ಬೆಳಗಾವಿ; ಕಾಂಗ್ರೆಸ್ ಪಾರ್ಟಿಗೆ ಕರ್ನಾಟಕ ಎಟಿಎಂ ಇದ್ದ ಹಾಗೆ, ಎಲ್ಲದರಲ್ಲೂ ಹಣ ಬೇಕು ಎಂದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ ಪಾರ್ಟಿಗೆ ಕರ್ನಾಟಕ ಎಟಿಎಂ ಇದ್ದ ಹಾಗೆ, ಎಲ್ಲದರಲ್ಲೂ ಹಣ ಬೇಕು. ಆದರೆ ಜನ ಔಷಧೀ ಕೇಂದ್ರಗಳು ಕೇಂದ್ರ ಸರ್ಕಾರದವು ಬಡ ರೋಗಿಗಳಿಗೆ ಅನುಕೂಲ ಆಗಿವೆ. ಇದರಲ್ಲಿ ಕಮೀಷನ್ ಸಿಗಲಿಲ್ಲ ಅಂತ ಅವುಗಳನ್ನು ರದ್ದು ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದರು. ಆದರೆ ಈ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ ಅವರ ಮುಖಕ್ಕೆ ಮಂಗಳರಾತಿ ಮಾಡಿದೆ. ಕಾಂಗ್ರೆಸ್ ಪಾರ್ಟಿ ದೇಶದಲ್ಲಿ ಅವಳಿವಿನ ಅಂಚೆಗೆ ಬಂದಿದೆ. ಇದು ಹೀಗೆ ಮುಂದುವರಿದ್ರೆ ಕಾಂಗ್ರೆಸ್ ಸರ್ವ ನಾಶ ಆಗುತ್ತೆ.ಇದು ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗ ಎಂದಿದ್ದಾರೆ.
ನಿನ್ನೆ ಬೆಳಗಾವಿಯಲ್ಲಿ ಶೇಠ್ ಮನೆಯಲ್ಲಿ ಡಿನ್ನರ್ ಪಾರ್ಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಮೊನ್ನೆ ನಡೆದ ಕಾಂಗ್ರೆಸ್ ಸಿಎಲ್ ಪಿ ಸಭೆಯಲ್ಲಿ ಯಾವುದೇ ಡಿನ್ನರ್ ಪಾರ್ಟಿ, ಸಭೆ ಬೇಡ ಅಂತ ಸಿಎಂ ಕಟ್ಟು ನಿಟ್ಟಾಗಿ ಹೇಳಿದ್ದಾರೆ. ಆದರೆ ನಿನ್ನೆ ಅವರೇ ಡಿನ್ನರ್ ಪಾರ್ಟಿ ಮಾಡಿದ್ದಾರೆ.ಸಿಎಂ ಸಿದ್ದರಾಮಯ್ಯ ಹೇಳೋದು ಒಂದು ಮಾಡೋದು ಒಂದು.ಡಿ ಕೆ ಶಿವಕುಮಾರ್ ರನ್ನು ಮಟ್ಟ ಹಾಕಬೇಕು, ಡಿಕೆ ಸಿಎಂ ಆಗೋಕೆ ಬಿಡಬಾರದು ಅಂತ. ಸಿದ್ದರಾಮಯ್ಯ ಈ ರೀತಿಯಲ್ಲಿ ಮಾಡುತ್ತಿದ್ದಾರೆ. ಆದರೆ ಡಿ ಕೆ ಶಿವಕುಮಾರ್ ಸಹ ಚಾಣಾಕ್ಷ ಅವರು ಸಹ ಟ್ರಿಕ್ ಬಳಕೆ ಮಾಡಿಕೊಳ್ಳತ್ತಾರೆ. ಕಾಂಗ್ರೆಸ್ ಕುಲಗೆಟ್ಟು ಹೋಗಿದೆ ಕಾಂಗ್ರೆಸ್ ಗೆ ಮಾನ,ಮರ್ಯಾದೆ ಇಲ್ಲ. ಬೈರತಿ ಸುರೇಶ್ ಕಿಂಗ್ ಇಸ್ ಅಲೈವ್ ಅಂತ ಹೇಳಿದ್ದಾರೆ. ನಾವು ಯಾರಾದರೂ ಕಿಂಗ್ ಹೋಗಿದ್ದಾರೆ ಅಂತ ಹೇಳಿದ್ದಿವಾ?. ಜನಕ್ಕೂ ಸಹ ನಾವು ಕಾಂಗ್ರೆಸ್ ಗೆ ಮತ ನೀಡಿ ಮೋಸ ಹೋಗಿದ್ದೆವೆ ಅಂತ ಅರ್ಥವಾಗಿದೆ.ಸಮಯ ಬಂದಾಗ ಜನ ತಕ್ಕ ಪಾಠವನ್ನು ಕಾಂಗ್ರೆಸ್ ಗೆ ಕಲಿಸುತ್ತಾರೆ ಎಂದು ಅಶೋಕ್ ಹೇಳಿದ್ದಾರೆ.










