬಳಿಕ, ಲೋಕಸಭಾ ಚುನಾವಣಾ ಸೋಲಿನ ಬಳಿಕ ವ್ಯವಸ್ಥಿತವಾಗಿ ಅವರ ಮೇಲೆ ಆಪಾದನೆ ಹೊರಿಸಲಾಗಿದೆ.ಇದರಲ್ಲಿ ದ್ವೇಷ, ಅಧಿಕಾರ ದುರ್ಬಳಕೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ.ಕುಮ್ಮಕ್ಕು ನಾಯಕರು ಕೊಡುತ್ತಿದ್ದಾರೆ ಅಂತಾ ಹೇಳುವುದು ಸರ್ಕಾರ ನಡೆಸುವವರು ಹೇಳುವ ಮಾತಾ? ಏನು ಬೇಕಾದರೂ ಆಪಾದನೆ ಮಾಡಲಿ.ಆದರೆ ದ್ವೇಷ, ಅಧಿಕಾರ ದುರ್ಬಳಕೆ ಜನ ಒಪ್ಪಲ್ಲ.ಈ ರೀತಿಯ ನಡವಳಿಕೆ ಒಳ್ಳೆಯದಲ್ಲ, ಜನ ನಗಲ್ವಾ? ವಿಪಕ್ಷ ಪ್ರಬಲವಾಗಿ ಕೆಲಸ ಮಾಡಬಾರದು ಎಂಬುದೇ ಇವರ ಮನಸ್ಥಿತಿ.ಇದಕ್ಕೆ ಹೇಗೆ ಕೌಂಟರ್ ಮಾಡಬೇಕು ಅಂತಾ ಚರ್ಚೆ ಮಾಡಿ ಸ್ಟ್ರಾಟಜಿ ಮಾಡುತ್ತೇವೆ.ತನಿಖೆ ಮಾಡಲು ನಮ್ಮ ವಿರೋಧವಿಲ್ಲ ಎಂದು ಹೇಳಿದ್ದೇವೆ.ಧ್ವನಿ ನನ್ನದಲ್ಲ ಅಂತಾ ಮುನಿರತ್ನ ಹೇಳಿದ್ದಾರೆ, ವರದಿ ಬರಲಿ ನೋಡೋಣ ಎಂದಿದ್ದಾರೆ.
ಯಾರಿಗೂ ಯಾವುದೇ ಜಾತಿ ನಿಂದನೆಗೆ ಯಾರಿಗೂ ಅಧಿಕಾರವಿಲ್ಲ.ಈಗ ಇದರ ಬಗ್ಗೆ ಮಾತಾಡುವವರು ಅವರು ಹೇಗೆ ಬೆಳೆದು ಬಂದಿದ್ದಾರೆ, ಏನು ಭಾಷೆ ಬಳಕೆ ಮಾಡುತ್ತಾರೆ ಅಂತಾ ಎಲ್ಲರಿಗೂ ಗೊತ್ತಿದೆ.ಟಾರ್ಗೆಟ್ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಭಯದ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಎಂದಿದ್ದಾರೆ.
ಇನ್ನು ಮುನಿರತ್ನ ಹೆಚ್ ಐವಿ ಸೋಂಕು ಹರಡಿಸುವ ಪ್ರಯತ್ನ ಮಾಡಿದ್ದರು ಎಂಬ ಕಾಂಗ್ರೆಸ್ ಆರೋಪಕ್ಕೂ ರಿಯ್ಯಾಕ್ಟ್ ಮಾಡಿದ ಅವರು ನಾವು ಮೌನಿಗಳಾಗಿ ಕುಳಿತಿಲ್ಲ.ಮೌನಿಗಳಾಗಿರಲು ನಾವು ಏನು ಕಾಂಗ್ರೆಸ್ ನವರಾ?.ಶಾಸಕ ಚನ್ನಾರೆಡ್ಡಿ ಅರೆಸ್ಟ್ ಮಾಡಿದ್ದಾರಾ? ಇವರಿಗೆ ನಾಚಿಕೆ, ಆತ್ಮಸಾಕ್ಷಿ, ನೈತಿಕತೆ ಇದೆಯೇನ್ರೀ?ಎಐಸಿಸಿ ಅಧ್ಯಕ್ಷರು ಯಾವ ವರ್ಗಕ್ಕೆ ಸೇರಿದ್ದಾರೆ?ಆ ವರ್ಗದ ಜನರು ಅವರ ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ಆತ್ಮಹತ್ಯೆ ಮಾಡಿಕೊಂಡರೂ ಕ್ರಮ ವಹಿಸಲು ಆಗಿಲ್ಲ.