ಮನೆ Latest News ಕೊಪ್ಪಳ ಗ್ಯಾಂಗ್ ರೇಪ್ ಪ್ರಕರಣ : ಇಬ್ಬರನ್ನು ಬಂಧಿಸಿದ್ದೇವೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೊಪ್ಪಳ ಗ್ಯಾಂಗ್ ರೇಪ್ ಪ್ರಕರಣ : ಇಬ್ಬರನ್ನು ಬಂಧಿಸಿದ್ದೇವೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್

0

ಕೊಪ್ಪಳ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಮಾರ್ಚ್ 6ರಂದು ನಾಲ್ವರು ತುಂಗಾಭದ್ರ ನದಿ  ಬಳಿ ಬರುವ ಹೋಮ್ ಸ್ಟೇನಲ್ಲಿ ಉಳಿದುಕೊಂಡಿದ್ರು. ಇಬ್ಬರು ವಿದೇಶಿಯರು, ಇಬ್ಬರು ಭಾರತೀಯರು ಇದ್ರು. ಊಟ ಆದ ಮೇಲೆ ಅಂದು ರಾತ್ರಿ ನಕ್ಷತ್ರ ವೀಕ್ಷಣೆಗೆ ತುಂಗಭದ್ರಾ ಎಡದಂಡೆ ನಾಲೆ ಬಳಿ ಹೋಗಿದ್ರು. ಗಿಟಾರ್ ಬಾರಿಸಿಕೊಂಡು, ಗಾಯನ ಮಾಡಿಕೊಂಡು ಇದ್ರು. ಮೂರು ಜನ ವ್ಯಕ್ತಿಗಳು ಮೋಟಾರ್ ಬೈಕಿನಲ್ಲಿ ಬಂದು ಪೆಟ್ರೋಲ್ ಸಿಗುತ್ತಾ ಅಂತ ಕೇಳಿದ್ರು.  ಈ ವೇಳೆ ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ನಡೆದಿದೆ. ಪೊಲೀಸರು ಆರೋಪಿಗಳನ್ನು ಮಾರ್ಚ್ 8 ರಂದು ಬಂಧಿಸಿದ್ದಾರೆ. ಮಲ್ಲೇಶ್ ಮತ್ತು ಚೇತನಾ ಸಾಯಿರಾಮ್ ಅನ್ನೋರ ಬಂಧನವಾಗಿದೆ. ಮೂರನೇಯವ ಸಿಕ್ಕಿಲ್ಲ. ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ ಎಂದಿದ್ದಾರೆ.

ಒಬ್ಬರು ಪ್ರವಾಸಿಗರ ಶರೀರ ನಾಲೆಯಲ್ಲಿ ಕೊಚ್ಚಿ ಹೋಗಿತ್ತು,  ಮೃತದೇಹ ಸಿಕ್ಕಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ತೇವೆ. ವಿದೇಶಿ ಪ್ರವಾಸಿಗರಿಗೆ ಚಿಕಿತ್ಸೆ, ನೆರವು, ಅವರ ದೇಶದ ರಾಯಭಾರ ಕಚೇರಿಗೆ ತಿಳಿಸುವ ಕೆಲಸ ಆಗ್ತಿದೆ . ಈ ದುರಂತ ಆಗಬಾರದಿತ್ತು, ಇಂತಹದ್ದೆಲ್ಲ ನಡೆದಾಗ ಪ್ರವಾಸಿಗರು ಬರಲು ಹಿಂಜರೀತಾರೆ. ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ಕೊಡಲು ಕ್ರಮ‌ ಕೈಗೊಳ್ಳಲು ಸೂಚನೆ ಕೊಡಲಾಗಿದೆ. ಆರೋಪಿಗಳಾದ ಮಲ್ಲೇಶ, ಚೇತನ್ ಗಂಗಾವತಿಯವ್ರು ಎಂದು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಮಾದಕ ವಸ್ತುಗಳ ಬಳಕೆ ಕಂಡುಬಂದಿಲ್ಲ. ನಕ್ಷತ್ರ ವೀಕ್ಷಣೆಗೆ ಯಾರಿಗೂ ಹೇಳದೇ ಹೋಗಿದ್ದಾರೆ. ನಿರ್ಜನ ಪ್ರದೇಶ ಆಗಿತ್ತು ಅದು ಅವರ ಪಾಡಿಗೆ ಅವರು ಗಾಯನ ಮಾಡಿಕೊಂಡು ಇದ್ದಾರೆ ಎಂದಿದ್ದಾರೆ. ಇದೇ ವೇಳೆ ಒಟ್ಟಾಗಿ ಹೋಗಿ ಎಂಬ ಮಲ್ಲಿಕಾರ್ಜುನ ಖರ್ಗೆಯವರಿಂದ ಕಿವಿಮಾತು ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್ ಮಲ್ಲಿಕಾರ್ಜುನ ಖರ್ಗೆಯವ್ರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾವೆಲ್ಲ ಒಟ್ಟಾಗಿಯೇ ಕೆಲಸ ಮಾಡ್ತಿದ್ದೀವಿ. ಸಚಿವರು, ಶಾಸಕರು ಒಟ್ಟಾಗಿಯೇ ಕೆಲಸ ಮಾಡ್ತಿದೀವಿ ಎಂದ್ರು.

ವಿನಯ್ ಕುಲಕರ್ಣಿ ಮನೆ ಮುಂದೆ ಐಶ್ವರ್ಯಾ ಗೌಡ ಬೆನ್ಜ್ ಕಾರು ಪತ್ತೆ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ಮಾಹಿತಿ ಇಲ್ಲ ಅಂದಿದ್ದಾರೆ. ರನ್ಯಾರಾವ್ ಪ್ರಕರಣ ಸಿಬಿಐಗೆ ಕೊಟ್ಟಿದ್ದಾರೆ ಅಂತಷ್ಟೇ ಪೇಪರ್ ನಲ್ಲಿ ನೋಡಿದೆ. ಸಿಬಿಐಗೆ ಕೊಟ್ಟಿದ್ರೆ ಅವ್ರು ತನಿಖೆ ಮಾಡ್ತಾರೆ. ಆದ್ರೆ ಸರ್ಕಾರಕ್ಕೆ ಸಿಬಿಐ ಅನುಮತಿ ಏನೂ ಕೇಳಿಲ್ಲ. ಡಿಆರ್‌ಐನವ್ರು ಕೊಟ್ಟಿರಬಹುದು, ನಮಗೇನೂ ಕೇಳಿಲ್ಲ ಎಂದಿದ್ದಾರೆ.