ವಯನಾಡ್ ದುರಂತದಲ್ಲಿ ನಾಪತ್ತೆಯಾದವರಿಗೆ 10ನೇ ದಿನವಾದ ಇಂದು ಕೂಡ ಶೋಧ ಕಾರ್ಯಾಚರಣೆ ನಡೆಯಿತು. ಇದುವರೆಗೂ ದುರಂತಕ್ಕೆ 413 ಮಂದಿ ಬಲಿಯಾಗಿದ್ದು, ಇನ್ನೂ ಕೂಡ 152 ಮಂದಿ ನಾಪತ್ತೆಯಾಗಿದ್ದಾರೆ.
ಭಾರತೀಯ ಸೇನೆ, ಪೊಲೀಸರು, ಸ್ಥಳೀಯರು, ಸಂಘ ಸಂಸ್ಥೆಗಳ ನೆರವಿನಿಂದ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂದು 1 ಸಾವಿರಕ್ಕೂ ಹೆಚ್ಚು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ವಯನಾಡಿನ ಚಾಲಿಯಾರ್ ನದಿ ಹಾಗೂ ಮಲಪ್ಪುರಂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ರು. ಇನ್ನು ಕಾರ್ಯಾಚರಣೆಯ ಸಮಯದಲ್ಲಿ ಒಟ್ಟು 78 ಮೃತದೇಹಗಳು ಮತ್ತು 150ಕ್ಕೂ ಹೆಚ್ಚು ದೇಹದ ಭಾಗಗಳು ಪತ್ತೆಯಾಗಿವೆ ಎನ್ನಲಾಗಿದೆ. ನದಿಗಳಲ್ಲಿಯೂ ದೇಹದ ಭಾಗಗಳು ಪತ್ತೆಯಾಗಿದ್ದು, ಶವಗಳ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕೆಲವರು ತಮ್ಮ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿದ್ದು ಅಂತಹವರ ನೋವು ಹೇಳ ತೀರದಾಗಿದೆ. ಅದರಲ್ಲೂ ಕೆಲವರ ಕುಟುಂಬದ ಸದಸ್ಯರ ಮೃತದೇಹ ಕೂಡ ಪತ್ತೆಯಾಗಿಲ್ಲ. ಒಂದಷ್ಟು ಮಂದಿ ಶೋಧ ಕಾರ್ಯಾಚರಣೆ ನಡೆಯುವ ಜಾಗದಲ್ಲಿ ತಮ್ಮ ಮೃತಹೇದ ಸಿಗುತ್ತೋ ಏನೋ ಎಂದು ಕಾಯುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.
ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಸಾವು
ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಸಾವನ್ನಪ್ಪಿರೋದು ಇದೀಗ ಗೊತ್ತಾಗಿದೆ.ಇನ್ನು ಇದುವರೆಗೂ ಭೀಕರ ದುರಂತಕ್ಕೆ 400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನನೂ ಕೂಡ 200 ಕ್ಕೂ ಹೆಚ್ಚು ಮಂದಿಯ ಸುಳಿವು ಲಭ್ಯವಾಗಿಲ್ಲ. ಹೀಗಿರುವಾಗಲೇ ಇದೀಗ ಅತ್ಯಂತ ದುಃಖದ ವಿಚಾರವೊಂದು ಬಯಲಾಗಿದೆ. ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಕೊನೆಯುಸಿರೆಳೆದಿರೋದು ಗೊತ್ತಾಗಿದೆ.
ನೀತು ಜೊಜೊ ಎಂಬ ಮಹಿಳೆ ವಯನಾಡ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರಂತ ನಡೆದ ದಿನ ಅಂದರೆ ಜುಲೈ 30ರಂದು ಚೂರಲ್ ಮಲ ಗ್ರಾಮದಲ್ಲಿ ಭೂಕುಸಿತ ಆರಂಭವಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಡಾ. ಮೂಪೆನ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೊಬ್ಬರಿಗೆ ಕರೆ ಮಾಡಿ ತಮ್ಮನ್ನು ರಕ್ಷಿಸಿ ಎಂದು ರಾತ್ರಿ 1-15ರ ಸುಮಾರಿಗೆ ಆಕೆ ಕೇಳಿಕೊಂಡಿದ್ದಾರೆ.
ಕೂಡಲೇ ಅವರು ರಕ್ಷಣಾ ತಂಡಗಳಿಗೆ ಅವರು ಮಾಹಿತಿ ನೀಡಿ ನೆರವಿಗಾಗಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ದುರಂತ ಅಂದರೆ ಅಷ್ಟರಲ್ಲಿ ಒಂದಷ್ಟು ಜೀವ ಉಳಿಸಲು ಸಹಕರಿಸಿದ ನೀತು ಜೊಜೊ ಅವರು ಉಸಿರು ಚೆಲ್ಲಿದ್ದರು. ತಾವು ಅಪಾಯದಲ್ಲಿದ್ದರು ನೀತು ಜೊಜೊ ಮನೆಯಲ್ಲಿದ್ದ ತನ್ನ ಪತಿ, ಅತ್ತೆ ಹಾಗೂ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.ಅಷ್ಟರಲ್ಲಿ ಮನೆ ಕುಸಿದು ಬಿದ್ದಿದೆ. ಚೂರಲ್ಮಾಲಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಹೋಗಿದ್ದರಿಂದ ರಕ್ಷಣಾ ಸಿಬ್ಬಂದಿಗೆ ನೀತು ಅವರ ಮನೆಯನ್ನು ಸಕಾಲದಲ್ಲಿ ತಲುಪಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ನೀತು ಸಾವನ್ನಪ್ಪಿದ್ದರು. ನೀತು ಅವರ ಸಮಯಪ್ರಜ್ಞೆಯಿಂದ ಪತಿ ಜೊಜೊ, ಹಸುಗೂಸು ಹಾಗೂ ಅತ್ತೆ ಪಾರಾಗಿದ್ದಾರೆ. ಮೊನ್ನೆ ನೀತು ಮೃತದೇಹ ಪತ್ತೆಯಾಗಿದೆ. ಇನ್ನು ನೀತು ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಒಟ್ಟು ನಾಲ್ಕು ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಸಹಾಯಕ್ಕಾಗಿ ನೀತು ತಮ್ಮ ಸಹೋದ್ಯೋಗಿ ಬಳಿ ಮನವಿ ಮಾಡುತ್ತಿರುವ ಆಡಿಯೋ ಇದೀಗ ವೈರಲ್ ಆಗಿದೆ.