ಮನೆ Latest News ತಮ್ಮ ರಿಪೋರ್ಟ್ ಕಾರ್ಡ್ ಮುಂದಿಟ್ಟ ಶಾಸಕ ಪ್ರದೀಪ್ ಈಶ್ವರ್

ತಮ್ಮ ರಿಪೋರ್ಟ್ ಕಾರ್ಡ್ ಮುಂದಿಟ್ಟ ಶಾಸಕ ಪ್ರದೀಪ್ ಈಶ್ವರ್

0

ಬೆಂಗಳೂರು; ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಮ್ಮ  ರಿಪೋರ್ಟ್ ಕಾರ್ಡ್ ಮುಂದಿಟ್ಟಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸಾವಿರಾರು ಮಂದಿ ನಾನು ಮಾಡಿದ ಕೆಲಸಕ್ಕೆ ಸಾಕ್ಷಿ. ನನ್ನ ಶಾಸಕರ ಸಂಬಳವನ್ನು ನನ್ನ ಕೆಲಸಕ್ಕೆ ಬಳಸುತ್ತಿದ್ದೇನೆ.ಮಕ್ಕಳಿಗೆ ಸ್ಕಾಲರ್ಶಿಪ್, ಪಡಿತರ ಚೀಟಿ ಸಮಸ್ಯೆ ಬಸ್ಸುಗಳ ಸಮಸ್ಯೆ ನೀಟ್ ಎಕ್ಸಾಂಗೆ ತಯಾರಿ ಎಲ್ಲವೂ ಮಾಡಿದ್ದೇನೆ.ಇದು ನನ್ನ ರಿಪೋರ್ಟ್ ಕಾರ್ಡ್ ಎಂದಿದ್ದಾರೆ.

ಮಾನ್ಯ ಬಿಜೆಪಿಯವರೇ,  ಬಿಜೆಪಿ ಕಚೇರಿಗೆ ನನ್ನ ರಿಪೋರ್ಟ್ ಕಾರ್ಡ್ ಕೋರಿಯರ್ ಮಾಡ್ತಿದ್ದೇನೆ. ಹೂವಿನ ಮಾರುಕಟ್ಟೆಗೆ ಬಿಜೆಪಿ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಹಾರ್ಟಿ ಕಲ್ಚರ್ ಡಿಪಾರ್ಟ್ಮೆಂಟ್ ನಿಂದ ಬಜೆಟ್ ನಲ್ಲಿ ೧೪೦ ಕೋಟಿ ಮೀಸಲಿಟ್ಟಿದ್ದೇವೆ.ಪ್ರೈಂ ಜಾಗದಲ್ಲಿ ೧೦ ಎಕರೆ ಹೂವಿನ ಮಾರುಕಟ್ಟೆಗೆ ತೆಗೆದುಕೊಟ್ಟಿದ್ದೇವೆ. ೨೦೨೭ ಡಿಸೆಂಬರ್ ಒಳಗೆ ಎತ್ತಿನಹೊಳೆ ನೀರನ್ನು ನನ್ನ ಕ್ಷೇತ್ರಕ್ಕೆ ಹರಿಸುತ್ತೇನೆ. ಇದಕ್ಕೆ ಸಿಎಂ ಡಿಸಿಎಂ ಜೊತೆಗೆ ನಿರಂತರವಾಗಿ ಬೇಡಿಕೆ ಇಟ್ಟಿದ್ದೇನೆ ೫೦೦ ಕೋಟಿ ಸಿಗಲಿದೆ. ದಲಿತ ಸಮುದಾಯದ ಧ್ವನಿ ನಾನು ಭವಿಷ್ಯ ನಾನು ಅಂಬೇಡ್ಕರ್ ನನ್ನ ಪಾಲಿನ ದೇವರು. ನನ್ನೂರು ಪೆರೆಸಂದ್ರ, ನನ್ನೂರಿನ ದಲಿತರಿಗೆ ಸ್ಮಶಾನದ ಜಾಗ ಇರಲಿಲ್ಲ. ನಾನು ಗೆದ್ದ ಮೇಲೆ ಸ್ಮಶಾನಕ್ಕೆ ಜಾಗ ಕೊಡಿಸಿದ್ದೇನೆ ಒಂದೂವರ ಎಕರೆ.ನನ್ನ ಸ್ಪೀಡ್ ಜಾಸ್ತಿ ಅನಿಸಬಹುದು, ಇದೇ ಸ್ಪೀಡ್ ನನ್ನನ್ನು ಎಂಎಲ್ಎ ಮಾಡಿದ್ದು ಎಂದಿದ್ದಾರೆ.

