ಲೋಕಸಭಾ ಚುನಾವಣೆ, ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದ್ರ ನಡುವೆ ಎಕ್ಸಿಟ್ ಪೋಲ್ ಭವಿಷ್ಯ ಹೊರಬಿದ್ದಿದೆ. ಬಹುತೇಕ ಸಂಸ್ಥೆಗಳು, NDA ಮತ್ತೊಮ್ಮೆ ಅಧಿಕಾರಕ್ಕೇರುವ ಭವಿಷ್ಯ ನುಡಿದಿವೆ. INDIA ಸರಳ ಬಹುಮತ ಪಡೆಯೋದು ಕಷ್ಟ ಅಂತಿವೆ. ರಾಜ್ಯದ ವಿಚಾರಕ್ಕೆ ಬಂದ್ರೆ, ಬಿಜೆಪಿ ಮತ್ತೊಮ್ಮೆ 20ರ ಆಸುಪಾಸಿನ ಸಾಧನೆ ಮಾಡುತ್ತೆ ಅಂದ್ರೆ ಕಾಂಗ್ರೆಸ್ ಎರಡಂಕಿ ದಾಟಲ್ಲ ಅನ್ನೋದು ಎಕ್ಸಿಟ್ ಪೋಲ್ ಭವಿಷ್ಯ. ಇದ್ರ ನಡುವೆ ಒಂದು ಸಂಸ್ಥೆ ಕಾಪ್ಸ್, ಬಿಜೆಪಿಗೆ 15 ಸ್ಥಾನ ನೀಡಿದ್ರೆ, ಕಾಂಗ್ರೆಸ್ಗೆ 11 ಜೆಡಿಎಸ್ಗೆ 2 ಸ್ಥಾನ ನೀಡಿದೆ. ಜೊತೆಗೆ ಯಾವ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಸೋಲು ಯಾರಿಗೆ ಗೆಲುವು ಅನ್ನೋದ್ರ ಭವಿಷ್ಯವನ್ನು ನುಡಿದಿದೆ. ಹಾಗಾದ್ರೆ ಕಾಪ್ಸ್ ಸಂಸ್ಥೆ ಭವಿಷ್ಯ ಏನ್ ಹೇಳ್ತಿದೆ ಯಾವ ಕ್ಷೇತ್ರದಲ್ಲಿ ಯಾರಿಗೆ ಸೋಲು, ಯಾರಿಗೆ ಗೆಲುವು ಅನ್ನೋದ್ರ ವಿವರ ಇಲ್ಲಿದೆ.
ಬಿಜೆಪಿ ಗೆಲುವು
——————-
ಉಡುಪಿ-ಚಿಕ್ಕಮಗಳೂರು- ಕೋಟಾ ಶ್ರೀನಿವಾಸ್ ಪೂಜಾರಿ
ದಕ್ಷಿಣ ಕನ್ನಡ – ಬ್ರಿಜೇಶ್ ಚೌಟ
ಬಾಗಲಕೋಟೆ- ಗದ್ದಿಗೌಡರ್
ವಿಜಯಪುರ- ರಮೇಶ್ ಜಿಗಜಿಣಗಿ
ಹಾವೇದಿ ಗದಗ – ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ ಧಾರವಾಡ – ಪ್ರಹ್ಲಾದ್ ಜೋಶಿ
ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ
ಶಿವಮೊಗ್ಗ – ಬಿ.ವೈ ರಾಘವೇಂದ್ರ
ತುಮಕೂರು – ವಿ.ಸೋಮಣ್ಣ
ಮೈಸೂರು – ಯದುವೀರ್
ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್ ಮಂಜುನಾಥ್
ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
ಚಿಕ್ಕಬಳ್ಳಾಪುರ – ಡಾ.ಕೆ ಸುಧಾಕರ್
ಕಾಂಗ್ರೆಸ್ ಗೆಲುವು
———————–
ಚಿಕ್ಕೋಡಿ – ಪ್ರಿಯಾಂಕ ಜಾರಕಿಹೊಳಿ
ಬೆಳಗಾವಿ – ಜಗದೀಶ್ ಶೆಟ್ಟರ್
ಕಲ್ಬುರ್ಗಿ – ರಾಧಾಕೃಷ್ಣ ದೊಡ್ಡಮನಿ
ರಾಯಚೂರು- ಕುಮಾರ್ ನಾಯಕ್
ಬೀದರ್ – ಸಾಗರ್ ಖಂಡ್ರೆ
ಕೊಪ್ಪಳ- ರಾಜಶೇಖರ್ ಹಿಟ್ನಾಳ್
ಬಳ್ಳಾರಿ – ಶ್ರೀರಾಮುಲು
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
ಹಾಸನ – ಶ್ರೇಯಸ್ ಪಟೇಲ್
ಚಿತ್ರದುರ್ಗ – ಬಿ.ಎನ್ ಚಂದ್ರಪ್ಪ
ಚಾಮಜರಾನಗರ- ಸುನೀಲ್ ಭೋಸ್
ಜೆಡಿಎಸ್ ಗೆಲುವು
———————–
ಮಂಡ್ಯ – ಕುಮಾರಸ್ವಾಮಿ
ಕೋಲಾರ- ಮಲ್ಲೇಶ್ ಬಾಬು
ಇದು ಕಾಪ್ಸ್ ಸಂಸ್ಥೆ ಎಕ್ಸಿಟ್ ಪೋಲ್ ಭವಿಷ್ಯ, ಬಿಜೆಪಿ 15 ಕಾಂಗ್ರೆಸ್ 11 ಜೆಡಿಎಸ್ 2 ಅಂತಾ ಭವಿಷ್ಯ ನುಡಿದಿದ್ದಾರೆ. ಅದ್ರಲ್ಲಿ ಪ್ರಜ್ವಲ್ ರೇವಣ್ಣಗೆ ಸೋಲು ಎನ್ನುವ ಸಂಗತಿ ಗಮನ ಸೆಳಿತಿದೆ. ಒಟ್ಟಾರೆ ಫಲಿತಾಂಶಕ್ಕೆ ನಾಳೆವರೆಗೆ ಕಾದು ನೋಡಬೇಕು.