ಮನೆ Latest News ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯದಿಂದ ಅನುಮತಿ

ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯದಿಂದ ಅನುಮತಿ

0
darshan bail

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ , ವೀಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಅವರಿಗೆ ರಾಜ ಮರ್ಯಾದೆ ನೀಡಲು ಸಹಕರಿಸಿದ 7 ಮಂದಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಗೃಹ ಸಚಿವ ಡಾ  ಜಿ ಪರಮೇಶ್ವರ್ ಅವರು ಆದೇಶವನ್ನು ನೀಡಿದ್ದರು.

ಇದರ ಬೆನ್ನಲ್ಲೇ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ವರದಿ ನೀಡುವಂತೆ ಕಾರಾಗೃಹ ಇಲಾಖೆ ಡಿಜಿ ಮಾಲಿನಿ ಕೃಷ್ಣ ಮೂರ್ತಿ ಅವರಿಗೆ ಗೃಹ ಸಚಿವ ಜಿ ಪರಮೇಶ್ವರ್ ಆದೇಶಿಸಿದ್ದರು. ಇದೇ ವೇಳೆ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ರೆ ತೊಂದ್ರೆ ತಪ್ಪಿದ್ದಲ್ಲ ಎಂದು ಅಲರ್ಟ್ ಆದ ಅಧಿಕಾರಿಗಳು  ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಚಿಂತಿಸಿ, ಅದರಂತೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಇದೀಗ ಬೆಂಗಳೂರಿನ 24ನೇ ಎಸಿಎಂಎಂ ದರ್ಶನ್ ಅವರನ್ನು ಶಿಫ್ಟ್ ಮಾಡಲು ಒಪ್ಪಿಗೆ ನೀಡಿದೆ.

 

 ದರ್ಶನ್ ಮಾತ್ರವಲ್ಲದೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇತರೆ ಆರೋಪಿಗಳನ್ನು ಕೂಡ  ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಅನುಮತಿ ಕೊಟ್ಟಿದೆ. ಅದರಂತೆ ಪವನ್ , ರಾಘವೇಂದ್ರ , ನಂದೀಶ್ ಹಾಗೂ  ಜಗದೀಶ್ ಮೈಸೂರು ಜೈಲಿಗೆ, ಲಕ್ಷ್ಮಣ, ಧನರಾಜ ಶಿವಮೊಗ್ಗ ಜೈಲಿಗೆ,ವಿನಯ್ ವಿಜಯಪುರದ ಜೈಲಿಗೆ, ನಾಗರಾಜ್ ಕಲಬುರ್ಗಿ ಜೈಲಿಗೆ, ಪ್ರದೂಶ್ ಬೆಳಗಾವಿ ಜಿಲ್ಲೆಗೆ ಜೈಲಿಗೆ ಶಿಫ್ಟ್ ಆಗಲಿದ್ದಾರೆ.ಇನ್ನು ನಟ ದರ್ಶನ್ ಅವರನ್ನು ನಾಳೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಈಗಾಗಲೇ ಬಳ್ಳಾರಿ ಜೈಲಿನಲ್ಲಿ ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ದರ್ಶನ್ ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ನಾವು ತೀರ್ಮಾನ ಮಾಡಕ್ಕಾಗಲ್ಲ; ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ

ಬೆಂಗಳೂರು; ದರ್ಶನ್ ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ನಾವು ತೀರ್ಮಾನ ಮಾಡಕ್ಕಾಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಬೇರೆ ಜೈಲಿಗೆ ದರ್ಶನ್ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡಕ್ಕಾಗಲ್ಲ.ಜೈಲು ಪ್ರಾಧಿಕಾರವು ಕೋರ್ಟಿನ ನಿರ್ದೇಶನ ಮೇರೆಗೆ ಸ್ಥಳಾಂತರ ಮಾಡಲಿದೆ. ವಿಚಾರಣಾ ಕೈದಿ ಆಗಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳಡಿ ಸ್ಥಳಾಂತರ ಮಾಡ ಬೇಕಾಗುತ್ತದೆ.ಇನ್ನು ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಕ್ಲಾರಿಟಿ ಸಿಗಲಿದೆ ಎಂದಿದ್ದಾರೆ.