ಮಿಸ್ಟರ್ ಕರ್ನಾಟಕ ಬಿಜೆಪಿ, ನೀವು ಡೈಲಾಗ್ ಹೇಳಬೇಡಿ ಅಂದಿದ್ದೀರಿ. ಅದಕ್ಕೇ ಡೈಲಾಗ್ ಹೇಳ್ತೀನಿ.ನಾಲ್ಕು ಕಾಸು ದುಡ್ಡು ದುಡಿದು ಡಾಲರ್ಸ್ ಕಾಲನಿಯಲ್ಲಿ ಮನೆಯಲ್ಲಿ ತಗೋಳೋದಲ್ಲ. ನಿಮ್ಮ ಎಂಪಿಗಳೂ ಕೂಡ ನನ್ನ ತರಹ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡ್ತಾರಾ?. ನಿಮಗೆ ಆರು ತಿಂಗಳು ಟೈಂ ಕೊಡ್ತೀನಿ, ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ.ಇಲ್ಲದಿದ್ದರೆ ಎಂಪಿಗಳ ಮನೆ ಮುಂದೆ ನಿಲ್ತೀನಿ ಎಂದು ಬಿಜೆಪಿ ನಾಯಕರಿಗೆ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.

ಪ್ರಹ್ಲಾದ ಜೋಷಿಯವರ ಕೈಲಿ ರಿಪೋರ್ಟ್ ಬಿಡುಗಡೆ ಮಾಡಿಸಿ ನೋಡೋಣ. ಮೋಹನಣ್ಣ, ತೇಜಸ್ವಿ ಸೂರ್ಯ ಕೈಲಿ ಅವರ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿಸಿ ನೋಡೋಣ. ಇಲ್ಲದೇ ಇದ್ದರೆ ನಾನು ನಿಮ್ಮ ಮನೆ ಮುಂದೆ ಬಂದು ನಿಲ್ತೀನಿ. ಎತ್ತಿನಹೊಳೆ ಯೋಜನೆಗೆ ನಮ್ಮ ಕ್ಷೇತ್ರಕ್ಕೆ ೫೦೦ ಕೋಟಿ ಬೇಕಿದೆ. ೨೦೨೬ ಕ್ಕೇ ಅಲ್ಲಿ ನೀರಿ ಹರಿಸುತ್ತೇವೆ ಎಂದಿದ್ದಾರೆ ಡಿಸಿಎಂ ಸಾಹೇಬ್ರು. ೨೦೨೭ ರವರೆಗಾದ್ರೂ ಹರಿಸಿಯೇ ಹರಿಸುತ್ತೇವೆ. ನನ್ನ ಪಾಡಿಗೆ ನಾನಿದ್ದೆ, ಆಕ್ಸಿಡೆಂಟಲ್ ಎಂಎಲ್ಎ ಅಂತ ಬಿಜೆಪಿ ಟೀಕೆ ಮಾಡಿದೆ. ಅದಕ್ಕೆ ನಾನು ಅವರು ಏನು ಕಡಿದು ಕಟ್ಟೆ ಹಾಕಿದ್ದಾರಾ ನೋಡೋಣ ಅಂತ ನೋಡಿದೆ.ನಾನು ಮಾಡಿದ ಕೆಲಸ ನಾನು ಆ್ಯಕ್ಸಿಂಡೆಂಟಲ್ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಬಿಜೆಪಿಯವರು ಎಂದಿದ್ದಾರೆ.