ಮನೆ Latest News ವಕ್ಫ್ ವಿಚಾರವನ್ನ ಸರ್ಕಾರ ನೋಡಿಕೊಳ್ಳುತ್ತದೆ: ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತತ್ರೇಯ ಹೊಸಬಾಳೆ...

ವಕ್ಫ್ ವಿಚಾರವನ್ನ ಸರ್ಕಾರ ನೋಡಿಕೊಳ್ಳುತ್ತದೆ: ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತತ್ರೇಯ ಹೊಸಬಾಳೆ ಹೇಳಿಕೆ

0

ಬೆಂಗಳೂರು; ವಕ್ಫ್ ವಿಚಾರವನ್ನ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಆರ್ ಎಸ್ ಎಸ್  ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ವಕ್ಫ್ ವಿಚಾರವನ್ನ ಸರ್ಕಾರ ನೋಡಿಕೊಳ್ಳುತ್ತದೆ. ಈಗಾಗಲೇ‌ ಸಮಿತಿ ರಚಿಸಿದೆ. ಬಹಳಷ್ಟು ಭೂಮಿಯನ್ನ ವಕ್ಫ್ ತನ್ನದು ಎಂದಿದೆ. ಸಾಕಷ್ಟು ರೈತರು ಸಮಸ್ಯೆ ಎದುರಿಸಿದ್ದಾರೆ. ಸರ್ಕಾರ ಏನ್ ಮಾಡತ್ತೆ ನೋಡೋಣ. ದೆಹಲಿಯಲ್ಲಿ ಔರಂಗಜೇಬ್ ರಸ್ತೆ ಇತ್ತು ಅದನ್ನ ಬದಲಾಯಿಸಲಾಗಿದೆ. ಭಾರತದಲ್ಲಿ ನಮ್ಮ ಸಂಸ್ಕೃತಿ ವಿರುದ್ದವಾಗಿ ಇದ್ದವರನ್ನ ಐಕಾನ್ ಆಗಿ ನೋಡೋದು ಎಷ್ಟು ಸರಿ. ದೇಶದ ಜನ ಸ್ವತಂತ್ರ ಆಂದೋಲನ ಯಾಕೆ ಆಗಿದೆ ಎಂದು ಯೋಚಿಸಬೇಕು. ಕೆಲ ಮನಸ್ಥಿತಿಗಳಿಂದ ದೇಶಕ್ಕೆ‌ ಅಪಾಯ.ಇದು ಧರ್ಮಗಳ ವಿಚಾರ ಅಲ್ಲ. ಇಲ್ಲಿನ ಜನ ಇಲ್ಲಿನ ಸಂಸ್ಕೃತಿಗೆ ಹೊಂದಿಕೊಂಡಿರಬೇಕು .ಸಂವಿಧಾನದಲ್ಲಿ ಧರ್ಮಾಧಾರಿತ ಮಿಸಲಾತಿಗೆ ಅವಕಾಶ ಇಲ್ಲ. ಆಂಧ್ರದಲ್ಲಿ, ಮಹಾರಾಷ್ಟ್ರದಲ್ಲಿ ಪ್ರಯತ್ನ ಮಾಡಿದ್ರು. ಕೋರ್ಟ್ ಇದನ್ನೆಲ್ಲ ತಿರಸ್ಕರಿಸಿದೆ ಎಂದ್ರು.