ಇವರೊಂದು ಪಕ್ಷ ಅಲ್ಲ, ಸರ್ಕಾರದಲ್ಲಿ ಇದ್ದಾರೆ.ಅಧಿಕಾರದಲ್ಲಿದ್ದುಕೊಂಡು ಕ್ರಮ ವಹಿಸದೇ ಯಾರಿಗೆ ಬುದ್ದಿ ಹೇಳಲು ಬಂದಿದ್ದಾರೆ ಇವರು? ಎಸ್ ಐಟಿ ಮಾಡ್ತಾರಾ, ನೂರು ಎಸ್ ಐಟಿ ಮಾಡಿ. ರಾಹುಲ್ ಗಾಂಧಿ ರೀತಿ ಯಾರಾದರೂ ದೇಶ ವಿರೋಧಿ ಹೇಳಿಕೆ ಕೊಡ್ತಾರಾ?ನಾವು ಅವರಂತೆ ಮೌನಿಗಳಲ್ಲ, ಅಸಹಾಯಕರಲ್ಲ, ಅಧಿಕಾರ ದಾಹ ಇರುವವರಲ್ಲ.ಸ್ವಾರ್ಥಕ್ಕೆ ನಾವು ರಾಜಕೀಯಕ್ಕೆ ಬಂದಿಲ್ಲ.ಇವರಿಗೆ ಶಿಕ್ಷಣದಲ್ಲಿ ವಿರೋಧ, ಆರೋಗ್ಯದಲ್ಲಿ ಸಮಸ್ಯೆ, ಗುಂಡಿ ಮುಚ್ಚಲು ಸಮಸ್ಯೆ ಇವರೆಲ್ಲಾ ನಮ್ಮಂತೆ ಪ್ರಥಮ ಬಾರಿ ಮಂತ್ರಿಗಳಾದವರಲ್ಲ.ಇವರ ಅನುಭವ ತೆಗೆದುಕೊಂಡು ಹೋಗಿ ಯಾವುದಾದರೂ ಸಂತೆಗೆ ಹಾಕಿ ಬರಲು ಹೇಳಿ.ನಾವು ತನಿಖೆ ಮಾಡುವುದರ ಬಗ್ಗೆ ಏನಾದರೂ ವಿರೋಧಿಸಿದ್ದೇವಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಹೆಚ್ ಐವಿ ಇಂಜೆಕ್ಷನ್ ಅಂತೆ, ಏನ್ರೀ, ನಗಬೇಕೋ ಅಳಬೇಕೋ.ಇವರು ಪೆನ್ ಡ್ರೈವ್ ಎಲ್ಲೆಲ್ಲಿ ಹೋಗಿ ಬಂದರು, ಎಲ್ಲೆಲ್ಲಿ ಸಿಡಿ ಲೈಬ್ರರಿಗಳು ಇವೆ ಅಂತಾ ನೋಡಿಕೊಂಡು ಬಂದವಲ್ಲಪ್ಪಾ.ಇಂತಹ ಮಹಾಪುರುಷರೆಲ್ಲಾ ಸರ್ಕಾರದಲ್ಲಿದ್ದಾರಲ್ಲಾ ಏನಪ್ಪಾ ನಮ್ಮ ಭವಿಷ್ಯ ಅಂತಾ ಜನ ಅಂದುಕೊಂಡಿದ್ದಾರೆ.50 ವರ್ಷಗಳ ರಾಜಕೀಯ ಅನುಭವ ಇರುವ ಸಿಎಂ 75 ವರ್ಷನೂ ದಾಟಿಬಿಟ್ಟರು, ಈಗಲಾದರೂ ಸ್ವಲ್ಪ ಚೆನ್ನಾಗಿರಬೇಕಲ್ವಾ?.ತುಂಬಾ ಅನುಭವಿ ಉಪಮುಖ್ಯಮಂತ್ರಿ, ಅತಿ ಅನುಭವ ಇರುವ ಮಂತ್ರಿಗಳು. ಸಿಡಿ ಓನರ್ ಗಳು ಯಾರು, ಸಿಡಿ ಲೈಬ್ರರಿಗಳು ಯಾರದ್ದು ಎಲ್ಲಾ ಗೊತ್ತಿರೋದೇ.ನನ್ನ ಧ್ವನಿ ಅಲ್ಲ ಅಂತಾ ಮುನಿರತ್ನ ಸ್ಪಷ್ಟವಾಗಿ ಹೇಳಿರುವಾಗ ನಾವು ಹೇಗೆ ಹೇಳಲು ಆಗುತ್ತದೆ?ಎಲ್ಲರಿಗೂ ಒಂದು ಕಾನೂನು, ಅದಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂದಿದ್ದಾರೆ.