ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಸಹಿ ಇರೋ ದಾಖಲೆ ಪತ್ರವನ್ನು ಬೈರತಿ ಸುರೇಶ್ ಅವರು ಹೆಲಿಕಾಫ್ಟರ್ ನಲ್ಲಿ ವೈಟ್ನರ್ ಹಾಕಿ ತಿದ್ದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ನಾನು ಅದನ್ನ ನೋಡಿಲ್ಲ, ನೋಡಿದ ಮೇಲೆ ಹೇಳುತ್ತೇನೆ ಎಂದಿದ್ದಾರೆ. ಒಂದು ವೇಳೆ ಆ ರೀತಿ ಆಗಿದ್ರೇ ಈಗಾಗಲೇ ಎಸ್ಐಟಿ ತನಿಖೆ ಮಾಡ್ತಿದೆ.ಅದನ್ನ ಅವ್ರು ನೋಡ್ತಾರೆ ಎಂದಿದ್ದಾರೆ.
ಇನ್ನು ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ರಿಯ್ಯಾಕ್ಟ್ ಮಾಡಿದ ಅವರು ಈ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಕಾನೂನಿನಲ್ಲಿ ಆರೆಸ್ಟ್ ಮಾಡೋದಕ್ಕೆ ಅವಕಾಶ ಇದ್ರೇ ಮಾಡ್ತಾರೆ.ಇದಕ್ಕೆ ನೂರು ಜನರ ಅವಶ್ಯಕತೆ ಇಲ್ಲ.ಕಾನೂನಿದೆ.. ಕಾನೂನಿನ ಅಡಿಯಲ್ಲಿ ತನಿಖೆ ನಡೆಯಲಿದೆ ಎಂದಿದ್ದಾರೆ.
ಹಾಗೇ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಅವ್ರಿಗೆ ಪ್ರತಿಭಟನೆ ಮಾಡೋ ಹಕ್ಕಿದೆ ಅದಕ್ಕಾಗಿ ಮಾಡ್ತಾರೆ.ಅದಕ್ಕೆಲ್ಲಾ ನಾವೂ ಯಾರು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ.ಅವ್ರು ಪ್ರತಿಭಟನೆ ಮಾಡಲಿ ಎಂದಿದ್ದಾರೆ. ಇನ್ನು ಐವಾನ್ ಡಿ ಸೋಜ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅ ರೀತಿಯ ಅರ್ಥದಲ್ಲಿ ಹೇಳಿಲ್ಲ ಅನ್ನೋದನ್ನ ಅವರೇ ಸ್ಪಷ್ಟ ಪಡಿಸಿದ್ದಾರೆ.ಆ ಬಗ್ಗೆ ಹೆಚ್ಚು ಚರ್ಚೆ ಮಾಡೋ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನು ರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರ್ ನೀಡಿರುವ ಬಗ್ಗೆ ಮಾತನಾಡಿದ ಅವರು ಅವ್ರಿಗೆ ರಕ್ಷಣೆ ಬೇಕು ಅಂತಾ ಕೇಳಿದ್ದಾರೆ.ಅದಕ್ಕೆ ರಕ್ಷಣೆ ನೀಡಿದ್ದಾರೆ.ಯಾವ ಭಯವಿದೆ ಅನ್ನೋದು ರಾಜ್ಯಪಾಲರಿಗೆ ಕೇಳ ಬೇಕು.ಅವ್ರಿಗೆ ಈ ರೀತಿ ರಕ್ಷಣೆ ಬೇಕು ಅಂತಾ ಕೇಳಿದ್ದಾರೆ.ಇದಕ್ಕೆ ಬಿಜೆಪಿಯವರು ಇತ್ತೀಚಿನ ಬೆಳವಣಿಗೆಗಳೇ ಕಾರಣ.ಪದೇ ಪದೇ ಅನೇಕ ವಿಚಾರಗಳನ್ನ ಮಾಧ್ಯಮಗಳ ಮೂಲಕ ತರ್ತಿದ್ದಾರೆ.ದೇಸಾಯಿ ಕಮಿಷನ್ ಈಗಾಗಲೇ ತನಿಖೆ ಮಾಡ್ತಿದ್ದಾರೆ.ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡೋ ಬದಲು ಕಮಿಟಿ ಮುಂದೆ ತಿಳಿಸಲಿ, ಅದಕ್ಕೆ ಕಮಿಟಿ ವಿಚಾರಣೆ ಮಾಡಲಿದೆ ಎಂದಿದ್ದಾರೆ.
ಕುಮಾರಸ್ವಾಮಿ ಕಾನೂನು ಹೋರಾಟ ಮಾಡೋ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು ಮಾಡೋದಕ್ಕೆ ಯಾವುದೇ ತಡೆ ಇಲ್ಲ.ಅಲಿಗೇಷನ್ಸ್ ನ ಸರ್ಕಾರಿ ತನಿಖಾ ಸಂಸ್ಥೆಗಳು ತನಿಖೆ ಮಾಡಿ ಈ ರೀತಿ ಇದೆ ಅಂತ ಹೇಳಬಹುದು.ಡಾಕ್ಯುಮೆಂಟ್ ನ ಆಧಾರದ ಮೇಲೆ ಸರ್ಕಾರ ಒಂದು ನಿರ್ಧಾರಕ್ಕೆ ಬರಬಹುದು.ಲೋಕಾಯುಕ್ತದವರು ಯಾಕೆ ಪ್ರಾಸಿಕ್ಯೂಷನ್ ಗೆ ಕೇಳಿದ್ದಾರೆ.ಅವರು ತನಿಖೆ ಮಾಡುವಾಗ ಕಾನೂನು ವಿರುದ್ದವಾಗಿರುವ ತೀರ್ಮಾನ ಅಂತ ಪ್ರಾಸಿಕ್ಯೂಷನ್ಗೆ ಕೇಳಿದ್ದಾರೆ.ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ತಾರೆ ನೋಡಬೇಕು.ಕುಮಾರಸ್ವಾಮಿ ಹಾಗೂ ನಾಲ್ಕೈದು ಜನರ ಬಗ್ಗೆ ಕೇಳಿದೆ.ಅದನ್ನ ಕಾನೂನು ಬಾಹಿರ ಅಂದ್ರೆ ಹೇಗೆ?ಯಾವುದಕ್ಕೆ ಸಿಎಂ ನ ಸೇಫ್ ಮಾಡಬೇಕು..?ಸಿಎಂ ವೆರಿ ಸೇಫ್ , ನಾವು ಮೀಟಿಂಗ್ ಮಾಡಿದ್ರೆ ಸಿಎಂ ಸೇಫ್ ಮಾಡೋಕೆ ಹೊರಟಿದ್ದಾರೆ ಅಂತಾರೆ.ಅದರಲ್ಲಿ ಏನು ತಪ್ಪಿದೆ, ನಾವು ಅವರ ಜೊತೆ ಇದ್ದೇವೆ ಎಂದಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ದೆಹಲಿ ಹೋಗ್ತಿದ್ದಾರೆ. ಆದರೆ ನನ್ನನ್ನು ಹೈಕಮಾಂಡ್ ನನ್ನ ದೆಹಲಿಗೆ ಬರುವಂತೆ ಕರೆದಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ಬನ್ನಿ ನನ್ನ ಜೊತೆ ಅಂತಾ ಕರೆದರೆ ನಾನು ಹೋಗ್ತೇನೆ ಎಂದಿದ್ದಾರೆ.