ಬೆಂಗಳೂರು: ಕಮ್ಯುನಲ್ ಕ್ರಿಮಿನಲ್ ಗಳಿಗೆ ಸಪೋರ್ಟ್ ಮಾಡುವ ರಾಜ ನೀತಿ ದೇಶಕ್ಕೆ ಅಪಾಯಕಾರಿ ಎಂದು ಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ.
ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಆರೋಪಿಗಳ ಕೇಸ್ ವಾಪಾಸ್ ಪಡೆದ ವಿಚಾರದ ಬಗ್ಗೆ ಮಾತನಾಡಿದ ಅವ್ರು ಕೇವಲ ರಾಜಕೀಯ ಲಾಭಕ್ಕೆ,ಕಮ್ಯುನಲ್ ಕ್ರಿಮಿನಲ್ ಗಳಿಗೆ ಸಪೋರ್ಟ್ ಮಾಡುವ ರಾಜ ನೀತಿ ದೇಶಕ್ಕೆ ಅಪಾಯಕಾರಿ. ಇದನ್ನ ಕಾಂಗ್ರೆಸ್ ಮುಂದುವರೆಸಿದೆ.ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿರೋರು ದೇಶ ಪ್ರೇಮಿಗಳಾ?ರೈತರ ಅಥವಾ ಕನ್ನಡ ಪ್ರೇಮಿಗಳಾ ? ಅವರು ಮತಾಂಧರು.ತಮ್ಮ ಮತೀಯ ವಿಚಾರಕ್ಕಾಗಿ ಸಣ್ಣ ಸಣ್ಣ ವಿಷಯಕ್ಕೂ ಕೋಮು ಗಲಭೆ ಎಬ್ಬಿಸುವ ಕ್ರಿಮಿನಲ್ ಗಳು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಪೋಲೀಸ್ ಠಾಣೆ ಮೇಲೆ ಬೆಂಕಿ ಹಾಕಲು ಬರ್ತಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡ್ತಾರೆ. ಅಂತವರ ಕೇಸ್ ವಾಪಾಸ್ ತೆಗೆದುಕೊಳ್ಳುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಇವರಿಗೆ ಯಾವುದರಲ್ಲಿ ಹೊಡಿಬೇಕು.ಇವರ ರಾಜನೀತಿಗೆ ಯಾವುದರಲ್ಲಿ ಹೊಡಿಬೇಕು.ಶಬ್ದಗಳಿಂದ ಖಂಡಿಸಿದರೆ ಸಾಕಾಗೋದಿಲ್ಲ. ಜನ ಮುಖಕ್ಕೆ ಮಂಗಳಾರತಿ ಮಾಡಬೇಕುಕ್ಯಾಕರಿಸಿ ಉಗಿಬೇಕು, ಇವರ ಕೆಟ್ಟ ಮನಸ್ಥಿತಿಯ ರಾಜಕಾರಣಕ್ಕೆ ನಿದರ್ಶನ ಇದು ಎಂದರು.
ಮುಸ್ಲಿಂ ಗುತ್ತಿಗೆದಾರರಿಗೆ 4% ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿ ನಮ್ಮ ಭಾರತದ ಸಂವಿಧಾನದ ರಚನೆ ವೇಳೆ ಮತೀಯ ಆಧಾರದ ಮೀಸಲಾತಿ ಬಗ್ಗೆ ಚರ್ಚೆ ನಡೆಯುತ್ತೆ..ಆಗ ಮುಸ್ಲಿಂರಿಗೆ ಮತೀಯ ಆಧಾರದ ಮೀಸಲಾತಿ ಕೊಡೊ ಬಗ್ಗೆ ಚರ್ಚೆಯಾಗುತ್ತೆ. ಆಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಳೆಎಳೆಯಾಗಿ ವಿವರಿಸುತ್ತಾರೆ
ಮತೀಯ ಆಧಾರದ ಮೀಸಲಾತಿಗೆ ಅವರು ಒಪ್ಪಿಗೆ ಕೊಡಲ್ಲ.ರಿಲಜೀಯಸ್ ಬೇಸ್ ಮೀಸಲಾತಿ ಸಂವಿಧಾನ ವಿರುದ್ಧ ವಾಗುತ್ತೆ.ಸಂವಿಧಾನಕ್ಕೆ ವಿರುದ್ದ ಇರುವವರು. ಅಂಬೇಡ್ಕರ್ ಚಿಂತನೆಗೆ ವಿರುದ್ಧ ಇರುವವರು.ಅಂತವರು ಮಾತ್ರ ಮತೀಯ ಆದಾರದ ಮೀಸಲಾತಿಗೆ ಯೋಚನೆ ಮಾಡ್ತಾರೆ ಎಂದರು.ಇದನ್ನ ನಾವು ಖಂಡಿಸುತ್ತೇನೆ. ಜಿನ್ನಾನ ಸಮರ್ಥನೆ ಮಾಡೋರು. ಪಾಕಿಸ್ತಾನ ಸಮರ್ಥನೆ ಮಾಡೊರು ಮಾತ್ರ ಇದನ್ನ ಪ್ರಸ್ತಾಪಿಸುತ್ತಾರೆ.
ಪಾಕಿಸ್ತಾನದ ಅಪ್ಪಂದಿರಿಗೆ ಹುಟ್ಟಿರೋರು ಮಾತ್ರ ಇದನ್ನ ಯೋಚಿಸುತ್ತಾರೆ.ಸಂವಿಧಾನ ಮೇಲೆ ನಂಬಿಕೆ ಇರುವವರು ಯಾರು ಇದನ್ನ ಯೋಚಿಸಲ್ಲ, ಪ್ರಸ್ತಾಪಿಸಲ್ಲ ಎಂದ್ರು
ಹಾಲಿನ ದರ ಏರಿಕೆ ಪ್ರಸ್ತಾಪ ವಿಚಾರದ ಬಗ್ಗೆ ಮಾತನಾಡಿ ಇದುವರೆಗೂ 656 ಕೋಟಿ ಹಣ ಹಾಲು ಉತ್ಪಾದಕರ ಸಬ್ಸಿಡಿ ಬ್ಯಾಲೆನ್ಸ್ ಇಟ್ಕೊಂಡಿದ್ದಾರೆ.ಈ ಸರ್ಕಾರ ಬಂದ ಮೇಲೆ 5 ರೂಪಾಯಿ ಹೆಚ್ಚಿಸಿದರು. ಬೆಲೆ ಏರಿಸ್ತಾರೆ ಗ್ರಾಹಕರಿಗೆ ಹೊರೆ ಮಾಡ್ತಾರೆ.ಬೆಲೆ ಹೆಚ್ಚಿಸಿ ಗ್ರಾಹಕರಿಗೆ ಮತ್ತು ಉತ್ಪಾದಕರಿಗೆ ಬರೆ ಹಾಕೋದಾದರೆ ನಮ್ಮ ವಿರೋಧ.
ಆದರೆ ಹಾಲು ಉತ್ಪಾದಕರಿಗೆ ಕೊಡ್ತಾ ಇಲ್ಲಬೆಲೆ ಏರಿಕೆ ಮಾಡಿ ಹಾಲು ಉತ್ಪಾದಕರಿಗೆ ಡೈರೆಕ್ಟರ್ ಟ್ರಾನ್ಸ್ಪರ್ ಮಾಡೊದಾದ್ರೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ರು