ಬೆಂಗಳೂರು; ಸಿಎಂಗೆ ಕಾಂಗ್ರೆಸ್ ಒಕ್ಕಲಿಗ ಸಚಿವರು, ಶಾಸಕರು, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ಧ ದೂರು ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಕಾನೂನಿನಂತೆ ಕ್ರಮ ಕೈಗೊಳ್ಳುವಂತಹದ್ದನ್ನು ಕೈಗೊಳ್ಳುತ್ತಾರೆ.ಇದರ ಸತ್ಯಾ ಸತ್ಯಾಸತ್ಯತೆ ತನಿಖೆಯಾಗಬೇಕು.ಎಫ್ ಎಸ್ ಎಲ್ ವರದಿ ಸರಿಯಾಗಿ ಮಾಡಬೇಕು.ಸರ್ಕಾರ ಪಕ್ಷ ರಾಜಕಾರಣ ಮಾಡದೇ ತನಿಖೆ ಮಾಡಬೇಕು. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ.ಮುನಿರತ್ನಗೆ ಒಂದು ನ್ಯಾಯ, ಚನ್ನಾರೆಡ್ಡಿ ಪಾಟೀಲ್ ಗೆ ಒಂದು ನ್ಯಾಯ, ಚಲುವರಾಯಸ್ವಾಮಿಗೆ ಒಂದು ನ್ಯಾಯ ಇಲ್ಲ. ಚನ್ನಾರೆಡ್ಡಿ ಪಾಟೀಲ್ ಮೇಲೆ ಕೇಸ್ ಆಗಿ 9೦ ದಿನ ಆದರೂ ಕ್ರಮ ಇಲ್ಲ.ಕಾಂಗ್ರೆಸ್ ನವರಿಗೆ ಒಂದು ಸಂವಿಧಾನ ಇದ್ಯಾ?ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಮುನಿರತ್ನ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ, ನಾವು ಸಮರ್ಥನೆ ಮಾಡಲ್ಲ.ಆದರೆ ಕಾನೂನು ಚನ್ನಾರೆಡ್ಡಿ ಪಾಟೀಲ್ ಗೆ ಒಂದೇ, ಮುನಿರತ್ನ ಗೆ ಒಂದೇ ಅಂತಾ ತೋರಿಸಬೇಕಿತ್ತು.ಸರ್ಕಾರ ಪೂರ್ವಾಗ್ರಹಪೀಡಿತರಾಗಿ ವರ್ತನೆ ಮಾಡುತ್ತಿದೆ ಎಂದಿದ್ದಾರೆ. ಇನ್ನು ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಮಾತಾಡಿದರೂ ಬಿಜೆಪಿ ಒಕ್ಕಲಿಗ ನಾಯಕರು ಮಾತಾಡುತ್ತಿಲ್ಲ ಎಂಬ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು ಈ ಚಲುವರಾಯಸ್ವಾಮಿ ಮತ್ತು ಪಾರ್ಟಿ ಪಾಕಿಸ್ತಾನ ಜಿಂದಾಬಾದ್ ಎಂದವರನ್ನೇ ಸಮರ್ಥನೆ ಮಾಡಿಕೊಂಡವರು, ಅದು ದ್ರೋಹ. ಕಾಂಗ್ರೆಸ್ ಪಾಕಿಸ್ತಾನ ಜಿಂದಾಬಾದ್ ಎಂದವರನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದೆ.ಎಫ್ ಎಸ್ ಎಲ್ ರಿಪೋರ್ಟ್ ಬಂದಿದೆಯೇನ್ರೀ?ತನಿಖಾ ವರದಿ ಬಂದ ಮೇಲೆ ತಾನೇ ಏನು ಅಂತಾ ಗೊತ್ತಾಗೋದು?ನಾವು ತಾರತಮ್ಯದ ವಿರುದ್ಧ ಧ್ವನಿ ಎತ್ತಿರುವುದು ಎಂದಿದ್ದಾರೆ.
ಗುತ್ತಿಗೆದಾರ ಚಲುವರಾಜುಗೆ ಶಾಸಕ ಮುನಿರತ್ನ ಅವಾಚ್ಯ ಶಬ್ದದಿಂದ ನಿಂದಿಸಿದ ಪ್ರಕರಣ; ಚಲುವರಾಜು ಭೇಟಿ ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು: ಗುತ್ತಿಗೆದಾರ ಚಲುವರಾಜುಗೆ ಶಾಸಕ ಮುನಿರತ್ನ ಅವಾಚ್ಯ ಶಬ್ದದಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಲುವರಾಜು ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಭಾರತ್ ನಗರದಲ್ಲಿರುವ ಚಲುವರಾಜು ಮನೆಗೆ ಭೇಟಿ ನೀಡಿ ಸಚಿವೆ ಲಕ್ಷ್ಮೀ ಹೆಬ್ಬಾಕ್ಳರ್ ಮಾತನಾಡಿದ್ದಾರೆ. ಇದೇ ವೇಳೆ ನಮ್ಮ ಪತಿ ಹಾಗೂ ನಮ್ಮ ಮನೆಗೆ ಭದ್ರತೆ ಕೊಡಿ ಎಂದು ಚೆಲುವರಾಜು ಪತ್ನಿ ಸಚಿವರ ಬಳಿ ಮನವಿ ಮಾಡಿದ್ದಾರೆ.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಚಲುವರಾಜು ಹಾಗು ಪತ್ನಿ ಕಣ್ಣೀರು ಹಾಕಿದ್ದಾರೆ.ಹಣಕ್ಕಾಗಿ ಹಿಂಸೆ ಕೊಟ್ಟಿದ್ದಾರೆ ಎಂದು ಚೆಲುವರಾಜು ಹೇಳಿದ್ದಾರೆ.