ಇನ್ನು  ಜೈಲಿನಲ್ಲಿ ಮೂರು ವಿಭಾಗ ಮಾಡೋ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಭದ್ರತೆ ಧೃಷ್ಟಿಯಿಂದ ಆಂತರಿಕಾ ಆಡಳಿತ ವಿಭಾಗ ಮಾಡಬಹುದು.ಮೂರು ಜೈಲು‌ ಮಾಡೋಕೆ ಆಗಲ್ಲ.ಒಳಗಡೆ ಮೂರು ಬ್ಲಾಕ್ ಇದೆ. ಬೇರೆ ಬ್ಯಾರಕ್ ಇದೆ.ಜೈಲಿನಲ್ಲಿ ತನಿಖಾ ಹಂತದ ಕೈದಿಗಳು,ಲೈಪ್ ಪ್ರಿಸನರ್ಸ್ ಅವರನ್ನೆಲ್ಲ ಬೇರೆ ಇಟ್ಟಿರ್ತಾರೆ.ಅದನ್ನ ಜೈಲಿನ ಅಧಿಕಾರಿಗಳಿಗೆ ಬಿಟ್ಟಿದ್ದೇವೆ ಎಂದರು.

ಇದೇ ವೇಳೆ ಪರಮೇಶ್ವರ್ ಅವರು ಜೈಲಿಗೆ ಭೇಟಿ ನೀಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬ್ಯಾರಕನಿಂದ ಮತ್ತೊಂದು ಬ್ಯಾರಕ್ ಗೆ ಹೋಗೋಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈಗಾಗಲೇ 9 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಬೇರೆ ಯಾರು ದರ್ಶನ್ ಗುಂಪಿಗೆ ಸಹಾಯ ಮಾಡಿದ್ದಾರೆ. ಸಿಗರೇಟ್, ಚೇರ್, ಕಾಫಿ ತಂದುಕೊಟ್ಟಿದ್ದು ಎಲ್ಲದನ್ನ ಸಿಸಿಟಿವಿ ಆಧರಿಸಿ ಕ್ರಮ ಆಗಿದೆ.ಐಪಿಎಸ್ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಲಾಗುತ್ತಿದೆ ಎಂದರು.

ಇನ್ನು ಜೈಲಿನ ಸುಧಾರಣೆಗೆ ವರದಿ ಅನುಷ್ಠಾನ ವಿಚಾರಕ್ಕೆ  ಪ್ರತಿಕ್ರಿಯಿಸಿದ ಅವರು ಎಚ್ ಕೆ ಪಾಟೀಲ್ ವರದಿ ಕೊಟ್ಟಿದ್ದು ಗಮನಕ್ಕೆ ಬಂದಿರಲಿಲ್ಲ.ಅದನ್ನ ತರಿಸಿಕೊಳ್ಳುತ್ತೇನೆ.ಈಗಿರೋ ವ್ಯವಸ್ಥೆ ಬದಲಾವಣೆ ಅಗತ್ಯವಿದೆ.ಇದನ್ನ ಮಾಡುತ್ತೆವೇವೆ.ಈಗಾಗಲೇ 9 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ.ಚೀಫ್ ಸೂಪರಿಂಟೆಂಡೆಂಟ್ ಅವರನ್ನೂ ಸಸ್ಪೆಂಡ್ ಮಾಡಿದ್ದೇವೆ.ಇನ್ನೊಬ್ರು ಸೂಪರಿಂಟೆಂಡೆಂಟ್ ರನ್ನೂ ಸಸ್ಪೆಂಡ್ ಮಾಡಿದ್ದೇವೆ.ಇನ್ಯಾರ್ಯಾರು ದರ್ಶನ್ ಗೆ ಸಹಕಾರ ಕೊಟ್ಟಿದ್ದಾರೋ ಅವರನ್ನೂ ಸಸ್ಪೆಂಡ್ ಮಾಡಲಾಗಿದೆ.ತನಿಖೆ ಇನ್ನೂ ಮುಂದುವರೆದಿದೆ.ಮುಂದಿನ ತನಿಖೆಗಾಗಿ ಇಂದು ಒಬ್ಬರು ಐಪಿಎಸ್ ಅಧಿಕಾರಿ ನೇಮಕ ಮಾಡ್ತೇವೆ.ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ತೇವೆ ಎಂದಿದ್ದಾರೆ.