ಮುಸ್ಲಿಂ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು ಧರ್ಮದಾರಿತ ಮೀಸಲಾತಿಗೆ ಅವಕಾಶ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್‌ರ ಸಂವಿಧಾನದಲ್ಲಿ ಅವಕಾಶ ಇಲ್ಲ. ಧರ್ಮಾದಾರಿತ ಮೀಸಲಾತಿ‌ಯನ್ನ ನ್ಯಾಯಾಲಯವು ಪಕ್ಕಕ್ಕೆ ಸರಿಸಿದೆ. ಆಂದ್ರಪ್ರದೇಶದಲ್ಲಿ ಈ ಹಿಂದೆ ಕೊಡಲಾಗಿತ್ತು. ಮಹಾರಾಷ್ಟ್ರದಲ್ಲಿ ಕೊಡಲಾಗಿತ್ತು. ನ್ಯಾಯಾಲಯ ಅದನ್ನ ತೆಗೆದು ಹಾಕಿದೆ. ಚುನಾವಣೆ ಮುನ್ನ ಘೋಷಣೆ ಮಾಡುತ್ತಾರೆ. ನಂತರ ಅದು ಬದಿಗೆ ಸರಿಯುತ್ತದೆ. ಇದೇ ವಿಚಾರದ ಬಗ್ಗೆ ಅನೇಕ‌ ಬಾರಿ ಸಂಘ ತನ್ನ ಅಭಿಪ್ರಾಯ ಹೇಳಿದೆ. ಮತ್ತೆ ಮತ್ತೆ ಹೇಳುವ ಅಗತ್ಯ ಇಲ್ಲ. ಜಾತಿಗಣತಿ ಬಗ್ಗೆ ಸಹ ಹೇಳಿದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ವಿಚಾರ ಹಾಗೂ ಬಿಜೆಪಿ ಪ್ರಚಾರಕನ್ನ ಇತ್ತೀಚಿಗೆ ಕಳುಹಿಸದ ವಿಚಾರದ ಬಗ್ಗೆ ಮಾತನಾಡಿದ ಅವರು  ಅವರ ಕಾರ್ಯವೈಕರಿಯಲ್ಲಿ ಹಸ್ತಕ್ಷೇಪ ಮಾಡಲ್ಲ. ಅದು ಅವರು ನಿರ್ಧಾರ ಮಾಡುತ್ತಾರೆ.ನಮ್ಮ ಸಂಬಂದ ಕೇವಲ ಸ್ವಯಂಸೇವಕರ ಸಂಬಂಧ. ನಮಗೆ ಬಿಜೆಪಿ ಒಂದೇಯಲ್ಲ 35 ಸಂಘಟನೆಗಳಿದೆ. ಅದೆಲ್ಲವೂ ಇಂಡಿಪೆಂಡೆಂಟ್ ಆರ್ಗನೈಜೇಷನ್ . ಅಧ್ಯಕ್ಷರನ್ನ ಅವರು ಆಯ್ಕೆ ಮಾಡಲು ಸದೃಢರಿದ್ದಾರೆ. ನಾವೇನು ಯಾವುದೇ ಪಟ್ಟಿ ಕಳಿಸೋದಿಲ್ಲ .ನಮ್ಮೊಂದಿಗೆ ಚರ್ಚಿಸಿ ಆಯ್ಕೆ ಮಾಡಬೇಕೆಂದಿಲ್ಲ. ನಮ್ಮನ್ನ ಚರ್ಚಿಸಿಯೇ ಆಯ್ಕೆ‌ ಮಾಡಬೇಕೆನ್ನುವಂತದ್ದೇನಿಲ್ಲ.ಪ್ರಚಾರಕರನ್ನ ಎಲ್ಲಾ ಸಂಘಟನೆಗಳಿಗೂ ಕಳಿಸಬೇಕಿದೆ. ಅಷ್ಟು ಪ್ರಚಾರಕ ಲಭ್ಯತೆ ಇಲ್ಲ ಎಂದು ತಿಳಿಸಿದ್ದಾರೆ.

ಎಸ್ ಸಿ ಪಿ ಟಿ ಎಸ್ ಪಿ ಕಾಯ್ದೆಯನ್ನ ಕೇಂದ್ರ ಸರ್ಕಾರವೂ ತರಲಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಇದು ಕೇಂದ್ರ ಬಿಜೆಪಿ ಉತ್ತರಿಸ ಬೇಕಾಗಿರುವುದು. ಅದರೆ ಸಮಾಜಕ್ಕೆ ಒಳಿತಗವುಂತಹ ಯಾವುದೇ ಕಾರ್ಯಕ್ರಮ ತಂದರು ನಾವು ವಿರೋಧಿಸೋದಿಲ್ಲ. ಸಂವಿಧಾನದ ಚೌಕಟ್ಟಿನ ಒಳಗೆ ಇದೆಯಾ ಎಂಬುದನ್ನ ನಾವು ನೋಡ ಬೇಕು. ಧಮನಿತರು ಶೋಷಿತರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನ ನಾವು ಸ್ವಾಗತಿಸುತ್ತೇವೆ. ಆದರೆ ಈ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಳ್ಳುತ್ತಿದೆ ಎಂಬುದನ್ನ ಸಹ ನಾವು ನೋಡಬೇಕು ಎಂದ್ರು.