ನಾವು ನಿಮ್ಮ ಪರ ಇದ್ದೇವೆ, ಈಗಾಗಲೇ ಗೃಹ ಸಚಿವರ ಬಳಿ ಮಾತನಾಡಿದ್ದೇನೆ.ನಿಮ್ಮ ಭೇಟಿ ಮಾಡಿದ ನಂತ್ರ ಸಿಎಂ ಭೇಟಿ ಮಾಡ್ತೀನಿ.ರೂಮಿನಲ್ಲಿ ಚಿತ್ರ ಹಿಂಸೆ ಕೊಟ್ಟಿದ್ದಾರೆ.ರೇಣುಕಾಸ್ವಾಮಿಯನ್ನು ಹೊಡೆದು ಹಾಕಿದ್ದು ಮುನಿರತ್ನ ಬಾಮೈದ ಎಂದು ಮುನಿರತ್ನ ಪಟಾಲಂಗಳು ಭಯಪಡಿಸಿದ್ರು.ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದು ಯಾರು ಗೊತ್ತಾ ಅಂತ ಕೇಳ್ತಿದ್ರು.ನಿಮ್ಮ ಹೆಂಡತಿ ಫೋಟೋ ಕಳ್ಸಿ ಎಂದು ಫೋರ್ಸ್ ಮಾಡ್ತಿದ್ರು ಎಂದು ಸಂಪೂರ್ಣ ಘಟನೆಯನ್ನು ಸಚಿವೆಗೆ ಗುತ್ತಿಗೆದಾರ ಚಲುವರಾಜು ವಿವರಿಸಿದ್ದಾರೆ.
ಇನ್ನು ಗುತ್ತಿಗೆದಾರ ಚೆಲುವರಾಜು ನಿವಾಸದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ ಕಳೆದ 2-3 ದಿನಗಳಲ್ಲಿ ಮಾಧ್ಯಮಗಳಲ್ಲಿ ಬಂದಿದ್ದನ್ನು ಗಮನಿಸಿದ್ದೇನೆ .ಮುನಿರತ್ನರ ಬಗ್ಗೆ ರಾಜ್ಯದ ಜನತೆಗೆ ಬಿತ್ತರಿಸಿದ್ದೀರಿ.ಮಹಿಳೆಗೆ ಧೈರ್ಯ ತುಂಬಲು ಬಂದಿರುವೆ.ಸುಮಾರು ಜನ ನನಗೆ ಹೇಳಿದ್ರು, ತುಂಬಾ ಕೆಟ್ಟದಾಗಿ ಮಾತಾಡಿದ್ದಾರೆ ಎಂದು.ಸರ್ಕಾರ, ನಾವು ನಿಮ್ಮ ಜೊತೆಗೆ ಇದ್ದೇವೆ.ಸರ್ಕಾರ ತಮ್ಮ ಜೊತೆಗೆ ಇದ್ದೇವೆ ಎಂದು ಹೇಳಲು ಬಂದಿದ್ದೇವೆ .ನಾವು ರಾಜಕಾರಣಿಗಳು ಮಾಡೆಲ್, ಇಮೇಜ್ ಸೆಟ್ ಮಾಡಬೇಕು.ಇಂತಹ ರಾಜಕಾರಣಿಗಳಿಗೆ ಶೋಭೆ ತರಲ್ಲ.ಜಾತಿ ಹಿಡಿದು ಬೈಯೋದು ತರವಲ್ಲ.ಸರ್ಕಾರ ಕುಟುಂಬಕ್ಕೆ ಭದ್ರತೆ ನೀಡಲಿದೆ .ಸಿಎಂ ಭೇಟಿಯಾಗಿ, ಅವರ ಗಮನಕ್ಕೆ ತರುವೆ .ಸರ್ಕಾರ ಯಾವ ಪ್ರಕರಣದಲ್ಲಿ ಕ್ರಮ ತೆಗೆದುಕೊಂಡಿಲ್ಲ ಎಂದು ಬಿಜೆಪಿಯವರು ಹೇಳಲಿ.FSL ವರದಿ ಬರಲಿ, ನಿಷ್ಪಕ್ಷಪಾತ ತನಿಖೆ ಮಾಡ್ತೇವೆ.ಅಶೋಕಣ್ಣ ಬಹಳ ಬುದ್ದಿವಂತರು, ಅವರೂ ಅನ್ಯಾಯಕ್ಕೆ ಒಳಗಾದವರು.ಅನ್ಯಾಯ ಏನಾಗಿದೆ ಎಂದು ಅವರಿಗೂ ಗೊತ್ತಿದೆ ಎಂದಿದ್ದಾರೆ.